
ತಲೆನೋವು
‘ಸೂತಶೇಖರ ರಸ’ ಈ ಔಷಧದ ಒಂದು ಗುಳಿಗೆಯನ್ನು ಸಣ್ಣದಾಗಿ ಪುಡಿ ಮಾಡಬೇಕು. (ಒಂದು ತಟ್ಟೆಯಲ್ಲಿ ಗುಳಿಗೆಯನ್ನಿಟ್ಟು ಅದರ ಮೇಲೆ ಲೋಟದಿಂದ ಅಥವಾ ಬಟ್ಟಲಿನಿಂದ ಒತ್ತಿದರೆ ಗುಳಿಗೆಯು ಪುಡಿಯಾಗುತ್ತದೆ.) ಈ ಚೂರ್ಣವನ್ನು ನಾಶಿ ಪುಡಿಯನ್ನು ಸೆಳೆಯುವಂತೆ ಮೂಗಿನಲ್ಲಿ ಸೆಳೆಯಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ಚಮಚದಷ್ಟು ತೆಳುವಾದ ತುಪ್ಪದಲ್ಲಿ ಈ ಗುಳಿಗೆಯ ಪುಡಿಯನ್ನು ಸೇರಿಸಬೇಕು. ಅಂಗಾತ ಮಲಗಿ ಈ ತುಪ್ಪದಲ್ಲಿ ಮಿಶ್ರಣಗೊಂಡ ಔಷಧಿಯ ೨ – ೨ ಹನಿಗಳನ್ನು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹಾಕಿ ೨ ನಿಮಿಷ ಮಲಗಬೇಕು. ಅನಂತರ ಎದ್ದು ತುಪ್ಪದಲ್ಲಿ ಮಿಶ್ರಿತಗೊಂಡ ಉಳಿದ ಔಷಧವನ್ನು ನೆಕ್ಕಿ ತಿನ್ನಬೇಕು.’
ಸನಾತನದ ‘ಸೂತಶೇಖರ ರಸ’ ಈ ಔಷಧಿಯು ಈಗ ಲಭ್ಯವಿದೆ. ಇತರ ರೋಗಗಳಲ್ಲಿ ಇದರ ವಿವರವಾದ ಬಳಕೆಯ ಬಗ್ಗೆ ಅದರ ಡಬ್ಬದ ಜೊತೆಗಿರುವ ಕರಪತ್ರದಲ್ಲಿ ನೀಡಲಾಗಿದೆ. ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.
ಮಲಬದ್ಧತೆ
‘ಮಲಬದ್ಧತೆಗಾಗಿ ಗಂಧರ್ವ ಹರಿತಕಿ ವಟಿ’ ಈ ಔಷಧದ ೨ ರಿಂದ ೪ ಗುಳಿಗೆಗಳನ್ನು ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಇದರೊಂದಿಗೆ ಹಸಿವಾಗದಿರುವುದು, ಭೋಜನ ಬೇಡವೆನಿಸುವುದು, ಅಪಚನವಾಗುವುದು, ಹೊಟ್ಟೆಯಲ್ಲಿ ವಾಯು (ಗ್ಯಾಸ್) ಆಗುವುದು, ಈ ಲಕ್ಷಣಗಳಿದ್ದರೆ ‘ಲಶುನಾದಿ ವಟಿ’ ಈ ಔಷಧದ ೧-೨ ಗುಳಿಗೆಗಳನ್ನು ಎರಡು ಬಾರಿಯ ಭೋಜನದ ೧೫ ನಿಮಿಷಗಳ ಮೊದಲು ಜಗಿದು ತಿನ್ನಬೇಕು. ಇದರಿಂದ ಪಾಚಕ ಸ್ರಾವವು ನಿರ್ಮಾಣವಾಗುತ್ತದೆ. ಮಲಬದ್ಧತೆಯಲ್ಲಿ ಈ ಚಿಕಿತ್ಸೆಯನ್ನು ೧೫ ದಿನ ಮಾಡಬೇಕು.’
ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.
ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೭.೨೦೨೨)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!