‘ರಂಗೋಲಿ’ ಸಾತ್ತ್ವಿಕತೆ ಮತ್ತು ಮಾಂಗಲ್ಯದ ಪ್ರತೀಕವಾಗಿದೆ !

ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿಗಳು

ಶ್ರೀ ಲಕ್ಷ್ಮಿದೇವಿ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿ

 

ಶ್ರೀ ದುರ್ಗಾದೇವಿಯ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿ

ರಂಗೋಲಿ ಹಾಕುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ

ನೆಲವನ್ನು ಕಸಬರಿಕೆಯಿಂದ ಗುಡಿಸುವಾಗ ಅಥವಾ ಸೆಗಣಿಯಿಂದ ಸಾರಿಸುವಾಗ ನೆಲದಲ್ಲಿ ಸೂಕ್ಷ್ಮ ರೇಖೆಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರ, ಕಣ್ಣು ಮತ್ತು ಮನಸ್ಸಿಗೆ ಹಾನಿಕರವಾಗಿರುತ್ತವೆ. ಈ ಸ್ಪಂದನಗಳನ್ನು ದೂರಗೊಳಿಸಲು ಸಾರಿಸಿದ ನೆಲದ ಮೇಲೆ ರಂಗೋಲಿಯಿಂದ ಶುಭಚಿಹ್ನೆಗಳನ್ನು ಬಿಡಿಸುತ್ತಾರೆ. ಇದರಿಂದ ನೆಲದ ಮೇಲೆ ಅಶುಭ ಸ್ಪಂದನಗಳು ದೂರವಾಗಿ ಶುಭ ಪರಿಣಾಮಗಳಾಗುತ್ತವೆ.

ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಏಕೆ ಬಿಡಿಸಬೇಕು?

ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ದೇವತೆಯ ತತ್ತ್ವ ವಾಯು ಮಂಡಲದಲ್ಲಿ ಮತ್ತು ಜೀವಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತದೆ.

ರಂಗೋಲಿಯನ್ನು ಹಾಕಿದ ನಂತರ ಅದಕ್ಕೆ ಅರಿಶಿನ-ಕುಂಕುಮವನ್ನು ಏಕೆ ಅರ್ಪಿಸಬೇಕು?

ರಂಗೋಲಿಯಲ್ಲಿರುವ ಬಿಳಿ ಕಣಗಳಲ್ಲಿ ಈಶ್ವರೀ ತತ್ತ್ವದ ಲಹರಿಗಳನ್ನು ಆಕರ್ಷಿಸುವ ಕ್ಷಮತೆ ಇರುತ್ತದೆ, ಆದರೆ ಬಿಳಿ ಬಣ್ಣವು ನಿಷ್ಕ್ರಿಯತೆಗೆ ಸಂಬಂಧಿಸಿರುವುದರಿಂದ ರಂಗೋಲಿಗೆ ವೇಗವು ಪ್ರಾಪ್ತವಾಗುವುದಿಲ್ಲ. ಕುಂಕುಮದಿಂದ ಬ್ರಹ್ಮಾಂಡದಲ್ಲಿನ ಶ್ರೀದುರ್ಗಾದೇವಿಯ ಪ್ರಕಟಶಕ್ತಿ ಮತ್ತು ಅರಶಿನದಿಂದ ಗಣೇಶತತ್ತ್ವವು ಕಾರ್ಯನಿರತವಾಗುತ್ತದೆ. ಇದರಿಂದ ರಂಗೋಲಿಯಲ್ಲಿ ಆಕರ್ಷಿತವಾದ ಈಶ್ವರೀತತ್ತ್ವಕ್ಕೆ ಚಲನೆಯು ಪ್ರಾಪ್ತವಾಗಿ ವಾಯು ಮಂಡಲದಲ್ಲಿನ ದೂಷಿತ ಸ್ಪಂದನ ಮತ್ತು ಕಣಗಳು ವಿಘಟನೆಯಾಗುತ್ತವೆ.

(ಆಧಾರ: ಸನಾತನ ನಿರ್ಮಿತ ಗ್ರಂಥ ‘ದೇವರ ಪೂಜೆಯ ಪೂರ್ವತಯಾರಿ’)