ದೇವಾಲಯದ ಹೊರಗೆ ಜನರು ಕ್ರಿಕೆಟ್ ಆಡುವುದನ್ನು ತಡೆದಿದ್ದಕ್ಕೆ ಹಲ್ಲೆ
ದೇವಬಂದ್ (ಉತ್ತರ ಪ್ರದೇಶ) – ಇಲ್ಲಿನ ರಾಮಲೀಲಾ ಮೈದಾನದಲ್ಲಿರುವ ಶ್ರೀ ಬಾಲಾಜಿ ಧಾಮ್ ದೇವಾಲಯದ ಹೊರಗೆ ಮುಸ್ಲಿಂ ಮಕ್ಕಳಿಗೆ ಕ್ರಿಕೆಟ್ ಆಡುತ್ತಿರುವಾಗ ತಡೆದ ನಂತರ ಮುಸ್ಲಿಮರು ನಡೆಸಿದ ಕಲ್ಲು ತೂರಾಟದಲ್ಲಿ, ದೇವಾಲಯದ 2 ಸೇವಕರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ, ಬಜರಂಗದಳದ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆ ಏಪ್ರಿಲ್ 19 ರ ಸಂಜೆ ಸಂಭವಿಸಿದೆ.
ಕ್ರಿಕೆಟ್ ಆಡುತ್ತಿರುವಾಗ, ಚೆಂಡು ದೇವಸ್ಥಾನದ ಒಳಗೆ ಹೋಯಿತು. ದೇವಸ್ಥಾನದ ಸೇವಕರು ಹೊರಬಂದು ಮಕ್ಕಳು ಇಲ್ಲಿ ಆಟವಾಡುವುದನ್ನು ತಡೆದರು. (ಒಂದು ವೇಳೆ ಹಿಂದೂ ಮಕ್ಕಳು ಮಸೀದಿಯ ಹೊರಗೆ ಕ್ರಿಕೆಟ್ ಆಡುತ್ತಿದ್ದು ಮತ್ತು ಚೆಂಡು ಮಸೀದಿಯೊಳಗೆ ಹೋಗಿದ್ದರೆ, ಮುಸ್ಲಿಮರು ಅವರಿಗೆ ಕ್ರಿಕೆಟ್ ಆಡಲು ಬಿಡುತ್ತಿದ್ದರಾ? – ಸಂಪಾದಕರು) ಈ ಬಗ್ಗೆ ವಾದ ನಡೆದ ನಂತರ ಉದ್ವಿಗ್ನತೆ ಉಂಟಾಯಿತು. ರಾತ್ರಿ 11 ಗಂಟೆ ಸುಮಾರಿಗೆ 35 ರಿಂದ 40 ಮುಸ್ಲಿಮರ ಗುಂಪು ಅಲ್ಲಿ ಜಮಾಯಿಸಿ ಕಲ್ಲು ಎಸೆಯಲು ಪ್ರಾರಂಭಿಸಿದರು. ಇದರಲ್ಲಿ ದೇವಾಲಯದ ಸೇವಕರಾದ ವಿಜಯ ಪ್ರಜಾಪತಿ ಮತ್ತು ಅಂಶ್ ಶರ್ಮಾ ಗಾಯಗೊಂಡರು.