ಡಾ. ಅಂಬೇಡಕರ ಅವರ ಪ್ರತಿಮೆಗೆ ಸಗಣಿ ಬಳಿದು ಮತ್ತು ಚಪ್ಪಲಿ ಹಾರ ಹಾಕಿ ಅವಮಾನ!

ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ನಡೆದ ಘಟನೆ!

ಮೈಸೂರು – ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡಕರ ಅವರ ಜಯಂತಿಯ ಅಂಗವಾಗಿ ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡಕರ ಅವರ ಪ್ರತಿಮೆಗೆ ಸಗಣಿ ಬಳಿದು, ಚಪ್ಪಲಿ ಹಾರ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಇದರೊಂದಿಗೆ ಗ್ರಾಮದಲ್ಲಿ ಹಾಕಲಾಗಿದ್ದ ಅವರ ಫಲಕಗಳನ್ನು ಸಹ ಹರಿದು ಹಾಕಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. (ತಾವೇ ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ನಿಜವಾದ ಮುಖ ಬಯಲು! – ಸಂಪಾದಕರು) ವಾಜಮಂಗಲದ ಸಿದ್ಧಾರ್ಥ ಯುವಕ ಸಂಘವು ಏಪ್ರಿಲ್ ೧೪ ರಂದು ಡಾ. ಬಾಬಾಸಾಹೇಬ ಅಂಬೇಡಕರ ಅವರ 134 ನೇ ಜಯಂತಿಯನ್ನು ಆಚರಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ಡಾ. ಅಂಬೇಡಕರ ಅವರ ಫಲಕಗಳು ಮತ್ತು ‘ಕಟೌಟ್’ಗಳನ್ನು ಹರಿದು ಹಾಕಲಾಗಿದ್ದು, ಅವುಗಳಿಗೆ ಸಗಣಿ ಬಳಿಯಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿಟ್ಟುಕೊಂಡು ತಿರುಗುವ ಕಾಂಗ್ರೆಸ್ಸಿಗರ ರಾಜ್ಯದಲ್ಲಿ ಡಾ. ಅಂಬೇಡಕರ ಅವರಿಗೆ ಅವಮಾನ!