Congress Party President Statement : ಪ್ರಧಾನಿ ಮೋದಿ ಅವರ ಮಹಮ್ಮದ ಯೂನುಸ್ ಅವರೊಂದಿಗಿನ ಭೇಟಿ ವಿಫಲ! – ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ಗೆ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಅರಿವಿದೆ!

ನವ ದೆಹಲಿ – ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ನಮ್ಮ ಹಿಂದೂ ಸಹೋದರ ಸಹೋದರಿಯರು ನಿರಂತರವಾಗಿ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಅಲ್ಲಿ ಅಲ್ಪಸಂಖ್ಯಾತರ ಮೇಲೆ ಸತತ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ ನಾಯಕ ಭಾಬೇಶ ಚಂದ್ರ ರಾಯ್ ಅವರ ಹತ್ಯೆಯು ನರೇಂದ್ರ ಮೋದಿ ಅವರ ಬಾಂಗ್ಲಾದೇಶದ ಮುಖ್ಯ ಸಲಹೆಗಾರರೊಂದಿಗಿನ ಸಭೆಯು ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ, ಎಂದು ಕಾಂಗ್ರೆಸ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಪ್ರಸಾರ ಮಾಡುವ ಮೂಲಕ ಟೀಕಿಸಿದ್ದಾರೆ.

ಖರ್ಗೆ ಅವರು ಮಾತು ಮುಂದುವರೆಸಿ, ಭಾರತ ಸರಕಾರವು ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ, ಕಳೆದ 2 ತಿಂಗಳಲ್ಲಿ ಹಿಂದೂಗಳ ಮೇಲೆ 76 ದಾಳಿಗಳು ನಡೆದಿವೆ, ಇದರಲ್ಲಿ 23 ಹಿಂದೂಗಳನ್ನು ಕೊಲ್ಲಲಾಗಿದೆ. ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆಯೂ ದಾಳಿಗಳು ಮುಂದುವರೆದಿವೆ. ಇತ್ತೀಚೆಗೆ ಬಾಂಗ್ಲಾದೇಶದ ಮುಖ್ಯ ಸಲಹೆಗಾರರು ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಅತ್ಯಂತ ಖಂಡನೀಯ ಮತ್ತು ನಿರಾಶಾದಾಯಕ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು 1971 ರ ವಿಮೋಚನಾ ಯುದ್ಧದ ನೆನಪುಗಳನ್ನು ಅಳಿಸಿಹಾಕುವ ಪ್ರಯತ್ನವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದುರ್ಬಲಗೊಳಿಸುವ ಒಂದು ರೂಪವಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶವಿರಲಿ ಅಥವಾ ಬಂಗಾಳವಿರಲಿ, ಹಿಂದೂಗಳ ರಕ್ಷಣೆಗಾಗಿ ಕಾಂಗ್ರೆಸ ಮಾತನಾಡುವುದು ಕೇವಲ ಮೊಸಳೆ ಕಣ್ಣೀರು ಆಗಿದೆ!