ಭಟ್ಕಳದಲ್ಲಿ ಗಬ್ಬಾದ ಹಸುವನ್ನು ಕೊಂದ ಇಬ್ರಾಹಿಂ ಮಹಮ್ಮದ್ ಬಂಧನ

ಭಟ್ಕಳ – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಪುರ ಕುಕನಿರ್‌ನಲ್ಲಿ ಗಬ್ಬಾದ ಹಸುವನ್ನು ನಿರ್ದಯವಾಗಿ ಕೊಂದು ಹೊಟ್ಟೆಯಲ್ಲಿದ್ದ ಕರುವನ್ನ ನದಿಗೆ ಎಸೆದಿದ್ದ ಇಬ್ರಾಹಿಂ ಮಹಮ್ಮದ್ (45 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಮಹಮ್ಮದ್ ಕರುವನ್ನ ಗೋಣಿಚೀಲದಲ್ಲಿ ಸುತ್ತಿ ವೆಂಕಟಾಪುರ ನದಿಗೆ ಎಸೆದಿದ್ದ ಮತ್ತು ಗೋಮಾಂಸವನ್ನು ಕದ್ದಿದ್ದ. ದಡದಲ್ಲಿ ಬೀದಿ ನಾಯಿಗಳು ಚೀಲವನ್ನು ಎಳೆಯುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಅವರಿಗೆ ಅದರಲ್ಲಿ ಸತ್ತ ಕರು ಕಂಡುಬಂದಿದೆ. ಅದರೊಂದಿಗೆ ಅವರಿಗೆ ಹಸುವಿನ ಬಾಲ ಸಹ ಸಿಕ್ಕಿದೆ. ಸ್ಥಳೀಯರು ತಕ್ಷಣ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು ಮತ್ತು ಏಪ್ರಿಲ್ 19 ರ ಸಂಜೆ ಭಟ್ಕಳದಲ್ಲಿ ಇಬ್ರಾಹಿಂ ಮಹಮ್ಮದ್‌ನನ್ನು ಬಂಧಿಸಲಾಯಿತು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.