ಸಾಗರದಲ್ಲಿ ‘ಸಿಇಟಿ’ ಪರೀಕ್ಷೆ ಬರೆಯಲು ವಿದ್ಯಾರ್ಥಿಯ ಜನಿವಾರ ಕಟ್ !

ಸಾಗರ – ಬೀದರ ಮತ್ತು ಶಿವಮೊಗ್ಗದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ‘ಸಿಇಟಿ’ ಪರೀಕ್ಷೆ ಬರೆಯಲು ನಿರಾಕರಿಸಿದ ಘಟನೆಗಳ ನಂತರ, ಈಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿದ್ಯಾರ್ಥಿಯ ಜನಿವಾರವನ್ನು ಕತ್ತರಿಸಿದ ಘಟನೆ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಸಾಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಗರ ತಾಲೂಕಿನ ಹಳೆಇಕ್ಕೆರಿ ಗ್ರಾಮದ ಶ್ರೀನಿವಾಸ ರಾವ ಅವರ ಪುತ್ರ ಪಾರ್ಥನು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸಿಇಟಿ’ ಪರೀಕ್ಷೆ ಬರೆಯಲು ಹೋಗಿದ್ದನು. ಪರೀಕ್ಷಾ ಕೊಠಡಿಯ ಹೊರಗಿದ್ದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗ ಅವನ ಜನಿವಾರವನ್ನು ನೋಡಿ, ‘ನೀನು ಬ್ರಾಹ್ಮಣನೇ?’ ಎಂದು ಕೇಳಿದರು. ‘ಪರೀಕ್ಷೆ ಬರೆಯಬೇಕಾದರೆ ಜನಿವಾರವನ್ನು ತೆಗೆಯಬೇಕು’ ಎಂದು ಅವರು ಹೇಳಿದರು. ವಿದ್ಯಾರ್ಥಿ ವಿರೋಧಿಸಿದರೂ, ಅವನ ಜನಿವಾರವನ್ನು ಕತ್ತರಿಸಿ ಅವನನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದರು. ವಿದ್ಯಾರ್ಥಿ ಅನಿವಾರ್ಯವಾಗಿ ಮತ್ತು ಬೇಸರದಲ್ಲಿ ಪರೀಕ್ಷೆ ಬರೆದು ಮನೆಗೆ ಬಂದ ನಂತರ ಈ ವಿಷಯವನ್ನು ತಿಳಿಸಿದನು. ಈ ಘಟನೆಗೆ ಕಾರಣರಾದ ಭದ್ರತಾ ಸಿಬ್ಬಂದಿ, ಪರೀಕ್ಷಾ ಮೇಲ್ವಿಚಾರಕರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.