BJP MP Nishikant Dubey Statement : ಸುಪ್ರೀಂ ಕೋರ್ಟ್ ಕಾನೂನು ಮಾಡಿದರೆ ಸಂಸತ್ತನ್ನೇ ಮುಚ್ಚಬೇಕು! – ಭಾಜಪ ಸಂಸದ ನಿಶಿಕಾಂತ ದುಬೆ

ವಕ್ಫ್ ಸುಧಾರಣಾ ಕಾನೂನಿನ ಕುರಿತು ಭಾಜಪ ಸಂಸದ ನಿಶಿಕಾಂತ ದುಬೆ ಇವರ ಹೇಳಿಕೆ

ನವದೆಹಲಿ – ಕಾನೂನು ರೂಪಿಸುವುದು ಸುಪ್ರೀಂ ಕೋರ್ಟ್‌ನ ಏಕೈಕ ಕೆಲಸವಾಗಿದ್ದರೆ, ಸಂಸತ ಭವನವನ್ನು ಮುಚ್ಚಬೇಕು ಎಂದು ಭಾಜಪದ ಜಾರ್ಖಂಡ ಸಂಸದ ನಿಶಿಕಾಂತ ದುಬೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ವಕ್ಫ್ ಸುಧಾರಣಾ ಕಾನೂನಿನ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಕಾನೂನಿನ ವಿಚಾರಣೆಗೆ ಮುನ್ನ ಕೇಂದ್ರ ಸಚಿವ ಕಿರಣ ರಿಜಿಜೂ ಕಾನೂನು ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ನಾವು ಪರಸ್ಪರ ಗೌರವಿಸಬೇಕು. ನಾಳೆ ಸರಕಾರವು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡಿದರೆ, ಅದು ಒಳ್ಳೆಯದಾಗುವುದಿಲ್ಲ. ಅಧಿಕಾರ ವಿಭಜನೆಯನ್ನು ಸರಿಯಾಗಿ ನಿರ್ಧರಿಸಲಾಗಿದೆ ಎಂದು ಹೇಳಿದ್ದರು.