ಸಾಗರ (ಮಧ್ಯಪ್ರದೇಶ) ಇಲ್ಲಿನ ಘಟನೆ
ಸಾಗರ (ಮಧ್ಯಪ್ರದೇಶ) – ಸಾಗರ ಜಿಲ್ಲೆಯ ಸನೋಧ ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಅಪಹರಿಸಿದ್ದರಿಂದ ಹಿಂಸಾಚಾರ ಸಂಭವಿಸಿದೆ. ಆಕ್ರೋಶಿತ ಗುಂಪೊಂದು ಅಂಗಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು. ಪ್ರಸ್ತುತ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮೂಲಗಳ ಪ್ರಕಾರ, ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅದಕ್ಕೂ ಮುನ್ನ ಈ ಮುಸ್ಲಿಂ ಯುವಕ ಆಕೆಯನ್ನು ಅಪಹರಿಸಿದ್ದಾನೆ.
1. ಸ್ಥಳೀಯ ಶಾಸಕ ಪ್ರದೀಪ ಲಾರಿಯಾ ಅವರು ಮಾತನಾಡಿ, ಈ ಮುಸ್ಲಿಂ ಯುವಕ ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ ಎಂದು ಹೇಳಿದ್ದಾರೆ.
2. ಭಾಜಪ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಅವರು ಮಾತನಾಡಿ, ಲವ್ ಜಿಹಾದ್ನಲ್ಲಿ ಭಾಗಿಯಾಗಿ ತಮ್ಮ ಗುರುತನ್ನು ಮರೆಮಾಚಿ ಹಿಂದೂ ಹುಡುಗಿಯರನ್ನು ದಾರಿ ತಪ್ಪಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನು ತನ್ನ ಕೆಲಸ ಮಾಡುತ್ತದೆ. ಭಾಜಪ ಸರಕಾರವಿದೆ. ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪ ಸರಕಾರವಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ! |