ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ತಲೆನೋವು

ವೈದ್ಯ ಮೇಘರಾಜ ಪರಾಡಕರ

‘ಸೂತಶೇಖರ ರಸ’ ಈ ಔಷಧದ ಒಂದು ಗುಳಿಗೆಯನ್ನು ಸಣ್ಣದಾಗಿ ಪುಡಿ ಮಾಡಬೇಕು. (ಒಂದು ತಟ್ಟೆಯಲ್ಲಿ ಗುಳಿಗೆಯನ್ನಿಟ್ಟು ಅದರ ಮೇಲೆ ಲೋಟದಿಂದ ಅಥವಾ ಬಟ್ಟಲಿನಿಂದ ಒತ್ತಿದರೆ ಗುಳಿಗೆಯು ಪುಡಿಯಾಗುತ್ತದೆ.) ಈ ಚೂರ್ಣವನ್ನು ನಾಶಿಪುಡಿಯನ್ನು ಸೆಳೆಯುವಂತೆ ಮೂಗಿನಲ್ಲಿ ಸೆಳೆಯಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ಚಮಚದಷ್ಟು ತೆಳುವಾದ ತುಪ್ಪದಲ್ಲಿ ಈ ಗುಳಿಗೆಯ ಪುಡಿಯನ್ನು ಸೇರಿಸಬೇಕು. ಅಂಗಾತ ಮಲಗಿ ಈ ತುಪ್ಪದಲ್ಲಿ ಮಿಶ್ರಣಗೊಂಡ ಔಷಧಿಯ ೨ ೨ ಹನಿಗಳನ್ನು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹಾಕಿ ೨ ನಿಮಿಷ ಮಲಗಬೇಕು. ಅನಂತರ ಎದ್ದು ತುಪ್ಪದಲ್ಲಿ ಮಿಶ್ರಿತಗೊಂಡ ಉಳಿದ ಔಷಧವನ್ನು ನೆಕ್ಕಿ ತಿನ್ನಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೭.೨೦೨೨)

ಸನಾತನದ ‘ಸೂತಶೇಖರ ರಸ’ ಈ ಔಷಧಿಯು ಈಗ ಲಭ್ಯವಿದೆ. ಇತರ ರೋಗಗಳಲ್ಲಿ ಇದರ ವಿವರವಾದ ಬಳಕೆಯ ಬಗ್ಗೆ ಅದರ ಡಬ್ಬದ ಜೊತೆಗಿರುವ ಕರಪತ್ರದಲ್ಲಿ ನೀಡಲಾಗಿದೆ. ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.