ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಾಧಕರಿಗೆ ಮಾಯೆಯಲ್ಲಿ ರಮಿಸುವ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗೆ ಇರಲು ಇಷ್ಟವಾಗುವುದಿಲ್ಲ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೦.೧೦.೨೦೨೧)

ಎಲ್ಲಿ ‘ಮನೋಲಯ ಮತ್ತು ಬುದ್ಧಿಲಯ ಹೇಗೆ ಮಾಡಬೇಕು ?’, ಎಂದು ಕಲಿಸುವ ಹಿಂದೂ ಧರ್ಮ ಮತ್ತು ಎಲ್ಲಿ ಬುದ್ಧಿಯನ್ನೇ ಎಲ್ಲಕ್ಕಿಂತ ಶ್ರೇಷ್ಠ ಎಂದು ತಿಳಿಯುವ ಬುದ್ಧಿಜೀವಿಗಳು !

‘ಹಿಂದೂ ಧರ್ಮದಲ್ಲಿ ‘ಪ್ರತಿಯೊಬ್ಬ ವ್ಯಕ್ತಿಯ ಉದ್ಧಾರವಾಗಬೇಕು’, ಎಂಬ ಉದ್ದೇಶದಿಂದ ನಿಯಮ ಮತ್ತು ಕೃತಿಗಳನ್ನು ಹೇಳಲಾಗಿರುತ್ತವೆ. ಈ ಎಲ್ಲ ಶಾಸ್ತ್ರಗಳನ್ನು ಯಾವುದೇ ವ್ಯಕ್ತಿಗಳು ಹೇಳಿರದೇ ವಿವಿಧ ಗ್ರಂಥಗಳಲ್ಲಿ ಕೊಡಲಾಗಿವೆ. ಯಾವುದೇ ಕೃತಿಯು ‘ಧರ್ಮಶಾಸ್ತ್ರಪ್ರಮಾಣ’ವಿದ್ದರೆ ಮಾತ್ರ ಅದಕ್ಕೆ ಹಿಂದೂ ಧರ್ಮದಲ್ಲಿ ಮಾನ್ಯತೆ ನೀಡಲಾಗಿದೆ. ನಿತ್ಯ ಜೀವನದಲ್ಲಿಯ ಒಂದು ಸಾಮಾನ್ಯ ಉದಾಹರಣೆ ಎಂದರೆ ‘ದಕ್ಷಿಣದಿಕ್ಕಿಗೆ ಕಾಲು ಚಾಚಿ ಮಲಗಬಾರದು’, ಇದನ್ನು ಯಾವುದೇ ವ್ಯಕ್ತಿಯು ಹೇಳಿಲ್ಲ; ಆದರೂ ಇಂದಿಗೂ ಬಹುತೇಕ ಎಲ್ಲಾ ಹಿಂದೂಗಳು ಈ ನಿಯಮವನ್ನು ಪಾಲಿಸುತ್ತಾರೆ. ಧರ್ಮಶಾಸ್ತ್ರದಲ್ಲಿ ಹೇಳಿರುವ ಇಂತಹ ವಿವಿಧ ಕೃತಿಗಳಿಂದ ಮನುಷ್ಯನ ಮನೋಲಯ ಮತ್ತು ಬುದ್ಧಿಲಯವಾಗುತ್ತದೆ. ಅದರಿಂದಲೇ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗಿ ಅವನು ಜೀವನಮುಕ್ತನಾಗುತ್ತಾನೆ.

ಈಗಿನ ಬುದ್ಧಿಜೀವಿಗಳು ‘ಸಂಕುಚಿತ ಬುದ್ಧಿ’ಯನ್ನೇ ಸರ್ವಶ್ರೇಷ್ಠ ಎಂದು ತಿಳಿಯುತ್ತಿದ್ದಾರೆ. ಆದುದರಿಂದ ಬುದ್ಧಿಗೆಮೀರಿದ ವಿವಿಧ ಘಟನೆಗಳಲ್ಲಿ ಅದು ‘ಏಕೆ ಮತ್ತು ಹೇಗೆ ?’, ಎಂಬ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಜೀವನವಿಡೀ ಅದರಲ್ಲಿಯೇ ಸಿಲುಕಿಕೊಳುತ್ತಾರೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೩.೧೦.೨೦೨೧)