ಬಿಹಾರ : ವಿಧಾನಸಭೆಯಲ್ಲಿ ವಂದೇ ಮಾತರಂ ಹೇಳುವಾಗ ನಿಂತುಕೊಳ್ಳಲು ನಿರಾಕರಿಸಿದ ಶಾಸಕ ಸೌದ ಆಲಮ್ !

ಪಾಟಲಿಪುತ್ರ (ಬಿಹಾರ) – ಬಿಹಾರ ವಿಧಾನಸಭೆಯ ಮಳೆಗಾಲದ ಅಧಿವೇಶನದ ಸಮಾರೋಪದಲ್ಲಿ ಜೂನ್ ೩೦ ರಂದು ವಂದೇ ಮಾತರಂ ಹಾಡಲಾಯಿತು. ವಂದೇ ಮಾತರಂ ಹಾಡುವಾಗ ರಾಜ್ಯದ ಠಾಕೂರ್ ಗಂಜನ ರಾಷ್ಟ್ರೀಯ ಜನತಾದಳದ ಶಾಸಕ ಸೌದ ಆಲಮ್ ಇವರು ಕುಳಿತೇ ಇದ್ದರು. ಅವರು ನಿಲ್ಲಲಿಲ್ಲ. ಆ ಸಮಯದಲ್ಲಿ ಭಾಜಪಾದ ಶಾಸಕರು ಅವರಿಗೆ ನಿಂತುಕೊಳ್ಳಲು ಹೇಳಿದರು, ಆದರೆ ಆಲಮ್ ಅವರು ಮಾತು ಕೇಳಲಿಲ್ಲ. ವಂದೇ ಮಾತರಂ ಮುಗಿದ ನಂತರ ಸಭಾಗೃಹದ ಹೊರಗೆ ಬಂದು ಪತ್ರಕರ್ತರು ಅವರಿಗೆ ವಂದೇ ಮಾತರಂ ಸಮಯದಲ್ಲಿ ಏಕೆ ನಿಲ್ಲಲಿಲ್ಲ ? ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಆಲಮ್ ನಮ್ಮ ದೇಶ ಹಿಂದೂ ರಾಷ್ಟ್ರವಲ್ಲ. ನಾನು ಕೇವಲ ಜನಗಣಮನ ರಾಷ್ಟ್ರಗೀತೆಯ ಸಮಯದಲ್ಲಿ ನಿಲ್ಲುತ್ತೇನೆ. ವಂದೇ ಮಾತರಂ ಸಮಯದಲ್ಲಿ ನಿಲ್ಲಲು ನನ್ನ ಮೇಲೆ ಯಾರು ಒತ್ತಡ ತರಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿದರು.
बिहार विधानसभा में RJD विधायक सऊद आलम ने किया ‘वंदे मातरम्’ का अपमान: सीट से खड़े नहीं हुए, कहा- भारत हिंदू राष्ट्र नहीं#Bihar #RJD https://t.co/e8JgAFhY7J
— ऑपइंडिया (@OpIndia_in) July 1, 2022
ಸಂಪಾದಕೀಯ ನಿಲುವುಭಾರತದಲ್ಲಿ ಹೆಚ್ಚಿನ ಮುಸಲ್ಮಾನರು ವಂದೇ ಮಾತರಂ ಅನ್ನು ವಿರೋಧಿಸುತ್ತಾರೆ. ಇದು ಜಗಜ್ಜಾಹೀರು. ಆದುದರಿಂದಲೇ ಸೌದ ಆಲಮ್ ನಿಂತುಕೊಳ್ಳಲು ನಿರಾಕರಿಸಿದ್ದಾರೆ ಎಂದು ಗಮನಕ್ಕೆ ಬರುತ್ತದೆ. ಇಂತಹವರು ಅವರ ಧರ್ಮದ ೫೭ ದೇಶಗಳಿಗೆ ಹೊರಟು ಹೋಗಬೇಕು ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನು ಇಲ್ಲ! |
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ! – ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಕೆನಡಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ! : Social Media Ban