ಉತ್ತರಪ್ರದೇಶದ ಸಂಯುಕ್ತ ವಕೀಲರ ಮಹಾಸಂಘದಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ ದೇಶದ ನ್ಯಾಯಾಲಯದಲ್ಲಿ ಕೈಯಲ್ಲಿ ತಕ್ಕಡಿ ಹಿಡಿದ ಮಹಿಳೆಯ ಮೂರ್ತಿ ತೆರವುಗೊಳಿಸಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಿ !

ಕೈಯಲ್ಲಿ ತಕ್ಕಡಿ ಹಿಡಿದಿರುವುದು ವಿದೇಶ ಸಮಾಜಸೇವಕಿಯ ಪ್ರತಿಮೆ ಈ ರೀತಿಯಲ್ಲಿ ಏಕೆ ಆಗ್ರಹಿಸಬೇಕಾಗುತ್ತದೆ ? ಸರಕಾರ ತಾನಾಗಿ ಇಂತಹ ವಿಚಾರ ಮಾಡಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಬೇಕು !

ಸೋನಭದ್ರ (ಉತ್ತರಪ್ರದೇಶ) – ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಪ್ರತಿಮೆ ಇರುತ್ತದೆ. ಈ ಪ್ರತಿಮೆ ಗ್ರೀಕ್ ಸಮಾಜಸೇವಕಿ ಡಿಕಿ ಇವರದ್ದಾಗಿದೆ. ಈ ಪ್ರತಿಮೆ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು, ಎಂದು ಆಗ್ರಹಿಸಿ ಉತ್ತರ ಪ್ರದೇಶದ ಸಂಯುಕ್ತ ವಕೀಲರ ಮಹಾಸಂಘಡದ ಪ್ರದೇಶಾಧ್ಯಕ್ಷ ರಾಕೇಶ ಶರಣ ಮಿಶ್ರಾ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ಒಂದು ಪ್ರತಿಯನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮುಂತಾದವರಿಗೆ ಕಳುಹಿಸಲಾಗಿದೆ.

ಈ ಪತ್ರದಲ್ಲಿ ಮಿಶ್ರಾ ಅವರು, ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಪ್ರತಿಮೆ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿದೆ. ಅದನ್ನು ಸತತ ನೋಡಿದರೆ ಗುಲಾಮಗಿರಿಯದ್ದೇ ಅರಿವಾಗುತ್ತದೆ. ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತರು ಪರಮ ನ್ಯಾಯಾಧೀಶರಾಗಿದ್ದಾರೆ. ಆದ್ದರಿಂದ ಡಿಕಿಯ ಮೂರ್ತಿ ತೆರವುಗೊಳಿಸಿ ಅದರ ಜಾಗದಲ್ಲಿ ಚಿತ್ರಗುಪ್ತರ ಮೂರ್ತಿ ಸ್ಥಾಪಿಸಬೇಕು.