|
|

ಎಟಾ (ಉತ್ತರಪ್ರದೇಶ) – ಜಿಲ್ಲೆಯ ಜಲೇಸರ್ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ವಂಚಕ ಅಕ್ಬರ್ ಮತ್ತು ಇತರ ಮತಾಂಧರು ಪರಾರಿಯಾಗಿದ್ದಾರೆ. ಈ ಸಂಬಂಧ ಸುಮಾರು ೯೯ ಕೋಟಿ ರೂಪಾಯಿ ಅವ್ಯವಹಾರ ಆಗಿರುವ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಮೂಲಕ್ಕೆ ಹೋದರೆ, ದರ್ಗಾದ ಸ್ಥಳದಲ್ಲಿ ಈ ಮೊದಲು ಶನಿ ದೇವರ ದೇವಾಲಯವಿತ್ತು; ಆದರೆ ಮತಾಂಧರು ಅತಿಕ್ರಮಣ ಮಾಡಿ ಅಲ್ಲಿ ದರ್ಗಾ ಕಟ್ಟಿದರು. ಇದು ಸ್ಥಳೀಯ ಹಿಂದೂಗಳಿಗೂ ಗೊತ್ತಿದೆ. ಹೀಗಿದ್ದರೂ ಹಿಂದೂಗಳು ಅಲ್ಲಿ ಶನಿ ಮಂದಿರ ಇದೆ ಎಂಬ ಭಾವವನ್ನಿಟ್ಟು ಪೂಜೆ ಸಲ್ಲಿಸುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಅರ್ಪಿಸುತ್ತಾರೆ. (ದರ್ಗಾದ ಸ್ಥಳದಲ್ಲಿ ದೇವಸ್ಥಾನ ಇತ್ತು ಮತ್ತು ಹಿಂದೂಗಳಿಗೆ ಅದರ ಬಗ್ಗೆ ಭಾವ ಇದೆ, ಅದು ಒಳ್ಳೆಯದು; ಆದರೆ ದೇವಸ್ಥಾನದ ಮೇಲೆ ಆಗಿರುವ ಅತಿಕ್ರಮಣವನ್ನು ತೆಗೆಯಲು ಕಾನೂನಿನ ಸಹಾಯದಿಂದ ಪ್ರಯತ್ನ ಮಾಡುವುದು, ಹಿಂದೂಗಳ ಧರ್ಮ ಕರ್ತವ್ಯವೇ ಆಗಿದೆ. ಹಾಗೆ ಮಾಡಿದರೇ ದೇವರಿಗೆ ಇನ್ನೂ ಇಷ್ಟವಾಗುವುದು ! – ಸಂಪಾದಕರು)
बड़े मियां-छोटे मियां दरगाह समिति के सदस्यों पर धोखाधड़ी का मुकदमा दर्ज #अपराध #उत्तर प्रदेश #देश #प्रदेश #राजनीति #विविध #हलचलhttps://t.co/Ci2nhzCyID
— Samachar Today™ (@samachartodaytv) April 13, 2022
೧. ಸರಕಾರಿ ಅಧಿಕಾರಿಗಳು ಕೂಡ ಅತಿಕ್ರಮಣವನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಅದರ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.
೨. ಅಲಿಗಂಜ್ನ ಉಪವಿಭಾಗೀಯ ದಂಡಾಧಿಕಾರಿ ಅಲಂಕಾರ್ ಅಗ್ನಿಹೋತ್ರಿ ಇವರು ಮಾತನಾಡುತ್ತಾ, ಹಿಂದೂಗಳು ದರ್ಗಾದ ಸ್ಥಳಕ್ಕೆ ಹೋಗಿ ಕೇಸರಿ ಧ್ವಜಗಳನ್ನು ನೆಟ್ಟು ಅಲ್ಲಿ ಪೂಜೆ ಸಲ್ಲಿಸುತ್ತಾರೆ.
೩. ‘ದರ್ಗಾ ನಿರ್ಮಾಣಕ್ಕೆ ಜಮಾಯಿಸಿದ ಮತಾಂಧರು ಕ್ರಮೇಣ ಇಡೀ ದೇವಸ್ಥಾನವನ್ನು ಅತಿಕ್ರಮಿಸಿದರು. ಆದ್ದರಿಂದ ದೇವಸ್ಥಾನದ ಅಸ್ತಿತ್ವವೇ ನಾಶವಾಗಿದೆ’, ಎಂದು ಗ್ರಾಮ ಪಂಚಾಯಿತಿ ಮುಖ್ಯಸ್ಥ ಶೈಲೇಂದ್ರ ಸಿಂಗ್ ಹೇಳಿದರು.
೪. ಸ್ಥಳೀಯ ಶಾಸಕ ಸಂಜೀವ್ ದಿವಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ