ಮೂಲತಃ ಈ ರೀತಿಯಲ್ಲಿ ಮನವಿ ಮಾಡುವ ಪ್ರಮೇಯ ಬರಬಾರದು, ಕೇಂದ್ರ ಸರಕಾರವು ಸ್ವತಃ ಇದರ ನಿಜವಾದ ಇತಿಹಾಸವನ್ನು ದೇಶದ ಎದುರಿಗಿಟ್ಟು ಈ ‘ಗರುಡ ಸ್ಥಂಭ’ವನ್ನು ಹಿಂದೂಗಳ ನಿಯಂತ್ರಣಕ್ಕೆ ಒಪ್ಪಿಸಬೇಕು !

ನವದೆಹಲಿ – ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು. ಅವರು ಕುತುಬಮಿನಾರನ್ನು ಹಿಂದೂಗಳ ವಶಕ್ಕೆ ಒಪ್ಪಿಸುವ ಹಾಗೂ ಅಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಸ್ವೀಕರಿಸದಿದ್ದರೆ ನ್ಯಾಯಾಲಯದಲ್ಲಿ ಹೋರಾಡುವುದಾಗಿಯೂ ಅವರು ಹೇಳಿದರು.
विश्व हिंदू परिषद ने कुतुब मीनार परिसर में स्थित 27 प्राचीन मंदिरों के पुनर्निर्माण की मांग उठाई है. वीएचपी ने कुतुब मीनार परिसर में पूजा करने देने की इजाजत भी मांगी है.#QutubMinar #VHP https://t.co/USFZMsIMLp
— Zee News (@ZeeNews) April 10, 2022
ವಿಹಿಂಪದ ವಕ್ತಾರರಾದ ವಿನೋದ ಬಂಸಲರವರು ಮಾತನಾಡುತ್ತ ‘ಕುತುಬಮಿನಾರನ್ನು ಯಾವುದೇ ವಿದೇಶಿ ವ್ಯಕ್ತಿ ನಿರ್ಮಿಸಿಲ್ಲ, ಅದು ಹಿಂದೂಗಳ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದೆ, ಇದಕ್ಕೆ ‘ವಿಷ್ಣು ಸ್ಥಂಬ’ ಎಂದೂ ಹೇಳಲಾಗುತ್ತದೆ. ಈ ವಿಷ್ಣು ದೇವಸ್ಥಾನದೊಂದಿಗೆ ಇಲ್ಲಿನ ೨೭ ಇತರ ದೇವಸ್ಥಾನಗಳು, ಹಾಗೆಯೇ ಜೈನ ದೇವಸ್ಥಾನಗಳನ್ನು ಕೆಡವಿ ಈ ಪರಿಸರದಲ್ಲಿ ಮಿನಾರ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ, ಏಕೆಂದರೆ ಈ ಸ್ಥಂಬದ ಮೇಲಿನ ಹಾಗೂ ಇಲ್ಲಿನ ಗೋಡೆಗಳ ಮೇಲಿನ ದೇವತೆಗಳ ಮೂರ್ತಿಗಳು ಇದರ ಸಾಕ್ಷಿ ನೀಡುತ್ತಿವೆ’ ಎಂದು ಹೇಳಿದರು.
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ