ಮೂಲತಃ ಈ ರೀತಿಯಲ್ಲಿ ಮನವಿ ಮಾಡುವ ಪ್ರಮೇಯ ಬರಬಾರದು, ಕೇಂದ್ರ ಸರಕಾರವು ಸ್ವತಃ ಇದರ ನಿಜವಾದ ಇತಿಹಾಸವನ್ನು ದೇಶದ ಎದುರಿಗಿಟ್ಟು ಈ ‘ಗರುಡ ಸ್ಥಂಭ’ವನ್ನು ಹಿಂದೂಗಳ ನಿಯಂತ್ರಣಕ್ಕೆ ಒಪ್ಪಿಸಬೇಕು !

ನವದೆಹಲಿ – ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು. ಅವರು ಕುತುಬಮಿನಾರನ್ನು ಹಿಂದೂಗಳ ವಶಕ್ಕೆ ಒಪ್ಪಿಸುವ ಹಾಗೂ ಅಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಸ್ವೀಕರಿಸದಿದ್ದರೆ ನ್ಯಾಯಾಲಯದಲ್ಲಿ ಹೋರಾಡುವುದಾಗಿಯೂ ಅವರು ಹೇಳಿದರು.
विश्व हिंदू परिषद ने कुतुब मीनार परिसर में स्थित 27 प्राचीन मंदिरों के पुनर्निर्माण की मांग उठाई है. वीएचपी ने कुतुब मीनार परिसर में पूजा करने देने की इजाजत भी मांगी है.#QutubMinar #VHP https://t.co/USFZMsIMLp
— Zee News (@ZeeNews) April 10, 2022
ವಿಹಿಂಪದ ವಕ್ತಾರರಾದ ವಿನೋದ ಬಂಸಲರವರು ಮಾತನಾಡುತ್ತ ‘ಕುತುಬಮಿನಾರನ್ನು ಯಾವುದೇ ವಿದೇಶಿ ವ್ಯಕ್ತಿ ನಿರ್ಮಿಸಿಲ್ಲ, ಅದು ಹಿಂದೂಗಳ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದೆ, ಇದಕ್ಕೆ ‘ವಿಷ್ಣು ಸ್ಥಂಬ’ ಎಂದೂ ಹೇಳಲಾಗುತ್ತದೆ. ಈ ವಿಷ್ಣು ದೇವಸ್ಥಾನದೊಂದಿಗೆ ಇಲ್ಲಿನ ೨೭ ಇತರ ದೇವಸ್ಥಾನಗಳು, ಹಾಗೆಯೇ ಜೈನ ದೇವಸ್ಥಾನಗಳನ್ನು ಕೆಡವಿ ಈ ಪರಿಸರದಲ್ಲಿ ಮಿನಾರ ಮತ್ತು ಮಸೀದಿಗಳನ್ನು ಕಟ್ಟಲಾಗಿದೆ, ಏಕೆಂದರೆ ಈ ಸ್ಥಂಬದ ಮೇಲಿನ ಹಾಗೂ ಇಲ್ಲಿನ ಗೋಡೆಗಳ ಮೇಲಿನ ದೇವತೆಗಳ ಮೂರ್ತಿಗಳು ಇದರ ಸಾಕ್ಷಿ ನೀಡುತ್ತಿವೆ’ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !