
ಇಸ್ಲಾಮಾಬಾದ (ಪಾಕಿಸ್ತಾನ) – ಮುಂಬಯಿ ಮೇಲೆ ನವೆಂಬರ 26, 2008 ರ ಆಕ್ರಮಣದಲ್ಲಿ ಜೀವಂತ ಸೆರೆಹಿಡಿಯಲಾಗಿದ್ದ ಏಕೈಕ ಭಯೋತ್ಪಾದಕ ಅಜಮಲ ಕಸಾಬನ ಪಾಕಿಸ್ತಾನದ ವಿಳಾಸವನ್ನು ಪಾಕಿಸ್ತಾನದ ಆಗಿನ ಪ್ರಧಾನ ಮಂತ್ರಿ ನವಾಜ ಶರೀಫ ಅವರೇ ಭಾರತಕ್ಕೆ ನೀಡಿದ್ದರು. ಈ ಕಾರಣದಿಂದ ಕಸಾಬನ ಮನೆ ಪಾಕಿಸ್ತಾನದ ಫರೀದಕೋಟನಲ್ಲಿ ಇದೆಯೆಂದು ಭಾರತಕ್ಕೆ ತಿಳಿಯಿತು’, ಎಂದು ಪಾಕಿಸ್ತಾನದ ಗೃಹಸಚಿವ ಶೇಖ ರಶೀದ ಅಹಮ್ಮದ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. `ನಾನು ಅತ್ಯಂತ ಜವಾಬ್ದಾರಿಯಿಂದ ಈ ಆರೋಪ ಮಾಡಿದ್ದೇನೆ. ಒಂದು ವೇಳೆ ಈ ಮಾಹಿತಿ ಸುಳ್ಳಾಗಿದ್ದರೆ, ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ.’ ಎಂದೂ ರಶೀದ ಹೇಳಿದರು.
Pakistan Minister admits terrorist Ajmal Kasab was their citizen, blames Nawaz Sharif for giving his details to Indiahttps://t.co/q6utjE9Sv5
— OpIndia.com (@OpIndia_com) March 30, 2022
ರಶೀದ ತಮ್ಮ ಮಾತನ್ನು ಮುಂದುವರಿಸುತ್ತಾ, ನವಾಜ ಶರೀಫ ಮತ್ತು ಅವರ ಹಿಂಬಾಲಕರು ಮಾರಾಟವಾಗಿದ್ದಾರೆ. ಪಾಕಿಸ್ತಾನದ ರಾಜಕಾರಣದಲ್ಲಿ ಇವರು ಹುಳುಗಳಾಗಿದ್ದಾರೆ. ಹಣ ನುಂಗಿ ಇವರು ತಮ್ಮ ಪ್ರಾಮಾಣಿಕತೆಯನ್ನು ಒತ್ತೆಯಿಟ್ಟಿದ್ದಾರೆ. ಪಾಕಿಸ್ತಾನಕ್ಕೆ ಇವರು ಕಳಂಕವಾಗಿದ್ದಾರೆ. ಸದ್ದಾಂ ಹುಸೇನ, ಮುಅಮ್ಮರ ಗದ್ದಾಫಿ ಮತ್ತು ಒಸಾಮಾ ಬಿನ್ ಲಾಡೆನ್ ಈ ಮೂವರಿಂದ ಶರೀಫ ಹಣ ಕೀಳುತ್ತಿದ್ದರು. ಗದ್ಧಾಫಿಯೊಂದಿಗಿನ ಕರಾರಿಗೆ ನಾನು ಸಾಕ್ಷಿದಾರನಾಗಿದ್ದೇನೆ ಎಂದೂ ಶೇಖ ರಶೀದ ಆರೋಪಿಸಿದರು.
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim