ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ !
ಸನಾತನ ಸಂಸ್ಥೆಯ ಪೂರ್ಣವೇಳೆ ಸಾಧಕರು ಅಧ್ಯಾತ್ಮಪ್ರಸಾರ ಹಾಗೂ ಹಿಂದೂ ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳಿಗಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುತ್ತಾರೆ. ಈ ಪ್ರವಾಸದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅಧ್ಯಾತ್ಮಪ್ರೇಮಿ ಜಿಜ್ಞಾಸುಗಳು ಹಾಗೂ ಹಿಂದೂ ರಾಷ್ಟ್ರಪ್ರೇಮಿಗಳನ್ನು ಭೇಟಿಯಾಗುವುದು; ಪ್ರವಚನಗಳು, ಸಭೆಗಳು, ಚರ್ಚೆ, ಶಿಬಿರಗಳು ಇತ್ಯಾದಿಗಳ ಆಯೋಜನೆ ಮಾಡುವುದು ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಭಾರತದಲ್ಲಿನ ಹೆಚ್ಚಿನ ಜಿಲ್ಲೆಗಳು ಹಾಗೂ ರಾಜ್ಯಗಳಲ್ಲಿ ಸನಾತನದ ಕಾರ್ಯ ಇಲ್ಲದಿರುವುದರಿಂದ ಆ ಸ್ಥಳಗಳಲ್ಲಿ ಪೂರ್ಣವೇಳೆ ಸಾಧಕರ ನಿವಾಸ ಮತ್ತು ಭೋಜನದ ವ್ಯವಸ್ಥೆ ಮಾಡಲು ಮಿತಿ ಬರುತ್ತದೆ. ಈ ದೃಷ್ಟಿಯಿಂದ ಎಲ್ಲ ಕಡೆಗಳಲ್ಲಿನ ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳು ತಮ್ಮ ಪರಿಚಿತರು, ಸಂಬಂಧಿಕರು ಅಥವಾ ತಮ್ಮ ಸಂಪರ್ಕದಲ್ಲಿರುವ ಹಿಂದುತ್ವನಿಷ್ಠರು ಈ ರೀತಿಯ ವ್ಯವಸ್ಥೆಯನ್ನು ಮಾಡಲು ಸಿದ್ಧರಿದ್ದರೆ ಅವರ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರಲ್ಲಿ ಈ ಮುಂದಿನಂತೆ ತಿಳಿಸಿರಿ. ತಾವು ಈ ಮಾಹಿತಿ ೨೫ ಮಾರ್ಚ ೨೦೨೨ ರ ವರೆಗೆ ತಿಳಿಸಿದರೆ ಪೂರ್ಣವೇಳೆ ಸಾಧಕರಿಗೆ ಅನುಕೂಲವಾಗಬಹುದು. (ಸನಾತನದ ಸಾಧಕರ ಈ ಮಾಹಿತಿಯನ್ನು ಜಿಲ್ಲಾಸೇವಕರಿಗೆ ತಿಳಿಸಿರಿ. ಜಿಲ್ಲಾಸೇವಕರಿಗೆ ಈ ಬಗ್ಗೆ ಗೂಗಲ್ಫಾರ್ಮ್ ಕಳುಹಿಸಲಾಗುವುದು. ಅವರು ಅದನ್ನು ತುಂಬಿಸಿ ಕಳುಹಿಸಿರಿ.)
೧. ಪರಿಚಿತರ ಹೆಸರು, ಪೂರ್ಣ ವಿಳಾಸ ಮತ್ತು ಸಂಪರ್ಕ ಸಂಖ್ಯೆ
೨. ಪರಿಚಿತರ ಬಗ್ಗೆ ಸಂಕ್ಷಿಪ್ತ ಮಾಹಿತಿ (ಅಧ್ಯಾತ್ಮ / ಹಿಂದುತ್ವದ ಆಸಕ್ತಿ, ಶಿಕ್ಷಣ, ಉದ್ಯೋಗ, ಇತರ..)
೩. ಹೆಸರು ಕಳುಹಿಸುವವರ ಹೆಸರು ಹಾಗೂ ಸಂಪರ್ಕ ಸಂಖ್ಯೆ, ಪರಿಚಿತರೊಂದಿಗಿನ ಸಂಬಂಧ
೪. ನಿವಾಸ, ಭೋಜನ, ವಾಹನ ಇತ್ಯಾದಿಗಳಲ್ಲಿ ಯಾವ ಸೌಲಭ್ಯ ಕಲ್ಪಿಸಬಹುದು ?
೫. ವ್ಯವಸ್ಥೆಯನ್ನು ಎಷ್ಟು ದಿನ ಹಾಗೂ ಎಷ್ಟು ಜನರಿಗಾಗಿ ಮಾಡಬಹುದು ?
ಈ ಮಾಧ್ಯಮದಿಂದ ತಮ್ಮ ಪರಿಚಿತರು, ಸಂಬಂಧಿಕರು ಅಥವಾ ಹಿಂದುತ್ವನಿಷ್ಠರನ್ನೂ ಅಧ್ಯಾತ್ಮಪ್ರಸಾರ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಜೋಡಿಸಿಕೊಳ್ಳಬಹುದು.
ಆದ್ಯತೆಗನುಸಾರ ಮುಂದಿನ ರಾಜ್ಯಗಳು / ಜಿಲ್ಲೆಗಳ ಮಾಹಿತಿ ಸಿಕ್ಕಿದ್ದಲ್ಲಿ ಅದಕ್ಕನುಸಾರ ಪೂರ್ಣವೇಳೆ ಸಾಧಕರ ಪ್ರವಾಸದ ಆಯೋಜನೆಯನ್ನು ಆದ್ಯತೆಯಿಂದ ಮಾಡಲಾಗುವುದು.


ಸಂಪರ್ಕಕ್ಕಾಗಿ : ವಿ-ಅಂಚೆ ವಿಳಾಸ : [email protected]
ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !