ಅಪವಿತ್ರಗೊಂಡ ಶಿವಮಂದಿರವನ್ನು ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸಲು ನಿಷೇಧ !
ರಾಯಚೂರು – ಕೆಲವು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದಿದಲ್ಲಿ ಶಿವಲಿಂಗ ಅಪವಿತ್ರಗೊಳಿಸಿದ ಶ್ರೀ ಈಶ್ವರಮಂದಿರದ ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಹಸ್ತದಿಂದ ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀರಾಮ ಸೇವೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಹಿಂದುತ್ವನಿಷ್ಠ ಚೈತ್ರಾ ಕುಂದಾಪೂರ ಬರುವವರಿದ್ದರು; ಆದರೆ ಜಿಲ್ಲಾಡಳಿತವು ಅವರನ್ನು ಮಾರ್ಚ ೩ರ ವರೆಗೆ ಕಲಬುರ್ಗಿ ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧಿಸಿದೆ. ‘ಡೈಜಿವರ್ಲ್ಡ’ ಈ ವಾತಾಧಜಾಲತಾಣವು ಈ ವಾರ್ತೆಯನ್ನು ಪ್ರಸಾರ ಮಾಡಿದೆ.
(ಸೌಜನ್ಯ : Daily Salar)
ಈ ವಾರ್ತೆಯನುಸಾರ, ‘ ಈ ಆದೇಶವನ್ನು ಉಲ್ಲಂಘಿಸಿ, ಜಿಲ್ಲೆಗೆ ಪ್ರವೇಶಿಸಲು ಪ್ರಯತ್ನಿಸಿದ ಚೈತ್ರಾ ಕುಂದಾಪೂರ ಇವರನ್ನು ಶಹಾಬಾದ ಪೊಲಿಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಡಳಿತದ ಈ ನಿರ್ಧಾರವನ್ನು ಹಿಂದುತ್ವವಾದಿ ಸಂಘಟನೆಗಳು ವಿರೋಧಿಸಿವೆ.
Karnatakas Aland city tense after miscreants desecrate Shivling https://t.co/AxIemOgNTL #Aland #desecrate #Kalaburagi #Karnataka #Karnatakas
— TeluguStop.com (@telugustop) March 1, 2022
ಈ ಹಿನ್ನೆಲೆಯಲ್ಲಿ ಪೊಲಿಸರು ಇಲ್ಲಿ ಮಾರ್ಚ ೩ರ ವರೆಗೆ ನಿರ್ಬಂಧನೆಯ ಆದೇಶವನ್ನು ಜಾರಿಗೊಳಿಸಿದೆ. ಪೊಲೀಸರು ನೀಡಿದ ಮಾಹಿತಿಯನುಸಾರ, ದೇವಸ್ಥಾನದಲ್ಲಿ ವಿಶೇಷ ಪೂಜೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ದಿನ ಅಪವಿತ್ರಗೊಂಡ ಈಶ್ವರ ಮಂದಿರದ ಪಕ್ಕದಲ್ಲಿರುವ ಲಾಡಲೆ ಮಶಕ ದರ್ಗಾದಲ್ಲಿ ಶಬ-ಎ-ಬಾರಾತ ಸಮಾರಂಭ ಆಚರಿಸಲಾಗುತ್ತಿದೆ. ಇದರಿಂದ ಕಟ್ಟುನಿಟ್ಟಿನ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ’.
ಆಡಳಿತದ ಕ್ರಮವು ಹಿಂದುವಿರೋಧಿ ! -ಪ್ರಮೋದ ಮುತಾಲಿಕ
ಈ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಪ್ರಮೋದ ಮುತಾಲಿಕರವರು, ‘ಕಲಬುರ್ಗಿ ಜಿಲ್ಲಾಡಳಿತದ ಕ್ರಮ ಹಿಂದುವಿರೋಧಿಯಾಗಿದೆ’ ಎಂದು ಹೇಳಿದರು.
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ