ಕೈಮೂರ್ (ಬಿಹಾರ) ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿರುವ ಶ್ರೀ ಮಹಾಕಾಳಿದೇವಿ ದೇವಸ್ಥಾನದಲ್ಲಿ ಕಳ್ಳತನ !

ಕದಿಯುವ ಮುನ್ನ 7 ನಾಯಿಗಳಿಗೆ ವಿಷ ಹಾಕಿ ಕೊಂದ ಕಳ್ಳರು !

* ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಕಳ್ಳರು ಕಳ್ಳತನ ಮಾಡುತ್ತಾರೆ, ಇದು ಪೊಲೀಸರಿಗೆ ನಾಚಿಕೆಗೇಡು ! ಇಂತಹ ಪೊಲೀಸರು ರೈಲ್ವೆಯ ಆಸ್ತಿಯನ್ನು ಹೇಗೆ ರಕ್ಷಿಸುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ !- ಸಂಪಾದಕರು 

* ಬಿಹಾರದಲ್ಲಿ ಜಂಗಲರಾಜ್ ಇನ್ನೂ ಮುಗಿದಿಲ್ಲ, ಎನ್ನುವುದನ್ನು ಈ ಘಟನೆ ತೋರಿಸುತ್ತದೆ !- ಸಂಪಾದಕರು 

ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿ ಒಡೆದು ಕಳ್ಳತನ

ಪಾಟಲಿಪುತ್ರ (ಬಿಹಾರ) – ಬಿಹಾರದ ಕೈಮೂರ್‍ನಲ್ಲಿರುವ ಶ್ರೀ ಮಹಾಕಾಳಿದೇವಿ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಕಳ್ಳರು 7 ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದಿದ್ದಾರೆ. ಬಳಿಕ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿ ಒಡೆದು ಸುಮಾರು 15 ರಿಂದ 20 ಸಾವಿರ ರೂಪಾಯಿ ಕದ್ದಿದ್ದಾರೆ. ಕೊಲ್ಲಲ್ಪಟ್ಟ ಬೀದಿ ನಾಯಿಗಳು ದೇವಾಲಯದಲ್ಲಿ ಆರತಿಯ ನಂತರ ಸಿಗುತ್ತಿದ್ದ ಪ್ರಸಾದಕ್ಕಾಗಿ ಇಲ್ಲಿಗೆ ಬರುತ್ತಿದ್ದವು. ವಿಶೇಷವೆಂದರೆ ಈ ದೇವಸ್ಥಾನ ರೈಲ್ವೇ ಗೋದಾಮು ಬಳಿಯ ರೈಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿದೆ.