
ಬೆಂಗಳೂರು – ಪ್ರೇಮಭಾವ, ಸತತ ಇತರರ ವಿಚಾರ ಮಾಡುವುದು ಇತ್ಯಾದಿ ಗುಣಗಳಿರುವ ಮತ್ತು ಶ್ರೀಗುರುಗಳ ಬಗ್ಗೆ ದೃಢ ಶ್ರದ್ಧೆ ಇರುವ ಬೆಂಗಳೂರಿನ ಸಾಧಕ ದಂಪತಿಗಳಾದ ಶ್ರೀ. ಸದಾನಂದ ಕಳ್ಸೆ (೭೦ ವರ್ಷ) ಮತ್ತು ಸೌ. ಸುಧಾ ಸದಾನಂದ (೬೩ ವರ್ಷ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರೆಂದು ೧೨ ಜನವರಿ ೨೦೨೨ ರಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಆನಂದ ವಾರ್ತೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪೂ. ರಮಾನಂದ ಗೌಡ ಇವರು ಶ್ರೀ. ಸದಾನಂದ ಕಳ್ಸೆ ಮತ್ತು ಸೌ. ಸುಧಾ ಸದಾನಂದ ಇವರಿಗೆ ಉಡುಗೊರೆ ನೀಡಿ ಸತ್ಕಾರ ಮಾಡಿದರು. ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ.
‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಶ್ರೀ. ಸದಾನಂದರವರು ಮತ್ತು ಸೌ. ಸುಧಾ ಸದಾನಂದರವರು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’, ಎಂದು ಪೂ. ರಮಾನಂದ ಗೌಡ ಇವರು ಈ ವೇಳೆ ಹೇಳಿದರು. ಇದನ್ನು ಕೇಳಿ ಶ್ರೀ ಸದಾನಂದರವರಿಗೆ ಭಾವಜಾಗೃತಿಯಾಯಿತು. ಅವರು ಮಾತನಾಡುತ್ತಾ ‘ನಾನು ಏನು ಮಾಡಿಲ್ಲ, ನಿರುಪಯುಕ್ತವಾಗಿದ್ದ ಜಾಗವನ್ನು ನೀಡಿದ್ದೆ. ಆದರೆ ಇಂತಹ ಜಾಗದಲ್ಲಿ ಗುರುಗಳ ಇಷ್ಟೊಂದು ಮಹಾನ್ ಕಾರ್ಯ ಆಗುತ್ತಿರುವುದು ನೋಡಿ ತುಂಬಾ ಸಂತೋಷ ಆನಿಸುತ್ತಿದೆ. ಗುರುಗಳ ಅಖಂಡ ಕೃಪೆ ನಮ್ಮ ಮೇಲೆ ಇದೆ. ಗುರುಗಳು (ಪರಾತ್ಪರ ಗುರು ಡಾ. ಆಠವಲೆಯವರು) ನಮ್ಮನ್ನು ಸತತ ರಕ್ಷಣೆ ಮಾಡುತ್ತಿದ್ದಾರೆ’, ಎಂದರು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು