ನಿಧನ ವಾರ್ತೆ

ಶಿವಮೊಗ್ಗ – ಇಲ್ಲಿಯ ವಿಜಯ ಮೋಟಾರ್ಸ್ ಬಸ್ ಮಾಲೀಕರಾದ ಹಾಗೂ ಸನಾತನದ ಹಿತಚಿಂತಕರಾದ ಕೆ.ವಿ. ಜಯಪ್ರಕಾಶ ಶೆಣೈಯವರು (೭೩ ವರ್ಷ, ಡಿಸೆಂಬರ್ ೨೩ ರಂದು ನಿಧನರಾದರು. ಸನಾತನದ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತಿದ್ದ ಅವರು ಸನಾತನದ ಸಾಧಕರಿಗೆ ವಾಸಿಸಲು ಜಾಗವನ್ನು ನೀಡಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳು, ಸೊಸೆ, ಅಳಿಯ ಮತ್ತು ೪ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಶೆಣೈ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.

ಮಂಗಳೂರು – ಪಡುಬಿದ್ರೆಯ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದ ಸನಾತನದ ಸಾಧಕಿ ಶ್ರೀಮತಿ ಶಾರದಾ ಕಾಮತ್ (೮೫ ವರ್ಷ) ಇವರು ಡಿಸೆಂಬರ್ ೧೫ ರಂದು ಅನಾರೋಗ್ಯದಿಂದಾಗಿ ನಿಧನರಾದರು. ಅವರು ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರು, ಒಬ್ಬರು ಸೊಸೆ, ಮೂರು ಮೊಮ್ಮಕ್ಕಳು ಹಾಗೂ ಎರಡು ಮರಿಮಕ್ಕಳು ಇವರನ್ನು ಅಗಲಿದ್ದಾರೆ. ಸನಾತನ ಪರಿವಾರವು ಕಾಮತ್ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.