‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದಿಂದ ಸಾಧಕರ ಮೇಲೆ ಮತ್ತು ಸಂತರ ಮೇಲಾಗುವ ಪರಿಣಾಮಗಳು

ನಾಮಜಪದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದಿಂದ ಸಾಧಕರು ಮತ್ತು ಸಂತರ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ, ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದ ಸಂದರ್ಭದಲ್ಲಿನ ಮಹತ್ವದ ಅಂಶಗಳು !

(ಪರಾತ್ಪರ ಗುರು) ಡಾ. ಆಠವಲೆ

ಈ ನಾಮಜಪವನ್ನು ಕೇಳಿದ್ದರಿಂದ ಪರೀಕ್ಷಣೆಯಲ್ಲಿನ ಎಲ್ಲ ಸಾಧಕರ ಮೇಲೆ ಸಕಾರಾತ್ಮಕ ಪರಿಣಾಮವಾಗಿರುವುದು ಕಂಡು ಬಂದರೂ, ಈ ನಾಮಜಪವನ್ನು ಯಾರು ಮಾಡಬೇಕು ಮತ್ತು ಯಾರು ಮಾಡಬಾರದು, ಹಾಗೆಯೇ ಎಷ್ಟು ಸಮಯ ಮಾಡಬೇಕು, ಎಂಬುದು ತಿಳಿಯಲು ಮುಂದಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

೧. ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಬಾರದು; ಅವರು ನಾಮಜಪಾದಿ ಉಪಾಯಕ್ಕಾಗಿ ಹೇಳಿದ ನಾಮಜಪವನ್ನೇ ಮಾಡಬೇಕು

‘ನಿರ್ವಿಚಾರ’ ಈ ನಾಮಜಪವು ನಿರ್ಗುಣದೆಡೆಗೆ ಕರೆದೊಯ್ಯುವ ಜಪವಾಗಿದೆ. ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರು ಈ ನಾಮಜಪವನ್ನು ಮಾಡತೊಡಗಿದರೆ, ಅವರಿಗೆ ಕೆಟ್ಟ ಶಕ್ತಿಗಳಿಂದ ವಿರೋಧವಾಗಬಹುದು. ಈ ವಿರೋಧವು ತೀವ್ರ ಸ್ವರೂಪದ್ದಾದರೆ, ತೊಂದರೆ ಇರುವ ಸಾಧಕರ ತೊಂದರೆಯಲ್ಲಿ ಹೆಚ್ಚಳವಾಗಬಹುದು ಮತ್ತು ಅದಕ್ಕಾಗಿ ಸಂತರಿಗೆ ನಾಮಜಪವನ್ನು ಮಾಡಲು ಸಮಯವನ್ನು ನೀಡಬೇಕಾಗಬಹುದು. ಆದುದರಿಂದ ಕೆಟ್ಟ ಶಕ್ತಿಗಳ ತೀವ್ರ, ಮಧ್ಯಮ ಮತ್ತು ಮಂದ ತೊಂದರೆಯಿರುವ ಸಾಧಕರು ತಮಗೆ ನಾಮಜಪಾದಿ ಉಪಾಯಕ್ಕಾಗಿ ಹೇಳಿದ ನಾಮಜಪವನ್ನೇ ಮಾಡಬೇಕು. ಈ ಸಾಧಕರ ಕೆಟ್ಟ ಶಕ್ತಿಗಳ ತೊಂದರೆ ದೂರವಾಗುವುದೇ ಮಹತ್ವದ್ದಾಗಿದೆ ಆದುದರಿಂದ ಅವರು ಉಪಾಯದ ಕಾಲಾವಧಿ ಪೂರ್ಣವಾದ ನಂತರವೂ ಉಪಾಯಗಳಲ್ಲಿ ಬಂದ ನಾಮಜಪಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಉಳಿದ ಸಮಯದಲ್ಲಿ ಬರುವಾಗ-ಹೋಗುವಾಗ ಮಾಡಬೇಕು.

೨. ‘ಆಧ್ಯಾತ್ಮಿಕ ತೊಂದರೆಗಳಿರುವ ಮತ್ತು ಶೇ. ೬೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಮಟ್ಟವಿರುವ ಸಾಧಕರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಅವರಿಗೆ ಹೇಳಲಾಗಿರುವ ಜಪದ ಒಟ್ಟು ಸಮಯದ ಪೈಕಿ ಶೇ. ೨೦ ರಷ್ಟು ಸಮಯ ಮಾಡಬಹುದು

೩. ಆಧ್ಯಾತ್ಮಿಕ ತೊಂದರೆಗಳಿಲ್ಲದ ಸಾಧಕರಿಗೆ ‘ನಿರ್ವಿಚಾರ’ ಈ ಜಪವನ್ನು ಮಾಡುವುದು ಕಠಿಣವಾಗುತ್ತಿದ್ದರೆ, ಅವರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು.

ನಿರ್ವಿಚಾರ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಕರೆದೊಯ್ಯುವ ಜಪವಾಗಿದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತಲೂ ಕಡಿಮೆ ಆಧ್ಯಾತ್ಮಿಕ ಮಟ್ಟದ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಮ್ಮ ನಿತ್ಯದ (ಯಾವಾಗಲೂ ಜಪಿಸುವ) ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು. ಈ ನಾಮಜಪವನ್ನು ಮಾಡುವುದು ಸಾಧ್ಯವಾಗತೊಡಗಿದರೆ ಅದನ್ನು ಸತತವಾಗಿ ಮಾಡಬೇಕು. ಏಕೆಂದರೆ ಕೊನೆಗೆ ಸಾಧನೆಯ ಮುಂದಿನ ಹಂತಕ್ಕೆ ಹೋಗಿ ದಿನವಿಡಿ ಈ ನಾಮಜಪವನ್ನೇ ಮಾಡಲಿಕ್ಕಿದೆ. ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕರಿಗೆ ‘ನಿರ್ವಿಚಾರ’ ಈ ಜಪ ಮಾಡುವುದು ಕಠಿಣವಾಗುತ್ತಿದ್ದರೆ, ಅವರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಿ ನೋಡಬೇಕು.

೪. ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ‘ನಿರ್ವಿಚಾರ’ ಜಪವನ್ನು ಮಾಡಲು ಕಠಿಣವಾಗುತ್ತಿದ್ದರೆ, ಅವರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಬೇಕು

‘ನಿರ್ವಿಚಾರ’ ಈ ಜಪ ಆಗಲು ಸಾಧಕರ ಆಧ್ಯಾತ್ಮಿಕ ಮಟ್ಟ ಕಡಿಮೆಯೆಂದರೂ ಶೇ. ೬೦ ರಷ್ಟಿರುವುದು, ಅಂದರೆ ಅವರ ಮನೋಲಯ ಆರಂಭವಾಗಿರುವುದು ಆವಶ್ಯಕವಾಗಿದೆ. ಅನಂತರ ಆ ಸಾಧಕರು ನಿರ್ವಿಚಾರ ಸ್ಥಿತಿಗೆ ಹೋಗಬಲ್ಲರು. ‘ನಿರ್ವಿಚಾರ’ ಈ ನಾಮಜಪವು ‘ನಿರ್ಗುಣ’ ಸ್ಥಿತಿಗೆ ಒಯ್ಯುವುದಾಗಿರುವುದರಿಂದ ಆಧ್ಯಾತ್ಮಿಕ ತೊಂದರೆಗಳಿಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟವಿರುವ ಸಾಧಕರು ಇದೇ ನಾಮಜಪವನ್ನು ಮಾಡಬೇಕು. ಸಾಧಕರಿಗೆ ‘ನಿರ್ವಿಚಾರ’ ಈ ಜಪವನ್ನು ಮಾಡುವುದು ಕಠಿಣವಾಗುತ್ತಿದ್ದರೆ ಅವರು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಮಾಡಿ ನೋಡಬೇಕು.

– ಪರಾತ್ಪರ ಗುರು ಡಾ. ಆಠವಲೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ೪ ಜನ ಸಾಧಕರು, ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟದ ೪ ಜನ ಸಾಧಕರು, ಆಧ್ಯಾತ್ಮಿಕ ತೊಂದರೆಗಳಿಲ್ಲದ ೩ ಜನ ಸಾಧಕರು, ಆಧ್ಯಾತ್ಮಿಕ ತೊಂದರೆಯಿಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟದ ೪ ಜನ ಸಾಧಕರು, ಒಬ್ಬ ದೈವೀ ಬಾಲಕಿ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ, ಹೀಗೆ ಒಟ್ಟು ೧೬ ಜನ ಸಾಧಕರು ಮತ್ತು ಒಬ್ಬರು ಸಂತರು ಪಾಲ್ಗೊಂಡಿದ್ದರು. ಪರೀಕ್ಷಣೆಯಲ್ಲಿನ ಸಾಧಕರು ಮತ್ತು ಸಂತರಿಗೆ ೧೮ ರಿಂದ ೨೫ ಜುಲೈ ೨೦೨೧ ಈ ಕಾಲಾವಧಿಯಲ್ಲಿ ಪ್ರತಿದಿನ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ೧೦ ನಿಮಿಷಗಳ ವರೆಗೆ ಕೇಳಿಸಲಾಯಿತು. ಈ ಪರೀಕ್ಷಣೆಯಲ್ಲಿ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದಿಂದ ಸಾಧಕರು ಮತ್ತು ಸಂತರ ಮೇಲೆ ಏನು ಪರಿಣಾಮವಾಗುತ್ತದೆ ?, ಹಾಗೆಯೇ ಸಾಧಕರ ಮೇಲೆ ಹುಣ್ಣಿಮೆಯ ದಿನ ಏನು ಪರಿಣಾಮವಾಗುತ್ತದೆ ?’, ಎಂಬುದನ್ನೂ ಅಧ್ಯಯನ ಮಾಡಲಾಯಿತು.

ಟಿಪ್ಪಣಿ – ೨೩.೭.೨೦೨೧ ರಂದು ಗುರುಪೂರ್ಣಿಮೆ ಇದ್ದುದರಿಂದ ಆ ದಿನ ಪ್ರಯೋಗವಿರಲಿಲ್ಲ; ಏಕೆಂದರೆ ಆ ದಿನದ ಸ್ಪಂದನಗಳು ಬೇರೆಯೇ ಆಗಿದ್ದರಿಂದ ‘ಯು.ಎ.ಎಸ್.’ ನಿರೀಕ್ಷಣೆ ಬೇರೆಯೇ ಬರುವ ಸಾಧ್ಯತೆಯಿತ್ತು.

೧ ಅ. ಪರೀಕ್ಷಣೆಯಲ್ಲಿನ ಸಾಧಕರ ಮೇಲೆ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದ ಸಕಾರಾತ್ಮಕ ಪರಿಣಾಮವಾಗುವುದು : ನಾಮಜಪದಿಂದ ಪರೀಕ್ಷಣೆಯಲ್ಲಿದ್ದ ಸಾಧಕರ ಮೇಲಾದ ಪರಿಣಾಮವನ್ನು ತೋರಿಸುವ ಕೋಷ್ಟಕವನ್ನು ಕೆಳಗೆ ಕೊಡಲಾಗಿದೆ.

೧. ಆ. ಪರೀಕ್ಷಣೆಯಲ್ಲಿನ ಸಾಧಕರ ಮೇಲೆ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದ ಪರಿಣಾಮ ೨ ದಿನಗಳ ವರೆಗೆ ಉಳಿಯುವುದು : ೨೫.೭.೨೦೨೧ ಈ ದಿನದಂದು ನಾಮಜಪದ ಪ್ರಯೋಗ ಮುಗಿದ ನಂತರ ಮರುದಿನದಿಂದ (೨೬.೭.೨೦೨೧ ರಿಂದ) ಪ್ರತಿದಿನ ಸಾಧಕರ ಮೂಲ ನೋಂದಣಿ (Baseline Reading) ಬರುವವರೆಗೆ ನಿರೀಕ್ಷಣೆಯನ್ನು ಮಾಡಲಾಯಿತು. ಈ ಕಾಲಾವಧಿಯಲ್ಲಿ ಅವರಿಗೆ ಈ ನಾಮಜಪವನ್ನು ಕೇಳಿಸಲಾಗಿರಲಿಲ್ಲ. ಪರೀಕ್ಷಣೆಯಲ್ಲಿನ ಎಲ್ಲ ಸಾಧಕರು ೨೭.೭.೨೦೨೧ ಈ ದಿನದಂದು ಅವರ ಮೂಲ ನೋಂದಣಿಗೆ ಬಂದರು. ಇದರಿಂದ ‘ಸಾಧಕರ ಮೇಲೆ ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪದ ಪರಿಣಾಮವು ಸುಮಾರು ೨ ದಿನ ಉಳಿದುಕೊಂಡಿತು’, ಎಂಬುದು ಗಮನಕ್ಕೆ ಬಂದಿತು.

ಸೌ. ಮಧುರಾ ಕರ್ವೆ

೨. ಪರೀಕ್ಷಣೆಯಲ್ಲಿನ ಎಲ್ಲ ಸಾಧಕರ ಮೇಲೆ ಹುಣ್ಣಿಮೆಯ ಪರಿಣಾಮವು ಸ್ಪಷ್ಟವಾಗಿ ಕಂಡು ಬರುವುದು

ಇತರ ದಿನಗಳ ತುಲನೆಯಲ್ಲಿ ಜುಲೈ ೨೪ ಮತ್ತು ೨೫ ಈ ದಿನಗಳಂದು ಪರೀಕ್ಷಣೆಯಲ್ಲಿನ ಎಲ್ಲ ಸಾಧಕರ ಮೇಲೆ ನಾಮಜಪದ ಮೊದಲು ಆವರಣ ಹೆಚ್ಚಾಗಿರುವುದು ಕಂಡು ಬಂದಿತು. ಇದರ ಬಗ್ಗೆ ಮಾರ್ಗದರ್ಶನ ಮಾಡುವಾಗ ಸದ್ಗುರು ಡಾ. ಗಾಡಗೀಳರು, “ಅಮಾವಾಸ್ಯೆಯ ೨-೩ ದಿನಗಳ ಮೊದಲಿನಿಂದಲೇ ತೊಂದರೆಯು ಹೆಚ್ಚಾಗುತ್ತದೆ ಮತ್ತು ಹುಣ್ಣಿಮೆಯಾದ ನಂತರ ಮುಂದಿನ ೨-೩ ದಿನಗಳ ಕಾಲ ತೊಂದರೆಯು ಹೆಚ್ಚಾಗುತ್ತದೆ. ಇದರ ಕಾರಣವೆಂದರೆ, ಅಮಾವಾಸ್ಯೆಯ ೨-೩ ದಿನಗಳ ಮೊದಲೇ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸುತ್ತವೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಆ ಕಪ್ಪು ಶಕ್ತಿಯನ್ನು ಪ್ರಕ್ಷೇಪಿಸುತ್ತವೆ. ಆದುದರಿಂದ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ತೊಂದರೆಗಳು ಹೆಚ್ಚಾಗುತ್ತವೆ’’, ಎಂದು ಹೇಳಿದರು. ಸ್ವಲ್ಪದರಲ್ಲಿ, ಈ ಪ್ರಯೋಗದಿಂದ ‘ಹುಣ್ಣಿಮೆಯ ನಂತರ ಮುಂದಿನ ೨-೩ ದಿನ ಸಾಧಕರ ಆಧ್ಯಾತ್ಮಿಕ ತೊಂದರೆಗಳಲ್ಲಿ ಏಕೆ ಹೆಚ್ಚಳವಾಗುತ್ತದೆ ?’, ಎಂಬುದು ಗಮನಕ್ಕೆ ಬರುತ್ತದೆ. ಈ ಸಮಯದಲ್ಲಿ ಸಾಧಕರ ಸುತ್ತಲೂ ಹೆಚ್ಚು ಪ್ರಮಾಣದಲ್ಲಿರುವ ತೊಂದರೆದಾಯಕ ಆವರಣದೊಂದಿಗೆ ಹೋರಾಡಲು ಅವರ ಊರ್ಜೆ ಖರ್ಚಾಗುತ್ತದೆ. ಆದುದರಿಂದ ಹುಣ್ಣಿಮೆಯ ನಂತರ ಮುಂದಿನ ೨-೩ ದಿನ ಸಾಧಕರಿಗೆ ಆಯಾಸದ ಅರಿವಾಗುತ್ತದೆ.

೩. ಹುಣ್ಣಿಮೆಯ ಮೊದಲು ೨-೩ ದಿನ ಮತ್ತು ಹುಣ್ಣಿಮೆಯಾದ ನಂತರ ಮುಂದಿನ ೨ ದಿನ ಸದ್ಗುರು ಡಾ. ಗಾಡಗೀಳರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣದಲ್ಲಿ ಅಧಿಕ ಹೆಚ್ಚಳವಾಗುವುದು

ನಾಮಜಪವನ್ನು ಕೇಳಿದ ನಂತರ ಪರೀಕ್ಷಣೆಯಲ್ಲಿದ್ದ ಏಳೂ ದಿನ ಸದ್ಗುರು ಡಾ. ಗಾಡಗೀಳ ಇವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಮತ್ತು ಹುಣ್ಣಿಮೆಯ ಮೊದಲು ೨-೩ ದಿನ ಮತ್ತು ಹುಣ್ಣಿಮೆಯಾದ ನಂತರ ಮುಂದಿನ ೨ ದಿನ ಸದ್ಗುರು ಡಾ. ಗಾಡಗೀಳ ಇವರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣದಲ್ಲಿ ಅಧಿಕ ಹೆಚ್ಚಳವಾಯಿತು. ಇದು ಕೆಳಗೆ ನೀಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೩ ಅ. ಸದ್ಗುರು ಡಾ. ಗಾಡಗೀಳ ಇವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹುಣ್ಣಿಮೆಯ ೨-೩ ದಿನ ಮೊದಲು ಹೆಚ್ಚಳವಾಗಿರುವುದರ ಕಾರಣ : ೨೩.೭.೨೦೨೧ ಈ ದಿನ ಗುರುಪೂರ್ಣಿಮೆ ಇತ್ತು. ಸದ್ಗುರು ಡಾ. ಗಾಡಗೀಳ ಇವರು ‘ಸದ್ಗುರು’ ಪದವಿಯಲ್ಲಿನ ಸಮಷ್ಟಿ ಸಂತರು ಮತ್ತು ಅದರಲ್ಲಿಯೂ ಸನಾತನದ ಆಧ್ಯಾತ್ಮಿಕ ತೊಂದರೆಗಳ ಮೇಲಿನ ‘ಉಪಾಯಗುರು’ ಆಗಿರುವುದರಿಂದ ಅವರಿಂದ ಸಾಧಕರ ಕಲ್ಯಾಣಕ್ಕಾಗಿ ಗುರುಪೂರ್ಣಿಮೆಯ ೨-೩ ದಿನ ಮೊದಲಿನಿಂದಲೇ ಗುರುತತ್ತ್ವವು (ಚೈತನ್ಯ) ಪ್ರಕ್ಷೇಪಿಸಲು ಆರಂಭವಾಯಿತು.

೩ ಆ. ಸದ್ಗುರು ಡಾ. ಗಾಡಗೀಳ ಇವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹುಣ್ಣಿಮೆಯಾದ ನಂತರವೂ ೨ ದಿನ ಹೆಚ್ಚಳವಾಗುವುದರ ಕಾರಣ : ೨೩.೭.೨೦೨೧ ಈ ದಿನ ಹುಣ್ಣಿಮೆ ಇತ್ತು. ಹುಣ್ಣಿಮೆಯಾದ ನಂತರ ಮುಂದಿನ ೨-೩ ದಿನಗಳ ಕಾಲ ಸಾಧಕರ ತೊಂದರೆಗಳಲ್ಲಿ ಹೆಚ್ಚಳವಾಗುತ್ತದೆ. ಸದ್ಗುರು ಡಾ. ಗಾಡಗೀಳ ಕಾಕಾ ಇವರಲ್ಲಿ ಸಮಷ್ಟಿಯ ತೊಂದರೆಗಳು ಕಡಿಮೆಯಾಗಬೇಕೆಂಬ, ತೀವ್ರ ತಳಮಳವಿರುವುದರಿಂದ ಅವರಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿತವಾಯಿತು.

ಸ್ವಲ್ಪದರಲ್ಲಿ, ಸಂತರಲ್ಲಿನ ಚೈತನ್ಯ ಯಾವಾಗಲೂ ಸಮಷ್ಟಿಯ ಕಲ್ಯಾಣಕ್ಕಾಗಿ ಕಾರ್ಯನಿರತವಾಗುತ್ತದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ. ಇದಕ್ಕಾಗಿ ಸಂತರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

೪. ‘ಶ್ರೀ ನಿರ್ವಿಚಾರಾಯ ನಮಃ |’ ನಾಮಜಪದ ಪ್ರಯೋಗದ ನಿಷ್ಕರ್ಷ

ಈ ಪರೀಕ್ಷಣೆಯಿಂದ ‘ಈ ಜಪವು ಆಧ್ಯಾತ್ಮಿಕ ತೊಂದರೆಯಿಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗಾಗಿ ಉಪಯುಕ್ತವಾಗಿದೆ’, ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ಇದರ ಪರಿಣಾಮವೂ ಗಮನಕ್ಕೆ ಬರುತ್ತದೆ.

ಸ್ವಲ್ಪದರಲ್ಲಿ, ‘ಶ್ರೀ ನಿರ್ವಿಚಾರಾಯ ನಮಃ |’, ‘ಓಂ ನಿರ್ವಿಚಾರ’ ಮತ್ತು ‘ನಿರ್ವಿಚಾರ’ ಈ ಮೂರೂ ನಾಮಜಪಗಳು ಸಾಧಕರನ್ನು ನಿರ್ಗುಣ ಸ್ಥಿತಿಗೆ ಕರೆದುಕೊಂಡು ಹೋಗುತ್ತವೆ. ಈ ಮೂರೂ ನಾಮಜಪಗಳ ಹಿಂದೆ ಶ್ರೀಗುರುಗಳ (ಪರಾತ್ಪರ ಗುರು ಡಾಕ್ಟರರ) ಸಂಕಲ್ಪ ಕಾರ್ಯನಿರತವಾಗಿದೆ. ಆದುದರಿಂದ ಸಾಧಕರು ಈ ಮೂರೂ ನಾಮಜಪಗಳ ಪೈಕಿ ಯಾವುದೇ ನಾಮಜಪವನ್ನು ಮಾಡಿದರೂ, ಸಾಧಕರಿಗೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವು ಆಗಲಿಕ್ಕೇ ಇದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೫.೧೦.೨೦೨೧)

ವಿ-ಅಂಚೆ : [email protected]

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.