
‘ಶುಕ್ರವಾರ, ಕಾರ್ತಿಕ ಹುಣ್ಣಿಮೆ (೧೮/೧೯.೧೧.೨೦೨೧) ಈ ದಿನದಂದು ಇರುವ ಖಂಡಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಕಾಣಿಸದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.
೧. ಗ್ರಹಣ ಕಾಣಿಸುವ ಪ್ರದೇಶ : ಈ ಚಂದ್ರಗ್ರಹಣವು ಏಶಿಯಾಖಂಡದಲ್ಲಿನ ಪೂರ್ವದ ಕಡೆಗಿನ ಪ್ರದೇಶ, ಯುರೋಪಿನ ಹಲವು ಪ್ರದೇಶ, ಆಫ್ರಿಕಾ ಖಂಡದ ವಾಯುವ್ಯದಿಕ್ಕಿನ ಪ್ರದೇಶ, ಸಂಪೂರ್ಣ ಅಮೇರಿಕಾಖಂಡ ಮತ್ತು ಆಸ್ಟ್ರೇಲಿಯಾ ಪ್ರದೇಶದಲ್ಲಿ ಕಾಣಿಸುವುದು.
೨. ಚಂದ್ರಗ್ರಹಣದ ಸಮಯ (ಭಾರತದ ಸಮಯಕ್ಕನುಸಾರ)
೨ ಅ. ಸ್ಪರ್ಶ (ಆರಂಭ) : ಮಧ್ಯಾಹ್ನ ೧೨.೪೯
೨ ಆ. ಮಧ್ಯ : ಮಧ್ಯಾಹ್ನ ೨.೩೩
೨ ಇ. ಮೋಕ್ಷ (ಸಮಾಪ್ತಿ) : ಸಾಯಂಕಾಲ ೪.೧೭
೨ ಈ. ಗ್ರಹಣಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಕೊನೆಯವರೆಗಿನ ಒಟ್ಟು ಕಾಲಾವಧಿ) : ೩ ಗಂಟೆ ೨೮ ನಿಮಿಷಗಳು,’ (ಆಧಾರ : ದಾತೆ ಪಂಚಾಂಗ)
ಟಿಪ್ಪಣಿ ೧ – ಪರ್ವ ಎಂದರೆ ಸಂಧಿಕಾಲ ಅಥವಾ ಪುಣ್ಯಕಾಲವಾಗಿದೆ. ಗ್ರಹಣ ಸ್ಪರ್ಶದಿಂದ ಗ್ರಹಣ ಮೋಕ್ಷದ ವರೆಗಿನ ಕಾಲವು ಪುಣ್ಯಕಾಲವಾಗಿದೆ. ‘ಈ ಕಾಲದಲ್ಲಿ ಈಶ್ವರೀ(ಈಶ್ವರನ) ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.’
– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, ಸರ್ಟಿಫೈಡ್ ಡೌಸರ್, ರಮಲ ಪಂಡಿತ ಮತ್ತು ಹಸ್ತಾಕ್ಷರಗಳ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೧೦.೨೦೨೧)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ
ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು