ದ್ವಾರಕಾ (ಗುಜರಾತ)ನಲ್ಲಿ ಭಾರತೀಯ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ನೌಕಾಪಡೆ : ಒಬ್ಬ ಮೀನುಗಾರ ಸಾವು, ಮತ್ತೊಬ್ಬರಿಗೆ ಗಾಯ

ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !- ಸಂಪಾದಕರು 

ದ್ವಾರಕಾ (ಗುಜರಾತ) – ಇಲ್ಲಿನ ಭಾರತದ ಗಡಿಯಲ್ಲಿ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಪಾಕಿಸ್ತಾನಿ ನೌಕಾಪಡೆಯು ಗುಂಡಿನ ದಾಳಿ ನಡೆಸಿದ್ದು ಅದರಲ್ಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮೀನುಗಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನಿ ನೌಕಾಪಡೆ ಗುಂಡಿನ ದಾಳಿ ನಡೆಸಿದಾಗ ದೋಣಿ ಭಾರತದ ಗಡಿಭಾಗದಲ್ಲಿಯೇ ಇತ್ತು.

ಕಳೆದ ವರ್ಷ ಏಪ್ರಿಲ್‍ನಲ್ಲಿಯೂ ಪಾಕಿಸ್ತಾನದ ನೌಕಾಪಡೆಯು ಗುಜರಾತ ಕರಾವಳಿಯಲ್ಲಿ ಭಾರತೀಯ ಗಡಿಯಲ್ಲಿರುವ ಭಾರತೀಯ ಮೀನುಗಾರರ ಎರಡು ದೋಣಿಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದರು.