ಟ್ವಿಟರನ ಹಿಂದುದ್ವೇಷ !
ಟ್ವಿಟರನ ಈ ರೀತಿಯ ದಬ್ಬಾಳಿಕೆ ಹೊಸತಲ್ಲ. ಈ ಮೊದಲೂ ಟ್ವಿಟರ್ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ಮುಖಂಡರ ಅಕೌಂಟ್ (ಖಾತೆ) ಅಮಾನತುಗೊಳಿಸಿತ್ತು. ಟ್ವಿಟರನ ಈ ದಾದಾಗಿರಿಯನ್ನು ತೊಡೆದು ಹಾಕಲು ಹಿಂದೂಗಳು ಸಮಾಂತರ ಮಾಧ್ಯಮವನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !- ಸಂಪಾದಕರು

ನವ ದೆಹಲಿ – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರವನ್ನು ಅಲ್ಲಿಯ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತಿದೆ. (ಬಾಂಗ್ಲಾದೇಶದ ಹಿಂದುದ್ವೇಷಿ ಹಾಗೂ ಮುಸಲ್ಮಾನ ಪ್ರೇಮಿ ಪ್ರಸಾರ ಮಾಧ್ಯಮಗಳು ಹಾಗೂ ಭಾರತದಲ್ಲಿನ ಪ್ರಸಾರ ಮಾಧ್ಯಮಗಳ ನಡುವೆ ವಿಶೇಷವಾದ ವ್ಯತ್ಯಾಸವೇನೂ ಇಲ್ಲಾ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು) ಆದ್ದರಿಂದ ಈ ಅತ್ಯಾಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿನ ಮುಂದೆ ತರಲು ಹಿಂದೂಗಳು ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಬಾಂಗ್ಲಾದೇಶದಲ್ಲಿನ ‘ಇಸ್ಕಾನ್’ ಹಾಗೂ ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ಇವರ ಟ್ವಿಟರ ಹ್ಯಾಂಡಲ ಮುಂದಾಳತ್ವವಹಿಸಿದ್ದರು; ಆದರೆ ಅವರಿಬ್ಬರ ಟ್ವಿಟರ ಅಕೌಂಟಅನ್ನು ಟ್ವಿಟರ ಹಠಾತ್ತಾಗಿ ಅಮಾನತುಗೊಳಿಸಿದೆ. ಬಾಂಗ್ಲಾದೇಶದಲ್ಲಿನ ಇಸ್ಕಾನ ದೇವಾಲಯದ ಮೇಲೆ ದಾಳಿ ಮಾಡಿ ಮತಾಂಧರು 2 ಸಾಧುಗಳ ಹತ್ಯೆ ಮಾಡಿದರು. ಟ್ವಿಟರನ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಅತ್ಯಾಚಾರಗಳ ಮಾಹಿತಿ ಜಗತ್ತಿಗೆ ಸಿಗುತ್ತಿತ್ತು. ಆದ್ದರಿಂದ ಜಗತ್ತಿನಾದ್ಯಂತ ಹಿಂದೂಗಳಿಂದ ಬಾಂಗ್ಲಾದೇಶದ ಸರಕಾರದ ಮೇಲೆ ಕ್ರಮ ಕೈಗೊಳ್ಳುವ ಒತ್ತಡವು ಹೆಚ್ಚಾಗಿತ್ತು.
‘Hindu voices are being silenced’: ISKCON pulls up Twitter for removing two accounts https://t.co/17EvTN8Hqf
— Republic (@republic) October 20, 2021
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ