ಮಹಾರಾಷ್ಟ್ರದ ನಿವಳಿಯಲ್ಲಿ (ಚಿಪಳೂಣ ತಾಲೂಕು, ರತ್ನಾಗಿರಿ ಜಿಲ್ಲೆ) ಪೂಜ್ಯ (ಹ.ಭ.ಪ) ಸಖಾರಾಮ ಬಾಂದ್ರೆ ಮಹಾರಾಜರ (೭೦ ವರ್ಷ) ದೇಹತ್ಯಾಗ !

ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು

ಚಿಪಳೂಣ ತಾಲೂಕಿನ ನಿವಳಿ (ಕಾತಳವಾಡಿ) ಯ ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು (೭೦ ವರ್ಷ) ೨೪ ಆಗಸ್ಟ್ ೨೦೨೧ ರ ಮಧ್ಯರಾತ್ರಿ ೧೨.೧೫ ಕ್ಕೆ ಅವರ ನಿವಾಸದಲ್ಲಿ ದೇಹತ್ಯಾಗ ಮಾಡಿದರು. ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ ೨೫ ರಂದು ಮಧ್ಯಾಹ್ನ ೧ ಗಂಟೆಗೆ ನೆರವೇರಿಸಲಾಯಿತು. ಪೂ. ಸಖಾರಾಮ ಬಾಂದ್ರೆ  ಮಹಾರಾಜರು ಒಬ್ಬ ಮಗ, ಸೊಸೆ, ಮಗಳು, ಅಳಿಯ, ೩ ಸಹೋದರರು, ೩ ಅತ್ತಿಗೆಯರು, ಸೋದರಳಿಯ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಬಾಂದ್ರೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ೩೧ ಜನವರಿ ೨೦೨೧ ರಂದು ಸನಾತನ ಸಂಸ್ಥೆಯ ವತಿಯಿಂದ ಹ.ಭ.ಪ. ಸಖಾರಾಮ ಬಾಂದ್ರೆ ಮಹಾರಾಜರು ಸಂತರಾಗಿದ್ದಾರೆ ಎಂದು ಕೌಟುಂಬಿಕ ಸಮಾರಂಭದಲ್ಲಿ ಘೋಷಿಸಲಾಗಿತ್ತು. ಸನಾತನದ ಸದ್ಗುರು ಸತ್ಯವಾನ ಕದಮ ಇವರು ಅವರ ಸನ್ಮಾನ ಮಾಡಿದ್ದರು.