ಧಾರ್ಮಿಕ ವಿಷಯದಲ್ಲಿ ಆಗುವ ರಾಜಕೀಯ ಹಸ್ತಕ್ಷೇಪವು ಢಾಂಬಿಕವಾಗಿದೆ – ಅಶ್ವತೀ ತಿರುನಾಲ ಗೌರಿ ಲಕ್ಷ್ಮೀಬಾಯಿ, ಕೇರಳ

ಅಶ್ವತೀ ತಿರುನಾಲ ಗೌರಿ ಲಕ್ಷ್ಮೀಬಾಯಿ

ನಮ್ಮ ರಾಜಮನೆತನದಿಂದ ತಿರುವನಂತಪುರಮ್‌ನಲ್ಲಿನ ಪದ್ಮನಾಭಸ್ವಾಮಿ ದೇವಸ್ಥಾನದ ವ್ಯವಸ್ಥೆಯನ್ನು ನೋಡಿಕೊಳ್ಳಲಾಗುತ್ತದೆ. ನಾನು ಸ್ವತಃ ಈ ದೇವರ ಸೇವಕನೆಂದು ತಿಳಿದಿದ್ದೇನೆ, ಆದರೆ ಯಾವ ಸರಕಾರವು ದೇವರನ್ನು ನಂಬುವುದಿಲ್ಲವೋ ಆ ಸರಕಾರವು ದೇವಸ್ಥಾನದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬಲ್ಲದು ? ಕೇರಳದಲ್ಲಿ ವಿವಿಧ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಅವುಗಳ ಮುಖಾಂತರ ದೇವಸ್ಥಾನದ ವ್ಯವಸ್ಥಾಪನೆಯನ್ನು ನೋಡಿಕೊಳ್ಳಲಾಗುತ್ತದೆ. ಇದರಲ್ಲಿ ಅನೇಕ ರಾಜಕೀಯ ಪಕ್ಷಗಳೂ ಸೇರಿವೆ ಧಾರ್ಮಿಕ ವಿಷಯದಲ್ಲಿ ಆಗುವ ರಾಜಕೀಯ ಹಸ್ತಕ್ಷೇಪವು ಢಾಂಬಿಕತನವಾಗಿದ್ದು ಅದನ್ನು ನಿಲ್ಲಿಸಬೇಕು.