ಗುರುಗಳ ಮಹತ್ವ

೧. ಭಗವಂತನು ಓರ್ವ ಶಿಷ್ಯನಿಗೆ ಗುರುಗಳ ಮಹತ್ವವನ್ನು ಹೇಳುವುದು

‘ಒಂದು ಸಲ ಗುರು ಮತ್ತು ಭಗವಂತ ಇವರಿಬ್ಬರೂ ಓರ್ವ ಶಿಷ್ಯನ ಮನೆಗೆ ಬರುತ್ತಾರೆ. ಆಗ ಗುರು ಮತ್ತು ಭಗವಂತನೊಂದಿಗಾದ ಶಿಷ್ಯನ ಸಂಭಾಷಣೆಯನ್ನು ಮುಂದೆ ನೀಡಲಾಗಿದೆ.

ಗುರು (ಶಿಷ್ಯನನ್ನು ಉದ್ದೇಶಿಸಿ) : ನೀನು ಮೊದಲು ಭಗವಂತನ ಚರಣಗಳ ಬಳಿ ನಮಸ್ಕರಿಸಲು ಹೋಗು.

ಭಗವಂತ : ನೀನು ಮೊದಲು ಗುರುಗಳಿಗೆ ನಮಸ್ಕಾರ ಮಾಡು.

(ಶಿಷ್ಯನು ಗುರುಗಳ ಚರಣಗಳ ಬಳಿ ಹೋಗುತ್ತಾನೆ.)

ಗುರು : ನಾನು ಭಗವಂತನನ್ನು ನಿನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಆದುದರಿಂದ ಮೊದಲು ನೀನು ಭಗವಂತನಿಗೆ ನಮಸ್ಕಾರ ಮಾಡು.

(ಶಿಷ್ಯನು ಪುನಃ ಭಗವಂತನ ಚರಣಗಳ ಬಳಿಗೆ ಬರುತ್ತಾನೆ.)

ಭಗವಂತ : ನಿನ್ನ ಗುರುಗಳು ಭಗವಂತನನ್ನು ನಿನ್ನ ಜೀವನದಲ್ಲಿ ತಂದಿದ್ದಾರೆ. ಅವರು ನನ್ನ ಮುದ್ದಿನ ಭಕ್ತನಾಗುವ ಮಾರ್ಗವನ್ನು ನಿನಗೆ ಹೇಳಿದ್ದಾರೆ. ಹಾಗಾಗಿ ಮೊದಲು ನೀನು ಗುರುಗಳ ಚರಣಗಳ ಹತ್ತಿರ ಹೋಗು.

(ಶಿಷ್ಯನು ಗುರುಗಳ ಚರಣಗಳ ಬಳಿಗೆ ಹೋಗುತ್ತಾನೆ.)

ಗುರು : ನಾನು ನಿನಗೆ ಕೇವಲ ಭಕ್ತಿಯ ಮಾರ್ಗವನ್ನು ಹೇಳಿದೆನು; ಆದರೆ ಭಗವಂತನು ನಿನ್ನನ್ನು ನಿರ್ಮಿಸಿದ್ದಾನೆ. ಅಲ್ಲವೇ ? ಆದುದರಿಂದ ನೀನು ಮೊದಲು ಭಗವಂತನ ಚರಣಗಳಲ್ಲಿ ನತಮಸ್ತಕನಾಗು.

ತದನಂತರ ಆ ಶಿಷ್ಯನು ಭಗವಂತನ ಚರಣಗಳ ಬಳಿಗೆ ಹೋಗುತ್ತಾನೆ.

ಭಗವಂತ : (ಶಿಷ್ಯನನ್ನು ಉದ್ದೇಶಿಸಿ) ನಿಲ್ಲು. ಇದೆಲ್ಲವೂ ಸರಿಯಿದೆ; ಆದರೆ ಈಗ ನಾನು ನಿನಗೆ ಭಗವಂತನ ಮತ್ತು ಗುರುಗಳ ಪ್ರಮುಖ ತತ್ತ್ವಗಳ ಬಗ್ಗೆ ಹೇಳುವವನಿದ್ದೇನೆ.

ಕು. ಪ್ರಿಯಾಂಕಾ ಲೋಟಲೀಕರ

ಭಗವಂತನ ತತ್ತ್ವಕ್ಕನುಸಾರ ನ್ಯಾಯವ್ಯವಸ್ಥೆ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು. ನೀನು ಈ ಮಾಯಾಜಾಲದಲ್ಲಿ ಸಿಲುಕುವಿ ಮತ್ತು ಅದರಲ್ಲಿ ಮುಳುಗಿ ಹೋಗುವೆ. ನಿನ್ನ ಆತ್ಮ ಸಂಘರ್ಷ ಮಾಡುವುದು.

ಈಗ ನಾನು ನಿನಗೆ ಗುರುಗಳ ತತ್ತ್ವಗಳನ್ನು ಹೇಳುವೆನು. ಗುರು ಎಂದರೆ ಪ್ರೀತಿ ಶಾಂತ ಮೂರ್ತಿ. ಶಿಷ್ಯನು ಹೇಗೆ ಇದ್ದರೂ ಮತ್ತು ಹೇಗೆ ನಡೆದುಕೊಂಡರೂ, ಅವನ ಕರ್ಮಗಳು ಹೇಗಿದ್ದರೂ, ಗುರುಗಳು ತಮ್ಮ ಶಿಷ್ಯನನ್ನು ಪ್ರೀತಿಯಿಂದ ತಮ್ಮ ಮಡಿಲಲ್ಲಿ ತೆಗೆದುಕೊಳ್ಳುತ್ತಾರೆ. ಅವರು ತಮ್ಮ ಶಿಷ್ಯನನ್ನು ಶುದ್ಧ ಮಾಡುತ್ತಾರೆ ಮತ್ತು ನಂತರ ಅವರು ನನ್ನ ಚರಣಗಳ ವರೆಗೆ ತರುತ್ತಾರೆ. ಗುರುಗಳು ಎಂದಿಗೂ ಯಾರನ್ನೂ ತಾವಾಗಿಯೇ ತಮ್ಮಿಂದ ದೂರ ಒಯ್ಯವುದಿಲ್ಲ. ತದ್ವಿರುದ್ಧ ಅವರು ತಮ್ಮ ಶಿಷ್ಯನನ್ನು ವಜ್ರದಂತೆ ಬದಿಗಳನ್ನು ನಿರ್ಮಿಸುತ್ತಾರೆ. ಅವನನ್ನು ಶುದ್ಧ ಮಾಡಿ ನಂತರ ನನ್ನ ಚರಣಗಳಲ್ಲಿ ತರುತ್ತಾರೆ. ಆದುದರಿಂದ ನಾನು ಯಾವಾಗಲೂ ಪೃಥ್ವಿಯ ಮೇಲೆ ಗುರುಗಳ ರೂಪದಲ್ಲಿಯೇ ಬರುತ್ತೇನೆ.

೨. ಗುರು ಮತ್ತು ಈಶ್ವರ ಒಬ್ಬರೇ ಆಗಿರುವುದರಿಂದ ಅವರಲ್ಲಿ ಅದ್ವೈತವಿರುತ್ತದೆ, ಆದುದರಿಂದ ಈಶ್ವರನು ಗುರುಗಳ ರೂಪದಲ್ಲಿ ಭೂಲೋಕದಲ್ಲಿ ವಾಸಿಸುತ್ತಾನೆ

‘ಗುರುಗಳು ಈ ಜನ್ಮದಲ್ಲಿ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಈಶ್ವರನು ಜನ್ಮಜನ್ಮಾಂತರಗಳಲ್ಲಿ ಕಾಳಜಿ ತೆಗೆದುಕೊಳ್ಳುತ್ತಾನೆ’, ಇದು ಸತ್ಯವೇ ಆಗಿದೆ’, ಎಂದು ಹೇಳಿ ಗುರುಗಳು ತಮ್ಮ ಶಿಷ್ಯನನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಾರೆ. ಇದು ಗುರುಗಳ ಒಂದು ಕಲಿಕೆಯಾಗಿದೆ; ಆದರೆ ಪ್ರತಿಯೊಬ್ಬ ಶಿಷ್ಯನಿಗೆ ಗುರು ಮತ್ತು ಈಶ್ವರ ಒಂದೇ ಆಗಿರುತ್ತಾರೆ. ಆದುದರಿಂದ ಅವರಲ್ಲಿ ಅದ್ವೈತವಿರುವುದರಿಂದ ಈಶ್ವರನು ಯಾವಾಗಲೂ ಗುರುಗಳ ರೂಪದಲ್ಲಿ ಭೂಲೋಕದಲ್ಲಿ ವಾಸಿಸುತ್ತಾನೆ.’

– ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೪.೨೦೨೦)