ವಿವಿಧ ಕೃತಿಗಳಿಂದ ಭಕ್ತರಿಗೆ ಕಲಿಸುವ ಪ.ಪೂ. ಭಕ್ತರಾಜರು ಗುರುಕೃಪೆಯನ್ನು ಸಂಪಾದಿಸಲು ಓರ್ವ ಸಾಧಕನಲ್ಲಿರಬೇಕಾದ ಮಹತ್ವದ ಗುಣಗಳೆಂದರೆ ಗುರುಗಳ ಬಗ್ಗೆ ಭಕ್ತಿ ಮತ್ತು ಶ್ರದ್ಧೆ. ಈ ಗುಣಗಳಿದ್ದರೆ ಮಾತ್ರ ಸಾಧಕನು ತನ್ನ ಸಾಧನೆಯಲ್ಲಿ ಮುಂದುಮುಂದಿನ ಪ್ರಗತಿಯನ್ನು ಶೀಘ್ರವಾಗಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪ್ರೇರಣಾಸ್ಥಾನರಾದ ಪ.ಪೂ. ಭಕ್ತರಾಜ ಮಹಾರಾಜರಿಗೆ (ಬಾಬಾ) ತಮ್ಮ ವೈಯಕ್ತಿಕ ಜೀವನ, ಸೇವೆ ಮುಂತಾದ ಪ್ರಸಂಗಗಳಲ್ಲಿ ಗುರುಗಳ ಮೇಲೆ ಎಷ್ಟು ಶ್ರದ್ಧೆ ಹಾಗೂ ಭಕ್ತಿ ಇತ್ತು ಎಂಬುದು ಮುಂದಿನ ಪ್ರಸಂಗಗಳಿಂದ ಸ್ಪಷ್ಟವಾಗುತ್ತದೆ. ಜುಲೈ ೭ ರಂದು ಇರುವ ಅವರ ಜನ್ಮೋತ್ಸವದ ನಿಮಿತ್ತ ಕೋಟಿ ಕೋಟಿ ಪ್ರಣಾಮಗಳು.

ಪ.ಪೂ. ಭಕ್ತರಾಜ ಮಹಾರಾಜರಿಗೆ ಗುರುಗಳ ಬಗೆಗಿದ್ದ ಭಕ್ತಿ ಮತ್ತು ಶ್ರದ್ಧೆ
ಪ.ಪೂ. ಭಕ್ತರಾಜ ಮಹಾರಾಜರಿಗೆ ತಮ್ಮ ಗುರುಗಳಾದ ಶ್ರೀ ಅನಂತಾನಂದ ಸಾಯೀಶರ ಬಗೆಗಿನ ಶ್ರದ್ಧೆ ಹಾಗೂ ಭಕ್ತಿ ಎಷ್ಟು ಉಚ್ಚ ಮಟ್ಟದ್ದಾಗಿತ್ತು ಎಂಬುದು ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ.
೧. ಗುರುಗಳ ಊಟವಾದ ನಂತರ ಅವರ ಎಂಜಲನ್ನು ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಬಾಬಾರವರು ದಿನನಿತ್ಯ ಬೆಳಗ್ಗೆ ಗುರುಗಳ ಕಾಲನ್ನು ತೊಳೆದು ಆ ನೀರನ್ನು ‘ತೀರ್ಥ’ವೆಂದು ಸೇವಿಸುತ್ತಿದ್ದರು. ಒಮ್ಮೆ ಕೆಸರಿರುವ ರಸ್ತೆಯಿಂದ ಶ್ರೀ ಸಾಯೀಶರು ಹೋಗುತ್ತಿರುವಾಗ ಶ್ರೀ ಸಾಯೀಶರ ಕಾಲುಗಳ ಸ್ಪರ್ಶವಾದ ಗುಂಡಿಯಲ್ಲಿನ ಕೆಸರು ಮಿಶ್ರಿತ ನೀರನ್ನು ತೀರ್ಥವೆಂದು ಕುಡಿದರು ! ಗುರುಗಳ ಬಟ್ಟೆಯನ್ನು ತೊಳೆದ ನಂತರ ಉಳಿದ ಸಾಬೂನಿನ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದರು. ಇಂತಹ ವಿಷಯಗಳ ಬಗ್ಗೆ ಸಾಧಕರು ಕಲ್ಪನೆಯನ್ನೂ ಮಾಡಲಾರರು.
೨. ಒಮ್ಮೆ ಬಾಬಾರವರು ತಮ್ಮ ಮಗಳಾದ ಮೀನಾಳನ್ನು ಕರೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ‘ಮಗಳನ್ನು ಜೋಪಾಸನೆ ಮಾಡುವವನು ನಾನು ಯಾರು ? ಗುರುಗಳು ಸಮರ್ಥರಿದ್ದಾರೆ’ ಎಂಬ ವಿಚಾರ ಬಂದಿತು ಮತ್ತು ಅವರು ಮೀನಾಳನ್ನು ರಸ್ತೆಯಲ್ಲಿ ಬಿಟ್ಟು ಹೊರಟು ಹೋದರು. ಅವಳು ಸಂಜೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿದಳು.
೩. ಒಮ್ಮೆ ಎಲ್ಲರ ಒತ್ತಾಯದ ಮೇರೆಗೆ ಅನಂತಾನಂದ ಸಾಯೀಶರು ಬಾಬಾರವರಿಗೆ ‘ಸತ್ಯನಾರಾಯಣ ಪೂಜೆ’ಯನ್ನು ಮಾಡಲು ಹೇಳಿದರು. ಆಗ ಬಾಬಾರವರು ಸತ್ಯನಾರಾಯಣ ಪೂಜೆಯನ್ನು ಮಾಡಿ ಅದರ ನೈವೇದ್ಯವನ್ನು ಗುರುಗಳಿಗೇ ತೋರಿಸಿದರು.
೪. ಒಮ್ಮೆ ಸೌ. ಸುಶೀಲಾರವರು (ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ) ಅನಾರೋಗ್ಯಪೀಡಿತರಾಗಿದ್ದರು. ಗುರುಗಳು ಬಂದ ನಂತರ ಸುಶೀಲಾರನ್ನು ಕಂಡು ‘ಸುಶೀಲಾಗೆ ಅನಾರೋಗ್ಯವಿದೆಯೇ’ ಎಂದು ಬಾಬಾರಲ್ಲಿ ವಿಚಾರಿಸಿದರು. ಆಗ ಬಾಬಾರವರು ‘ಹೌದು’ ಎಂದರು. ಆದರೆ ಅಡುಗೆಯನ್ನು ತಯಾರಿಸಲಿಲ್ಲ. ಅದರ ಬಗ್ಗೆ ಗುರುಗಳು ಕೇಳಿದಾಗ ಬಾಬಾರವರು ‘ಎಲ್ಲ ಸಂಸಾರವನ್ನು ನಿಮಗೆ ಅರ್ಪಿಸಿದ್ದೇನೆ. ಆದುದರಿಂದ ನಾನೇಕೆ ಚಿಂತಿಸಲಿ ?’ ಎಂದು ಹೇಳಿದರು. ಅನಂತರ ಸ್ವತಃ ಗುರುಗಳು ಅಡುಗೆಯನ್ನು ತಯಾರಿಸಿ ದಿನಕರ (ಬಾಬಾ) ಹಾಗೂ ಸುಶೀಲಾರಿಗೆ ಬಡಿಸಿದರು.
೫. ಒಮ್ಮೆ ಗುರುಗಳು ‘ನಾನು ದೀನೂ(ಬಾಬಾರವರ ಪೂರ್ವಾಶ್ರಮದ ಹೆಸರು)ಗೆ ಎಲ್ಲವನ್ನೂ ನೀಡಿದ್ದೇನೆ’ ಎಂದು ಹೇಳಿದರು. ಮುಂದೆ ಮೊರಟಕ್ಕಾ ಎಂಬ ಆಶ್ರಮದ ಹರಾಜಿನ ಬಗ್ಗೆ ನೋಟಿಸು ಬಂದಾಗ ಬಾಬಾರವರು ‘ಎಲ್ಲ’ ಎಂಬುದರಲ್ಲಿ ಇದು ಸಹ ಬಂದಿತು ಎಂದರು. ಈ ಪ್ರಸಂಗದಲ್ಲಿಯೂ ಗುರುಗಳ ಮೇಲಿನ ಅವರ ಶ್ರದ್ಧೆ ಕಿಂಚಿತ್ತೂ ವಿಚಲಿತವಾಗಲಿಲ್ಲ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು