ಇಮಾಮರ ಸಭೆಯಲ್ಲಿ ಪಶ್ಚಿಮ ಬಂಗಾಳದ ಹಿಂಸಾಚಾರದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ
ಕೋಲಕಾತಾ(ಪಶ್ಚಿಮ ಬಂಗಾಳ): ಭಾಜಪ ಹಣ ನೀಡಿದ ಕೆಲವು ಸುದ್ದಿ ವಾಹಿನಿಗಳು ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ 8 ವಿಡಿಯೋಗಳನ್ನು ತೋರಿಸಿ, ಈ ದಂಗೆಗಳು ಬಂಗಾಳದಲ್ಲಿ ನಡೆದಿವೆ ಎಂದು ಹೇಳಿ ನಮ್ಮ ರಾಜ್ಯವನ್ನು ಅಪಕೀರ್ತಿಗೊಳಿಸುವ ಪ್ರಯತ್ನ ಮಾಡಿವೆ. ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಭಾಜಪ ಹೊರಗಿನ ಜನರನ್ನು ಕರೆಸಿ ಹಿಂಸಾಚಾರ ನಡೆಸಿದೆ. ವಕ್ಫ್ ವಿಷಯದ ಕುರಿತು ಮುಸ್ಲಿಮರನ್ನು ಪ್ರಚೋದಿಸಲಾಗಿದೆ. ಮುರ್ಶಿದಾಬಾದ್ ನ ಹಿಂಸಾಚಾರವು ಪೂರ್ವನಿಯೋಜಿತ ಸಂಚಾಗಿತ್ತು. ಬಾಂಗ್ಲಾದೇಶಿ ಸುಳುಕೋರರನ್ನು ಬಂಗಾಳಕ್ಕೆ ಬರಲು ಏಕೆ ಬಿಡಲಾಯಿತು, ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಜಪ ವಿರುದ್ಧ ಕಿಡಿಕಾರಿದರು. “ನಾನು ಇಮಾಮರಿಗೆ ಕೈ ಮುಗಿದು ಶಾಂತಿಗಾಗಿ ಮನವಿ ಮಾಡುತ್ತೇನೆ. ಈ ವಿಷಯದ ಬಗ್ಗೆ ಇಂಡಿಯಾ ಒಕ್ಕೂಟವು ಒಗ್ಗೂಡಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ನಮಗೆ ಶಾಂತಿ ಬೇಕು” ಎಂದು ಅವರು ಕರೆ ನೀಡಿದರು. ಮಮತಾ ಅವರು ಇಮಾಮರ ಸಭೆಯಲ್ಲಿ ಮಾತನಾಡುತ್ತಿದ್ದರು.
ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಬಿಡುವುದಿಲ್ಲ!
ಮಮತಾ ಬ್ಯಾನರ್ಜಿ ಮುಂದೆ ಮಾತನಾಡಿ, ನಾವು ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಬಿಡುವುದಿಲ್ಲ. ವಕ್ಫ್ ಕಾನೂನಿನ ಬಗ್ಗೆ ನಿತೀಶ ಕುಮಾರ ಮತ್ತು ಚಂದ್ರಬಾಬು ನಾಯ್ಡು ಏಕೆ ಮೌನವಾಗಿದ್ದಾರೆ? ಅವರಿಗೆ ಕೇವಲ ತಮ್ಮ ಅಧಿಕಾರದ ಬಗ್ಗೆ ಮಾತ್ರ ಚಿಂತೆಯಿದೆ.
ಇಮಾಮರು ಭಾಜಪ ರೂಪಿಸಿದ ಪಿತೂರಿಯಲ್ಲಿ ಸಿಲುಕಬಾರದು!
ನಾನು ಎಲ್ಲಾ ಇಮಾಮ್ ಮತ್ತು ಧರ್ಮಗುರುಗಳನ್ನು ಗೌರವಿಸುತ್ತೇನೆ. ನಾವು ರವೀಂದ್ರನಾಥ ಠಾಗೋರ್ ಅವರ ವಿಚಾರಗಳನ್ನು ನಂಬುತ್ತೇವೆ. ಬಂಗಾಳದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಭಾಜಪ ರಚಿಸಿದ ಪಿತೂರಿಯಲ್ಲಿ ಸಿಲುಕಬೇಡಿ. ನೀವು ಏನನ್ನಾದರೂ ಹೇಳಲು ಬಯಸಿದರೆ, ನನ್ನ ಮುಂದೆ ಬಂದು ಹೇಳಿ, ನನ್ನ ಹಿಂದೆ ಅಲ್ಲ ಎಂದು ಮಮತಾ ಕರೆ ನೀಡಿದರು.
ಹಿಂಸಾಚಾರದಲ್ಲಿ ತೃಣಮೂಲ ಕಾಂಗ್ರೆಸ್ ಪಾಲ್ಗೊಂಡಿಲ್ಲ!
ನಮ್ಮ ಪಕ್ಷವು ಹಿಂಸಾಚಾರಕ್ಕೆ ಕಾರಣವಾಗಿದ್ದರೆ, ನಮ್ಮ ಪಕ್ಷದ ನಾಯಕರ ಮನೆಗಳ ಮೇಲೆ ದಾಳಿ ನಡೆಯುತ್ತಿರಲಿಲ್ಲ. ಸರಕಾರ ಯಾವಾಗಲೂ ವಕ್ಫ್ ಸುಧಾರಣಾ ಕಾನೂನಿನ ವಿರುದ್ಧವಾಗಿದೆ ಮತ್ತು ಮುಸ್ಲಿಮರ ಚಿಂತೆಯನ್ನು ದೂರಗೊಳಿಸಲು ವಚನಬದ್ಧವಾಗಿದೆ.
“BJP is defaming Bengal using fake videos!” — claims CM Mamata Banerjee ⚠️
She made this statement at a meeting with Imams, while Bengal burns in communal violence! 🔥
While Hindu victims speak out on camera, Mamata calls them fake and leaves them helpless in her own state!… pic.twitter.com/rK45VlpM7j
— Sanatan Prabhat (@SanatanPrabhat) April 16, 2025
“ರಾಮನವಮಿಯಂದು ಗಲಭೆ ಮಾಡಲು ಭಾಜಪ ಯೋಜಿಸಿತ್ತು!” – ಮಮತಾ ಬ್ಯಾನರ್ಜಿ
ರಾಮನವಮಿಯ ದಿನದಂದು ಗಲಭೆ ನಡೆಸಲು ಭಾಜಪ ಯೋಜಿಸಿತ್ತು; ಆದರೆ ಜನರು ಅದನ್ನು ವಿಫಲಗೊಳಿಸಿದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಪ್ರತಿಯೊಂದು ಸಮಾಜದಲ್ಲಿಯೂ ಸಹ ಹಣಕ್ಕಾಗಿ ತಮ್ಮ ಮಾತೃಭೂಮಿಗೆ ದ್ರೋಹ ಬಗೆಯುವ ಕೆಲವು ದೇಶದ್ರೋಹಿಗಳಿರುತ್ತಾರೆ. ಭಾರತ ಸರಕಾರಕ್ಕೆ ಇಷ್ಟೊಂದು ತರಾತುರಿ ಏಕೆ? ಬಾಂಗ್ಲಾದೇಶದ ಪರಿಸ್ಥಿತಿ ಯಾರಿಗೂ ತಿಳಿದಿಲ್ಲವೇ? ನೀವು ಮಹಮ್ಮದ್ ಯೂನುಸ್ ಅವರೊಂದಿಗೆ ರಹಸ್ಯ ಸಭೆಗಳನ್ನು ನಡೆಸುತ್ತೀರಿ, ನಿಮ್ಮ ಯೋಜನೆಯೇನು?
ನಾನು ಪ್ರತಿ ವರ್ಷ ಈದ್ ನಮಾಜ ಪಠಣ ಮಾಡಲು ಹೋಗುತ್ತೇನೆ!ಪ್ರಧಾನಿ ಮೋದಿ ಭಾರತವನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾಜಪ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಧ್ರುವೀಕರಣ ಮಾಡುತ್ತಿದೆ. ನಾನು ಪ್ರತಿ ವರ್ಷ ಈದ್ ದಿನದಂದು ರೆಡ್ ರೋಡ್ನಲ್ಲಿ ಪ್ರಾರ್ಥನೆಗೆ ಹೋಗುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡರು. |
ಸಂಪಾದಕೀಯ ನಿಲುವು
|