ಆಹಾರವನ್ನು ಸೇವಿಸುವ ಪ್ರಕ್ರಿಯೆ ಹೇಗೆ ಇರುತ್ತದೆ ?

೧. ಆಹಾರವನ್ನು ಸೇವಿಸುವಾಗ ನಮ್ಮ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯೂ ಆಹಾರವನ್ನು ಸೇವಿಸುತ್ತವೆ

‘ಊಟ ಎಂದಾಕ್ಷಣ, ನಮಗೆ ಆಹಾರದ ನೆನಪಾಗುತ್ತದೆ. ನಮ್ಮ ದೇಹದ ಪೋಷಣೆಗಾಗಿ ಆಹಾರದ ಆವಶ್ಯಕತೆ ಇರುತ್ತದೆ. ಯಾವುದನ್ನು ನಾವು ಸೇವಿಸುತ್ತೇವೆಯೋ, ಅದಕ್ಕೆ ‘ಆಹಾರ’ ಅಥವಾ ಅನ್ನ ಎಂದು ಹೇಳುತ್ತಾರೆ. ‘ಆಹಾರ’ ವೆಂದರೆ ಒಳಗೆ ತೆಗೆದುಕೊಳ್ಳುವುದು, ಸ್ವೀಕರಿಸುವುದು ! ನಾವು ಬಾಯಿಯ ಮೂಲಕ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಅದನ್ನು ಸೇವಿಸುವಾಗ ನಮ್ಮ ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯೂ  ಆಹಾರವನ್ನು ಸೇವಿಸುತ್ತವೆ, ಉದಾ. ನಾವು ಉಪಾಹಾರಗೃಹದಲ್ಲಿ (ಹೊಟೇಲ್) ಊಟ ಮಾಡಲು ಹೋಗುತ್ತೇವೆ. ಆಗ ಬೇಡಿಕೆ ನೀಡಿದ ಪದಾರ್ಥಗಳು ಚೆನ್ನಾಗಿ ಕಾಣಿಸಬೇಕೆಂದು ‘ತಟ್ಟೆ’ಯನ್ನು (ಡಿಶ್) ಅಲಂಕರಿಸುತ್ತಾರೆ. ಅದನ್ನು ನೋಡಿದ ತಕ್ಷಣವೇ ನಮ್ಮ ಬಾಯಿಯಲ್ಲಿ ನೀರು ಬರು ತ್ತದೆ, ಅಂದರೆ ಆ ಆಹಾರವನ್ನು ಮೊದಲು ನಮ್ಮ ಕಣ್ಣುಗಳು ಸೇವಿಸುತ್ತವೆ. ವಿಭಿನ್ನ ಪದಾರ್ಥಗಳ ಸುಗಂಧವನ್ನು ಮೂಗಿನ ಮೂಲಕ ತೆಗೆದುಕೊಂಡೇ ನಾವು ಆ ಪದಾರ್ಥಗಳನ್ನು ಆನಂದದಿಂದ ಸೇವಿಸುತ್ತೇವೆ. ಪದಾರ್ಥವು ಒಂದು ವೇಳೆ ಗರಿಗರಿಯಾಗಿದ್ದರೆ ಅದನ್ನು ತಿನ್ನುವಾಗ ಆಗುವ ‘ಕುರುಮ್, ಕುರುಮ್’ ಸದ್ದು ಕಿವಿಗಳ ಮೇಲೆ ಬೀಳುತ್ತದೆ. ಆ ಧ್ವನಿ ನಮ್ಮ ಆನಂದವನ್ನು ಹೆಚ್ಚಿಸುತ್ತದೆ. ಕೈಯಿಂದ ಊಟವನ್ನು ಮಾಡುವಾಗ ಬೆರಳುಗಳಿಗೆ ಅನ್ನದ ಸ್ಪರ್ಶ ತಿಳಿಯುತ್ತದೆ. ಆದುದರಿಂದ ‘ಅನ್ನ ಗಟ್ಟಿಯಾಗಿದೆ ಅಥವಾ ಮೆತ್ತಗಿದೆ’, ಎಂಬುದು ತಿಳಿಯುತ್ತದೆ, ಅಂದರೆ ಚರ್ಮವೂ ಭಾಗವಹಿಸುತ್ತದೆ ಮತ್ತು ಕೊನೆಯಲ್ಲಿ ನಾಲಿಗೆ ಆ ಆಹಾರದ ರುಚಿಯನ್ನು ಸವಿಯುತ್ತಾ, ಪರಿಮಳವನ್ನು ತೆಗೆದುಕೊಳ್ಳುತ್ತಾ ಅದರಲ್ಲಿನ ಆನಂದವನ್ನು ಅನುಭವಿಸುತ್ತದೆ. ಅಂದರೆ ನಾವು ಆಹಾರವನ್ನು ಸೇವಿಸುತ್ತೇವೆ, ಅದರಲ್ಲಿ ಪಂಚಜ್ಞಾನೇಂದ್ರಿಯಗಳೂ ಭಾಗವಹಿಸುತ್ತವೆ.

ಶ್ರೀ. ಪ್ರಕಾಶ ವಸಂತ ಕರಂದೀಕರ

೨. ಆಹಾರವನ್ನು ಸೇವಿಸುವಾಗ ಮನಸ್ಸಿನ ಸಹಭಾಗ ಇರುವುದರಿಂದ ಇಷ್ಟವಾದ ಆಹಾರ ಸಿಕ್ಕರೆ ಮನಸ್ಸು ಪ್ರಸನ್ನ ಮತ್ತು ಇಷ್ಟವಾಗದ ಆಹಾರ ಸಿಕ್ಕರೆ ಮನಸ್ಸು ದುಃಖಿಯಾಗುವುದು

ಆಹಾರವನ್ನು ಸೇವಿಸುವಾಗ ಅದರಲ್ಲಿ ‘ಮನಸ್ಸಿನ ಪಾತ್ರ ಏನು ? ಎಂದು ನೋಡೋಣ. ಯಾವುದಾದರೊಂದು ಪದಾರ್ಥವು ಇಷ್ಟ ವಾಗುತ್ತದೆ, ಆದರೆ ಕೆಲವೊಂದು ತರಕಾರಿ ಇಷ್ಟವಾಗುವುದಿಲ್ಲ, ಆಗ ಮನಸ್ಸಿಲ್ಲದಿದ್ದರೂ ಅದನ್ನು ತಿನ್ನಬೇಕಾಗುತ್ತದೆ. ಇಲ್ಲಿ ಇಷ್ಟವಿದೆ-ಇಷ್ಟವಿಲ್ಲ ಇದು ಮನಸ್ಸಿನ ಕಾರ್ಯ, ಹಾಗೆಯೇ ಮನಸ್ಸಿನ ಸಂಸ್ಕಾರವಾಗಿದೆ. ಇಷ್ಟವಾದ ಆಹಾರ ಸಿಕ್ಕರೆ, ಮನಸ್ಸು ಪ್ರಸನ್ನಗೊಳ್ಳುತ್ತದೆ. ಇಷ್ಟವಿಲ್ಲದ ಆಹಾರ ತಿನ್ನಬೇಕಾಗಿ ಬಂದರೆ ಮನಸ್ಸು ಖಿನ್ನ ಮತ್ತು ದುಃಖಿಯಾಗುತ್ತದೆ. ಊಟ ಮಾಡುವಾಗ ಮನಸ್ಸು ಪ್ರಸನ್ನವಾಗಿರಬೇಕು, ಅಂದರೆ ಆಹಾರವು ಚೆನ್ನಾಗಿ ಜೀರ್ಣ ವಾಗುತ್ತದೆ’, ಎಂದು ಶಾಸ್ತ್ರ ಹೇಳುತ್ತದೆ, ಅಂದರೆ ಆಹಾರದಲ್ಲಿ ಮನಸ್ಸಿನ ಪಾತ್ರ ಮಹತ್ವದ್ದಾಗಿದೆ. ಇದರ ಕಾರಣ ಮನಃಪೂರ್ವಕ ಆಹಾರ ಸೇವಿಸಿದರೆ ಸರಿಯಾದ ಪ್ರಮಾಣದಲ್ಲಿ ಲಾಲಾರಸವು ಉತ್ಪತ್ತಿಯಾಗಿ ಆಹಾರವು ಬೇಗನೆ ಜೀರ್ಣವಾಗುತ್ತದೆ. ಆದುದರಿಂದ ‘ಊಟ ಮಾಡುವಾಗ ಭಗವಂತನ ಸ್ಮರಣೆ ಮಾಡುತ್ತಾ ಮತ್ತು ನಾಮಜಪವನ್ನು ಮಾಡುತ್ತಾ ಊಟ ಮಾಡಬೇಕು’, ಎಂದು ಹಿರಿಯರು ಹೇಳುತ್ತಾರೆ.

೩. ಆಹಾರವನ್ನು ಸೇವಿಸುವಾಗ ನಮ್ಮ ಬುದ್ಧಿಯ ಪಾತ್ರ ಏನು ?

ಆಹಾರವನ್ನು ಸೇವಿಸುವಾಗ ‘ಬುದ್ಧಿಯ ಪಾತ್ರ ಏನು ?’, ಯಾವುದಾದರೊಂದು ಪದಾರ್ಥವು ಇಷ್ಟವಾಗುತ್ತಿದ್ದರೂ ‘ಅದನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ?’, ಎಂಬುದನ್ನು ಬುದ್ಧಿಯು ಹೇಳುತ್ತದೆ. ‘ನನ್ನ ಪ್ರಕೃತಿಗೆ ನನ್ನ ಕಾಯಿಲೆಗೆ ಯಾವ ಆಹಾರ ಸೇವಿಸುವುದು ಯೋಗ್ಯ ?’ಯಾವ ಆಹಾರ ಸೇವಿಸುವುದು ಯೋಗ್ಯವಲ್ಲ, ಎಂಬುದು ಬುದ್ಧಿಗೆ ತಿಳಿಯುತ್ತದೆ. ಬುದ್ಧಿಯು ಮನಸ್ಸಿನ ಮೇಲೆ ನಿಯಂತ್ರಣವಿಟ್ಟು ‘ಎಷ್ಟು ತಿನ್ನಬೇಕು’, ಎಂಬ ಜ್ಞಾನವನ್ನು ನೀಡುತ್ತಾ ಸಂಯಮವನ್ನು ಕಾಪಾಡುತ್ತದೆ.

೪. ಊಟವಾದ ನಂತರ ಆತ್ಮಕ್ಕೆ ತೃಪ್ತಿಯ ಭಾವನೆ ಉಂಟಾಗುವುದರಿಂದ ಆಹಾರ ಸೇವಿಸುವುದರಲ್ಲಿ ಆತ್ಮವೂ ಭಾಗವಹಿಸುತ್ತದೆ

ಈಗ ಕೊನೆಗೆ ‘ಆತ್ಮವು ಹೇಗೆ ಭಾಗವಹಿಸುತ್ತದೆ ?’, ಎಂಬುದನ್ನು ನೋಡೋಣ. ಹೊಟ್ಟೆತುಂಬ ಮತ್ತು ಇಷ್ಟವಾದದ್ದನ್ನು ತಿಂದ ನಂತರ ನಾವು ಸಹಜವಾಗಿಯೇ ‘ವಾ ! ಊಟ ಎಷ್ಟು ಚೆನ್ನಾಗಿತ್ತು ! ತೃಪ್ತರಾದೆವು !’ ಎಂದು ಹೇಳುತ್ತೇವೆ. ಊಟವಾದ ನಂತರ ಆತ್ಮಕ್ಕೆ ತೃಪ್ತಿಯ ಭಾವನೆ ಬರುತ್ತದೆ. ಮನಸ್ಸಿಗೆ ಆನಂದವೂ ಆಗುತ್ತದೆ.

ಈ ರೀತಿಯಲ್ಲಿ ಆಹಾರ ಸೇವಿಸುವುದರಲ್ಲಿ ಪಂಚಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಆತ್ಮ ಈ ಎಲ್ಲವುಗಳು ಭಾಗವಹಿಸುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಪಾರ ಕೃಪೆಯಿಂದ ಮೇಲಿನ ಚಿಂತನವಾಯಿತು. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ !’

– ಶ್ರೀ. ಪ್ರಕಾಶ ವಸಂತ ಕರಂದೀಕರ (ವಯಸ್ಸು ೬೭ ವರ್ಷಗಳು), ಫೋಂಡಾ, ಗೋವಾ. (೨೦.೭.೨೦೨೪)