ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರು !

ಭಯೋತ್ಪಾದಕರನ್ನು ‘ಹುತಾತ್ಮರು’ ಎಂದು ಕರೆಯುವವರ ವಿರುದ್ಧ ಅಪರಾಧ ದಾಖಲಿಸುವ ಮೂಲಕ ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇವರು ತಮ್ಮ ‘ಇನ್‍ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮದಲ್ಲಿ ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಆತನನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ. ಇದರಿಂದಾಗಿ ಹರ್ಭಜನ್ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗುತ್ತಿದೆ. ಈ ಬಗ್ಗೆ ಹರ್ಭಜನ್ ಸಿಂಗ ಯಾವುದೇ ಪ್ರತಿಕ್ರಿಯಿಸಲಿಲ್ಲ. ಮೇಲಿನ `ಪೋಸ್ಟ್’ ಅನ್ನು ಪ್ರಸಾರ ಮಾಡುವಾಗ, ಹರ್ಭಜನ್ ಸಿಂಗರು ‘ಅಭಿಮಾನದಿಂದ ಜೀವಿಸಿ ಮತ್ತು ಧರ್ಮಕ್ಕಾಗಿ ಪ್ರಾಣ ನೀಡಿ’ ಎಂದು ‘ಸ್ಟೇಟಸ್’ ಹಾಕಿದ್ದರು.