|
(ರೋಜಾ ಎಂದರೆ ರಂಜಾನ್ ತಿಂಗಳಲ್ಲಿ ಆಚರಿಸುವ ಉಪವಾಸ)
ಮುಂಬಯಿ, ಮಾರ್ಚ್ 12 (ಸುದ್ದಿ.) – ಬಜೆಟ್ ಅಧಿವೇಶನದ ಸಮಯದಲ್ಲಿ ರೋಜಾ ಬಿಡಲು ವಿಧಾನಸಭೆಯ ಎದುರು ಕೆಲವೇ ಅಂತರದಲ್ಲಿರುವ ಫುಟ್ಪಾತ್ ತಡೆಯುತ್ತಿದ್ದ ಮುಸ್ಲಿಮರಿಗೆ ದೈನಿಕ ‘ಸನಾತನ ಪ್ರಭಾತ’ದ ವರದಿಯಿಂದ ಕಡಿವಾಣ ಬಿದ್ದಿದೆ. ವಿಧಾನಸಭೆಯಂತಹ ಅತಿಮುಖ್ಯ ಸ್ಥಳದಲ್ಲಿ ಫುಟ್ಪಾತ್ ಅಡ್ಡಿಪಡಿಸುತ್ತಿದ್ದರೂ ವಿಧಾನಸಭೆಯ ಭದ್ರತೆಗಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಕ್ರಮ ಕೈಗೊಳ್ಳದ ಬಗ್ಗೆ ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿ ಅಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳನ್ನು ವಿಚಾರಿಸಿದರು ಮತ್ತು ಈ ಗಂಭೀರ ವಿಷಯದ ಬಗ್ಗೆ ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೂ ತಿಳಿಸಿದರು. ವಿಷಯದ ಗಂಭೀರತೆಯನ್ನು ಮನಗಂಡ ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಭೂಷಣ ಗಗರಾಣಿ ಅವರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಮಾರ್ಚ್ 12 ರಿಂದ ಫುಟ್ಪಾತ್ನಲ್ಲಿ ರೋಜಾ ಬಿಡುವ ಪ್ರಕ್ರಿಯೆಯನ್ನು ಪೊಲೀಸರು ನಿಷೇಧಿಸಿದ್ದಾರೆ.
🚨 Action Against Footpath Encroachment During Roza Breaking! 🚨
📰 Daily ‘Sanatan Prabhat’ report compels action!
Mumbai Police stop Muslims from blocking footpaths outside the Maharashtra Legislature during Roza breaking!
🏛️ Municipal Commissioner orders immediate action &… https://t.co/OjMPaXkKSI pic.twitter.com/8OVPYbwUX2
— Sanatan Prabhat (@SanatanPrabhat) March 12, 2025
ಮುಸ್ಲಿಂ ವ್ಯಾಪಾರಿಗಳಿಗೆ ಪೊಲೀಸರಿಂದ ಎಚ್ಚರಿಕೆ!
ಫುಟ್ಪಾತ್ನಲ್ಲಿ ಆಲಂ ಖಾನ್ ಎಂಬ ಮುಸ್ಲಿಂ ವ್ಯಾಪಾರಿ ಇಲ್ಲಿನ ಎಲ್ಲಾ ಮುಸ್ಲಿಂ ವ್ಯಾಪಾರಿಗಳನ್ನು ರೋಜಾ ಬಿಡಲು ಒಟ್ಟುಗೂಡಿಸುತ್ತಿದ್ದನು. ಆಲಂ ಖಾನ್ಗೆ ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಪೊಲೀಸರು ದೂರವಾಣಿ ಕರೆ ಮಾಡಿ ತಿಳಿಸಿದರು.
1. ಮಾರ್ಚ್ 10 ರಂದು ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿ ವಿಧಾನಸಭೆಯ ಹೊರಗಿನ ಫುಟ್ಪಾತ್ ಅನ್ನು ರೋಜಾ ಬಿಡಲು ತಡೆದಿರುವುದು ಕಂಡುಬಂದಿತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ರೋಜಾ ಬಿಡಲು ನಿಯಮಿತವಾಗಿ ಫುಟ್ಪಾತ್ ಅನ್ನು ಅಡ್ಡಿಪಡಿಸುತ್ತಿದ್ದರು ಎಂಬುದು ತಿಳಿದುಬಂದಿತು.
2. ಮಾರ್ಚ್ 11 ರಂದು ಸಂಜೆ ರೋಜಾ ಬಿಡಲು ಮುಸ್ಲಿಮರು ಫುಟ್ಪಾತ್ನಲ್ಲಿ ಚಾಪೆಗಳನ್ನು ಹಾಸುತ್ತಿದ್ದರು ಮತ್ತು ಅಲ್ಲಿ ಕಾವಲಿಗೆ ಇದ್ದ ಪೊಲೀಸರೂ ಅವರನ್ನು ತಡೆಯುತ್ತಿರಲಿಲ್ಲ.
3. ಪ್ರತಿನಿಧಿಯು ವಿಧಾನಸಭೆಯ ಭದ್ರತೆಗಾಗಿ ಇದ್ದ ಪೊಲೀಸ್ ನಿರೀಕ್ಷಕರ ಗಮನಕ್ಕೆ ಈ ವಿಷಯವನ್ನು ತಂದರು. ‘ಬಜೆಟ್ ಅಧಿವೇಶನದಂತಹ ಮಹತ್ವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದರ ಜವಾಬ್ದಾರಿ ನಿಮ್ಮದಾಗಿರುತ್ತದೆ’ ಎಂದು ಮನವರಿಕೆ ಮಾಡಿದ ನಂತರ ಪೊಲೀಸ್ ನಿರೀಕ್ಷಕರು ಈ ವಿಷಯವನ್ನು ತಕ್ಷಣ ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮತ್ತು ಮೇಲಧಿಕಾರಿಗಳಿಗೆ ತಿಳಿಸಿದರು.
ಧಾರ್ಮಿಕತೆಯಲ್ಲ, ಉದ್ಧಟತನ!
ರೋಜಾ ಬಿಡಲು ಮುಸ್ಲಿಮರು ಯಾವುದಾದರೂ ಮರೆಯಾಗಿರುವ ಸ್ಥಳದಲ್ಲಿ ಅಥವಾ ಇಲ್ಲಿನ ಯಾವುದಾದರೂ ಮುಸ್ಲಿಂ ವ್ಯಕ್ತಿಯ ಸ್ವಂತ ಸ್ಥಳದಲ್ಲಿ ರೋಜಾ ಬಿಡುವ ಫಲಹಾರವನ್ನು ಮಾಡಬಹುದಿತ್ತು. ಹಾಗೆ ಮಾಡದೆ ಮುಸ್ಲಿಂ ವ್ಯಾಪಾರಿಗಳು ಸಂಚಾರ ದಟ್ಟಣೆಯಿರುವ ಮತ್ತು ವಿಧಾನಸಭೆಯಂತಹ ಮಹತ್ವದ ಸ್ಥಳದ ಫುಟ್ಪಾತ್ಗಳನ್ನು ನೇರವಾಗಿ ಹಗ್ಗ ಕಟ್ಟಿ ಅಡ್ಡಿಪಡಿಸುತ್ತಿದ್ದರು. ಸಾಮಾನ್ಯ ಜನರಿಗೆ ತೊಂದರೆ ಕೊಟ್ಟು ರೋಜಾ ಬಿಡುವ ಈ ಕ್ರಮ ಕೇವಲ ಉದ್ಧಟತನವಾಗಿದೆ!
ದೈನಿಕ ‘ಸನಾತನ ಪ್ರಭಾತ’ದ ವರದಿಯ ವಿಧಾನಸಭೆಯಲ್ಲಿ ಪ್ರತಿಧ್ವನಿ!
ಸರಕಾರಕ್ಕೆ ಹೇಳಿಕೆ ನೀಡುವಂತೆ ಸಭಾಪತಿಯಿಂದ ನಿರ್ದೇಶನ!
ರೋಜಾ ಬಿಡಲು ಉದ್ಧಟ ಮುಸ್ಲಿಮರು ವಿಧಾನಸಭೆಯ ಹೊರಗಿನ ಫುಟ್ಪಾತ್ ಅಡ್ಡಿಪಡಿಸುತ್ತಿರುವ ಬಗ್ಗೆ ದೈನಿಕ ‘ಸನಾತನ ಪ್ರಭಾತ’ ಮಾರ್ಚ್ 11 ರಂದು ನೀಡಿದ ವರದಿಯ ಪ್ರತಿಧ್ವನಿ ಮಾರ್ಚ್ 12 ರಂದು ವಿಧಾನ ಪರಿಷತ್ತಿನಲ್ಲಿ ಕೇಳಿಬಂದಿತು. ಶಿವಸೇನೆಯ ಶಾಸಕಿ ಡಾ. ಮನೀಷಾ ಕಾಯಂದೆ ಅವರು ‘ಪಾಯಿಂಟ್ ಆಫ್ ಇನ್ಫಾರ್ಮೇಶನ್’ (ಮಾಹಿತಿಯ ಅಂಶ) ಅಡಿಯಲ್ಲಿ ಈ ಮಾಹಿತಿಯನ್ನು ಸದನಕ್ಕೆ ನೀಡಿದರು. ಈ ಬಗ್ಗೆ ಸಭಾಪತಿ ಪ್ರಾ. ರಾಮ ಶಿಂದೆ ಅವರು ಈ ಬಗ್ಗೆ ಸರಕಾರಕ್ಕೆ ಹೇಳಿಕೆ ನೀಡುವಂತೆ ನಿರ್ದೇಶನ ನೀಡಿದರು.
ವಿಧಾನಸಭೆಯ ಸಮಯದಲ್ಲಿ ದಾರಿ ತಡೆದು ರೋಜಾ ಬಿಡುವುದು ಗಂಭೀರ! – ಶಾಸಕಿ ಡಾ. ಮನೀಷಾ ಕಾಯಂದೆ, ಶಿವಸೇನೆ

ಬಜೆಟ್ ಅಧಿವೇಶನ ನಡೆಯುತ್ತಿರುವಾಗ ವಿಧಾನಸಭೆಯ ಹೊರಗಿನ ಫುಟ್ಪಾತ್ ಅಡ್ಡಿಪಡಿಸುವುದು ಅತ್ಯಂತ ಗಂಭೀರವಾಗಿದೆ. ವಿಧಾನಸಭೆಯಂತಹ ಅತಿಮುಖ್ಯ ಮತ್ತು ಸೂಕ್ಷ್ಮ ಸ್ಥಳದಲ್ಲಿ ದಾರಿ ತಡೆದಿದ್ದು ಅದನ್ನು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದುಕೊಂಡು ನೋಡುತ್ತಿರುವುದು ಸಹ ಗಂಭೀರವಾಗಿದೆ. ಪಾದಚಾರಿ ರಸ್ತೆ ತಡೆದಿದ್ದರಿಂದ ಮಹಿಳೆಯರು, ಹಿರಿಯ ನಾಗರಿಕರು ಮತ್ತು ರಸ್ತೆಯಲ್ಲಿ ನಡೆಯುವ ಸಾಮಾನ್ಯ ನಾಗರಿಕರು ಸಹ ತೊಂದರೆ ಅನುಭವಿಸಬೇಕಾಗಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸಬಹುದು. ಈ ಬಗ್ಗೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ರಾಜ್ಯ ಸಚಿವ ನಿತೇಶ್ ರಾಣೆ ಅವರಿಂದ ಪೊಲೀಸ್ ಉಪ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಆದೇಶ
ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಅವರು ವಿಧಾನಸಭೆಯ ಸುತ್ತಮುತ್ತಲಿನ ಪೊಲೀಸ್ ಉಪ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಈ ಪ್ರಕರಣದಲ್ಲಿ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.