ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೯ ನೇ ಜನ್ಮೋತ್ಸವ !
‘ಗುರು ಪರಮೇಶ್ವರ ಗುರು ಮಾತೆ | ಸದಾ ನೀಡು ಕೃಪೆಯ ಛಾಯೆ || ಭಕ್ತರಿಗಾಗಿ ದೇವರು
ಗುರುವಾಗಿ ತಾಳಿದರು ಅವತಾರವ’ | ಸನಾತನದ ಸಾಧಕರು ಪಡೆದರು ಇದರ ಪ್ರಚೀತಿಯ

ರಾಮನಾಥಿ (ಗೋವಾ) : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಜನ್ಮೋತ್ಸವವೆಂದರೆ ಸಾಧಕರಿಗೆ ಚೈತನ್ಯ ಹಾಗೂ ಆನಂದದ ಸುರಿಮಳೆಯನ್ನೇ ಸುರಿಸುವ ಮಹೋತ್ಸವದ ದಿನ ! ಪ್ರೀತಿ ಸ್ವರೂಪ, ಕೃಪಾವತ್ಸಲ, ಕರುಣಾಕರ ಇಂತಹ ಶ್ರೀಗುರುಗಳ ಕೇವಲ ದರ್ಶನದಿಂದಲೇ ಭಯಮುಕ್ತ, ಚಿಂತಾಮುಕ್ತರಾಗಿ ಸಂಕಟಗಳ ಭವಸಾಗರದಿಂದ ಪಾರಾಗುತ್ತಾರೆ. ನೂರಾರು ಸಾಧಕರು ಇದರ ಅನುಭೂತಿಯನ್ನು ಪಡೆದಿದ್ದಾರೆ. ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರುದೇವರ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ, ಆದರೆ ಈ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಜನ್ಮೋತ್ಸವವನ್ನು ಆಚರಿಸಲು ಸಾಧ್ಯವಾಗಲಿಲ್ಲ. ೨ ಮೇ ೨೦೨೧ ರಂದು ಜನ್ಮೋತ್ಸವದ ನಿಮಿತ್ತ ‘ಆನ್ಲೈನ್ ಭಾವಸತ್ಸಂಗದಲ್ಲಿ ಈ ಹಿಂದಿನ ಜನ್ಮೋತ್ಸವಗಳಲ್ಲಿ ಪರಾತ್ಪರ ಗುರುದೇವರು ಸಾಧಕರಿಗೆ ಶ್ರೀವಿಷ್ಣು ಹಾಗೂ ಶ್ರೀರಾಮನ ರೂಪದಲ್ಲಿ ನೀಡಿದ ದರ್ಶನದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆದ್ದರಿಂದ ಸಾಧಕರಿಗೆ ಮತ್ತೊಮ್ಮೆ ಶ್ರೀಗುರುದೇವರ ಅವತಾರತ್ವದ ಅನುಭೂತಿಯನ್ನು ಪಡೆಯುವ ಭಾಗ್ಯವು ಲಭಿಸಿತು. ಈ ಘೋರ ಆಪತ್ಕಾಲದಲ್ಲಿಯೂ ಈ ಭಾವ ಸಮಾರಂಭದ ಮೂಲಕ ಸಾಧಕರ ಮೇಲೆ ಕೃಪೆಯ ಸುರಿಮಳೆಯನ್ನು ಸುರಿಸುವ ಗುರುದೇವರ ಬಗ್ಗೆ ಸಾಧಕರು ಮನಸ್ಸಿನಲ್ಲಿಯೇ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಾಧಕರ ಭಕ್ತಿಭಾವದಲ್ಲಿ ವೃದ್ಧಿ !
ಕೊರೋನಾರೂಪಿ ಆಪತ್ಕಾಲದಿಂದ ಎಲ್ಲಡೆ ಅಶಾಂತಿ, ಅಸ್ವಸ್ಥತೆ ಹಾಗೂ ದುಃಖದ ವಾತಾವರಣವಿದೆ. ಅಧರ್ಮವು ಹೆಚ್ಚಾದಾಗ ಈಶ್ವರನು ಅವತಾರವನ್ನು ತಾಳಿ ಸಾಧಕ ಮತ್ತು ಸಜ್ಜನರ ರಕ್ಷಣೆಯನ್ನು ಮಾಡುತ್ತಾನೆ. ಈ ಧ್ವನಿಚಿತ್ರಮುದ್ರಿಕೆಯನ್ನು ನೋಡುತ್ತಿರುವಾಗ ಸಾಧಕರಿಗೆ ಆ ವಚನವು ನೆನಪಾಯಿತು. ಸಾಧಕರು ವಿಷ್ಣುಲೋಕದಲ್ಲಿನ ಆನಂದವನ್ನು ಅನುಭವಿಸುತ್ತಿದ್ದರು. ‘ಶ್ರೀಮನ್ನಾರಾಯಣಸ್ವರೂಪ ಗುರುದೇವರು ಸಾಕ್ಷಾತ್ ನಮ್ಮೊಂದಿಗಿದ್ದು ಕೃಪೆಯ ಮಳೆಯನ್ನೇ ಸುರಿಸುತ್ತಿದ್ದಾರೆ, ಎಂಬ ಅನುಭೂತಿಯನ್ನು ಸಾಧಕರು ಪಡೆದರು. ಈ ಧ್ವನಿಚಿತ್ರಮುದ್ರಿಕೆ ಅಂದರೆ ಸಾಧಕರಲ್ಲಿ ಗುರುಗಳ ಬಗ್ಗೆ ಶ್ರದ್ಧೆ ಹಾಗೂ ಭಾವಭಕ್ತಿ ಹೆಚ್ಚಿಸುವ ಅತುಲನೀಯ ಸಮಾರಂಭವಾಗಿತ್ತು.
ಹೀಗಾಯಿತು ‘ಆನ್ಲೈನ್ ಭಾವಸತ್ಸಂಗ !
೧. ಆರಂಭದಲ್ಲಿ ಈ ಹಿಂದೆ ಆಚರಿಸಲಾದ ಪರಾತ್ಪರ ಗುರು ಡಾ. ಆಠವಲೆಯವರ ವಿಷ್ಣುರೂಪದ ‘ಡೊಲೋತ್ಸವ (ಉಯ್ಯಾಲೆಯ ಮೇಲೆ ಕುಳ್ಳಿರಿಸಿ ಸ್ತುತಿ ಮಾಡುವುದು) ಈ ಕುರಿತಾದ ಧ್ವನಿಚಿತ್ರ ಮುದ್ರಿಕೆಯನ್ನು ತೋರಿಸಲಾಯಿತು.
೨. ಅನಂತರ ಸಾಧಕರಿಗೆ ಶ್ರೀರಾಮರೂಪದಲ್ಲಿನ ಪರಾತ್ಪರ ಗುರುದೇವರ ದರ್ಶನವಾಯಿತು.
ಗಮನಾರ್ಹ ಅಂಶಗಳು
ಪರಾತ್ಪರ ಗುರು ಡಾಕ್ಟರರ ಜನ್ಮೋತ್ಸವದ ನಿಮಿತ್ತ ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮವನ್ನು ರಂಗೋಲಿ ಬಿಡಿಸಿ ಹಾಗೂ ಹಣತೆಗಳನ್ನು ಹಚ್ಚಿ ಸರಳವಾಗಿ ಅಲಂಕರಿಸಲಾಗಿತ್ತು.
ಧರ್ಮದ ಪುನರ್ಸ್ಥಾಪನೆಗಾಗಿ ಜನ್ಮಕ್ಕೆ ಬಂದಿರುವ ಮೂವರು ಗುರುಗಳು – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ !
ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ ಅಂಜಲಿ ಗಾಡಗೀಳ ಇವರಿಂದ ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !
ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !