ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಂದಲೇ ಅರ್ಜಿ !
ನೀಮಚ್ (ಮಧ್ಯಪ್ರದೇಶ) – ಇಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ ವಿಕ್ರಮ್ ಬಾಗಡೆ ಎಂಬವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ವರ್ಗದ ಜನರಿಗೆ ಸ್ವಯಂಪ್ರೇರಣೆಯಿಂದ ಮೀಸಲಾತಿಯನ್ನು ಬಿಡುವ ಆಯ್ಕೆಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಲಯವು ಅರ್ಜಿಯನ್ನು ಮುಂದಿನ ತಿಂಗಳು ಆಲಿಸುವ ಸಾಧ್ಯತೆ ಇದೆ. ವಿಕ್ರಮ್ ಬಾಗಡೆ ಎಲ್.ಎಲ್.ಬಿ. ಯ ಪ್ರಥಮ ವರ್ಷದ ವಿದ್ಯಾರ್ಥಿ. ಈ ಅರ್ಜಿಯ ಬಗ್ಗೆ ಅವರೇ ವಾದ ಮಂಡಿಸಲಿದ್ದಾರೆ. ‘ರಾಜಕೀಯದಲ್ಲಿ ಮೀಸಲಾತಿಯನ್ನು ನಾನು ವಿರೋಧಿಸುವುದಿಲ್ಲ’ ಎಂದು ಬಾಗಡೆ ಹೇಳಿದರು. ‘ಮಾಧ್ಯಮಿಕ ಶಿಕ್ಷಣದ ನಂತರ ನಾನು ಮೀಸಲಾತಿಯ ಲಾಭವನ್ನು ಪಡೆದುಕೊಂಡಿಲ್ಲ’ ಎಂದು ಕೂಡ ತಿಳಿಸಿದರು.

ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಪೋಷಕರಿಬ್ಬರೂ ಭಾರತೀಯ ಆಡಳಿತ ಸೇವೆ (ಐ.ಎ.ಎಸ್.) ಅಧಿಕಾರಿಗಳಾಗಿದ್ದಾಗ ಅವರ ಮಕ್ಕಳಿಗೆ ಮೀಸಲಾತಿ ಏಕೆ?
ಶೇ. ೧೭ ರಷ್ಟು ಓಬಿಸಿ ಮೀಸಲಾತಿಯನ್ನು ಶೇ. ೭ ಕ್ಕೆ ಇಳಿಸಿದ ಸರಕಾರ! :Bengal OBC Reservation
ಮಹಿಳಾ ಮೀಸಲಾತಿ ತಿದ್ದುಪಡಿ ಕರಡಿಗೆ ಕೇಂದ್ರದ ಸಮ್ಮತಿ
ಓಬಿಸಿ ‘ಕ್ರಿಮಿ ಲೇಯರ್’ – ಪಾಲಕರ ಆದಾಯವೊಂದೇ ಮಾನದಂಡವಲ್ಲ! – OBC Reservation Case – Supreme Court
ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ, ಇದು ದೇವರ ಕೃಪೆ ! – ಕೇಂದ್ರ ಸಚಿವ ನಿತಿನ್ ಗಡ್ಕರಿ