
ನವದೆಹಲಿ – ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಮೀಸಲಾತಿಯಲ್ಲಿ ಈಗ ಮೀಸಲಾತಿ ಅಂದರೆ ಕೋಟಾದ ಅಡಿಯಲ್ಲಿ ಕೋಟಾ ಇರಲಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಸಂವಿಧಾನ ಪೀಠ ಈ ತೀರ್ಪು ನೀಡಿದೆ. ತೀರ್ಪು 6 ರ ವಿರುದ್ಧ 1 ಈ ರೀತಿಯಲ್ಲಿ ನಿರ್ಣಯ ಆಗಿತ್ತು. ಅಂತಹ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೀಸಲಾತಿಗೆ ಸಂಬಂಧಿಸಿದಂತೆ 2004 ರಲ್ಲಿನ ನಿರ್ಧಾರದ ನಂತರ ಈ ನಿರ್ಧಾರವನ್ನು ಮಹತ್ವವೆಂದು ಪರಿಗಣಿಸಲಾಗಿದೆ.
ಮೀಸಲಾತಿಯಲ್ಲಿ ಮೀಸಲಾತಿ ಎಂದರೇನು (ಕೋಟಾದೊಳಗಿನ ಕೋಟಾ)?
ಸರ್ವೋಚ್ಚ ನ್ಯಾಯಾಲಯವು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವು ಏಕೀಕೃತ ಗುಂಪು ಅಲ್ಲ. ಅವರಿಗೆ ಮೀಸಲಾತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಸರಕಾರವು ಉಪ-ವರ್ಗೀಕರಿಸಬಹುದು. ಉಪ-ವರ್ಗೀಕರಣದ ಆಧಾರವು ನಿಖರವಾದ ರಾಜ್ಯ ಅಂಕಿಅಂಶಗಳನ್ನು ಆಧರಿಸಿರಬೇಕು. ರಾಜ್ಯವು ತನ್ನ ಸ್ವಂತ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಒಂದು ಸಮುದಾಯ ಅಥವಾ ವರ್ಗಕ್ಕೆ ಸೇರಿದವರಿಗೆ ಮೀಸಲಾತಿ ನೀಡಿದರೆ, ಆ ವರ್ಗವನ್ನು ಉಪವರ್ಗೀಕರಿಸಿ ಅವರಲ್ಲಿ ಮೀಸಲಾತಿ ಸ್ಥಾನಗಳನ್ನು ಹಂಚಬೇಕು. ಇದಕ್ಕೆ ಉದಾಹರಣೆ ಎಂದರೆ ಪರಿಶಿಷ್ಟ ಜಾತಿ ವರ್ಗಕ್ಕೆ ಶೇ.15ರಷ್ಟು ಮೀಸಲಾತಿ ನಿಗದಿಪಡಿಸಿದರೆ ಈ ವರ್ಗಕ್ಕೆ ಸೇರಿದ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಳ ಆಧಾರದ ಮೇಲೆ ಶೇ.15ರಲ್ಲಿ ವಿವಿಧ ಮೀಸಲಾತಿ ನೀಡಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ