ಈ ವರದಿಯನ್ನು ನ್ಯಾಯಾಲಯವು ಕೇಳಿ ತರಿಸಬೇಕಾಗುತ್ತದೆ ಎಂದರೆ ಇದರರ್ಥ ಸರಕಾರ ಮತ್ತು ಆಡಳಿತಗಳು ಇದರ ಬಗ್ಗೆ ನಿಷ್ಕ್ರಿಯವಾಗಿದೆ ಎಂದೆನಿಸುತ್ತದೆ!
ನೈನಿತಾಲ್ (ಉತ್ತರಾಖಂಡ) – ಉತ್ತರಾಖಂಡ ಉಚ್ಚ ನ್ಯಾಯಾಯಲವು ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಹರಿದ್ವಾರ ಕುಂಭಮೇಳಕ್ಕಾಗಿ ವೆಂಟಿಲೇಟರ್, ತುರ್ತುನಿಗಾ ಘಟಕ, ಆಸ್ಲತ್ರೆಗಳಲ್ಲಿರುವ ಮಂಚಗಳ ಸಂಖ್ಯೆ, ಇವೇ ಮುಂತಾದ ವಿಷಯಗಳ ಮಾಹಿತಿಯ ವರದಿಯನ್ನು ೨೧ ಫೆಬ್ರವರಿ ಒಳಗೆ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಆದೇಶವನ್ನು ನೀಡಿದೆ; ಏಕೆಂದರೆ ಇದರಿಂದ ವಸ್ತುಸ್ಥಿತಿ ಗಮನಕ್ಕೆ ಬರುತ್ತದೆ. (ಅಂದರೆ ನ್ಯಾಯಾಲಯಕ್ಕೆ ಆಡಳಿತ ಮತ್ತು ಸರಕಾರದ ಬಗ್ಗೆ ವಿಶ್ವಾಸವಿಲ್ಲ ಎಂದು ದೃಢಪಡುತ್ತದೆ!-ಸಂಪಾದಕರು) ಹರಿದ್ವಾರದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕುಂಭಮೇಳವು ಜರುಗಲಿದೆ.
ರಾಜ್ಯದಲ್ಲಿರುವ ಆಸ್ಪತ್ರೆಗಳು ಮತ್ತು ಕೊವಿಡ್ ಸೆಂಟರ್ಗಳ ದುರವಸ್ಥೆಯಾಗಿದೆ. ಈ ವಿಷಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಅದರ ಕುರಿತಾದ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿತು.

ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ