
ಆಧ್ಯಾತ್ಮಪ್ರಸಾರ, ಸಮಾಜಕ್ಕೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವುದು, ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಮಾಜವನ್ನು ಜಾಗೃತಗೊಳಿಸುವುದು, ಹೀಗೆ ವ್ಯಾಪಕ ಉದ್ದೇಶಗಳಿಗಾಗಿ ಸನಾತನ ಸಂಸ್ಥೆಯ ಕಾರ್ಯವು ನಡೆದಿದೆ. ವಿವಿಧ ವಯಸ್ಸಿನ ನೂರಾರು ಸಾಧಕರು ಪೂರ್ಣವೇಳೆ ಸೇವಾ ನಿರತರಾಗಿ ಈ ಧರ್ಮಕಾರ್ಯದಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ. ಬಹಳಷ್ಟು ಸಾಧಕರು ಸಂಗಣಕೀಯ, ಹಾಗೆಯೇ ಇತರ ಸೇವೆಗಳನ್ನು ಅನೇಕ ಘಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಮಾಡುತ್ತಾರೆ, ಇನ್ನೂ ಕೆಲವು ಸಾಧಕರು ತಮ್ಮ ಕ್ಷಮತೆಗಿಂತ ಹೆಚ್ಚು ಸೇವೆಯನ್ನು ಮಾಡುತ್ತಾರೆ.
‘ಸಾಧಕರ ಶಾರೀರಿಕ ಕ್ಷಮತೆ ಹೆಚ್ಚಾಗಲು ಹಾಗೂ ಅವರು ಆರೋಗ್ಯವಂತರಾಗಿರಲು ‘ವ್ಯಾಯಾಮ ಒಂದು ಪ್ರಭಾವಿ ಮಾಧ್ಯಮವಾಗಿದೆ. ವ್ಯಾಯಾಮಕ್ಕಾಗಿ ಯೋಗ್ಯ ವೈದ್ಯಕೀಯ ಸಲಹೆಯನ್ನು ನೀಡಲು ಮತ್ತು ರೋಗಿ-ಸಾಧಕರಿಗೆ ವ್ಯಾಯಾಮದ ಪ್ರಶಿಕ್ಷಣವನ್ನು ನೀಡಿ ಅವರು ‘ಮೊದಲಿನಂತೆ ಆರೋಗ್ಯವಂತರಾಗಲು (rehabilitation) ಸನಾತನದ ರಾಮನಾಥಿ ಮತ್ತು ದೇವದ ಆಶ್ರಮದಲ್ಲಿ ಪೂರ್ಣವೇಳೆ ‘ಫಿಜಿಯೋಥೆರಪಿಸ್ಟರ ಆವಶ್ಯಕತೆಯಿದೆ. ಈ ಸೇವೆಯನ್ನು ಪೂರ್ಣವೇಳೆ ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ, ವಾರದ ಕೆಲವು ದಿನಗಳು ಅಥವಾ ದಿನದ ಕೆಲವು ಗಂಟೆಗಳಾದರೂ ಈ ಸೇವೆಯಲ್ಲಿ ಭಾಗವಹಿಸಬಹುದು.
ಫಿಜಿಯೋಥೆರಪಿಯ ಜ್ಞಾನವಿರುವ ಓದುಗರು, ಹಿತಚಿಂತಕರು, ಧರ್ಮಪ್ರೇಮಿಗಳು ಅಥವಾ ಸಾಧಕರು ಈ ಸೇವೆಯನ್ನು ಮಾಡಬಹುದು, ಅವರು ಸ್ಥಳೀಯ ಸಾಧಕರ ಮಾಧ್ಯಮದಿಂದ ಜಿಲ್ಲಾ ಸೇವಕರಿಗೆ ತಿಳಿಸಬೇಕು. ಜಿಲ್ಲಾ ಸೇವಕರು ಕೆಳಗೆ ನೀಡಿದ ಕೋಷ್ಟಕದಂತೆ ಅವರ ಮಾಹಿತಿಯನ್ನು ಕಳುಹಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610
ಸಂಗಣಕ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ ಪಿನ್- 403401
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !