
ಅಮೃತಸರ (ಪಂಜಾಬ್) – ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ‘ಅಕಾಲ ತಖ್ತ್’ ‘ಗುರು ದ್ರೋಹಿ’ (ಗುರುಗಳ ವಿರೋಧಿ) ಮತ್ತು ‘ಖಾಲ್ಸಾ ಪಂಥ ವಿರೋಧಿ’ ಎಂದು ಘೋಷಿಸಿದೆ. ಅಕಾಲ ತಖ್ತ್ ಸಿಖ್ಖರ ಅತ್ಯುನ್ನತ ಧಾರ್ಮಿಕ ಮತ್ತು ಅತ್ಯುನ್ನತ ಪೀಠವಾಗಿದೆ. ಅಕಾಲ ತಖ್ತ್ ರಾಜ್ಯದ ಎಲ್ಲಾ ಸಿಖ್ ಶಾಸಕರು ಮತ್ತು ಪಂಜಾಬ್ ಸರಕಾರದ ಮಂತ್ರಿಮಂಡಲಕ್ಕೆ ಧರ್ಮನಿಂದನೆ ವಿರೋಧಿ ಕಾನೂನಿನ ಹಿನ್ನೆಲೆಯಲ್ಲಿ ಜೂನ್ 29 ರಂದು ಅಕಾಲ ತಖ್ತ್ ಮುಂದೆ ಹಾಜರಾಗುವಂತೆ ಸಮನ್ಸ್ ಹೊರಡಿಸಿದೆ. ಅಮೃತಸರದಲ್ಲಿ ‘ಪಾಂಚ್ ಸಿಂಗ್ ಸಾಹಿಬಾನ್’ (ಸಿಖ್ ಧರ್ಮಗುರುಗಳು) ನಡುವೆ ಸಭೆ ನಡೆದ ನಂತರ ಅಕಾಲ ತಖ್ತ್ನ ಜಥೇದಾರ್ ಜ್ಞಾನಿ ಕುಲದೀಪ್ ಸಿಂಗ್ ಗರ್ಗಜ್ ಅವರು ‘ಫಸೀಲ್’ನಿಂದ (ಅಕಾಲ ತಖ್ತ್ ವೇದಿಕೆಯಿಂದ) ಈ ಆದೇಶವನ್ನು ಓದಿದರು.
ಪ್ರಕರಣವೇನು?
ಅಕಾಲ ತಖ್ತ್ ಪ್ರಕಾರ ಒಂದು ವಿಡಿಯೋದಲ್ಲಿ ಮುಖ್ಯಮಂತ್ರಿ ಮಾನ್ ಸಿಖ್ ಗುರುಗಳ ಚಿತ್ರಗಳ ಮೇಲೆ ಮದ್ಯ ಚಿಮುಕಿಸುತ್ತಿರುವುದು ಕಂಡುಬರುತ್ತದೆ. ಇದನ್ನು ಸಿಖ್ ಧಾರ್ಮಿಕ ಭಾವನೆಗಳಿಗೆ ಅವಮಾನ ಎಂದು ಪರಿಗಣಿಸಲಾಗಿದೆ. ಮುಖ್ಯಮಂತ್ರಿ ಮಾನ್ ಅವರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಅಕಾಲ ತಖ್ತ್ ಅವರಿಗೆ ಈ ಹೇಳಿಕೆಯ ಪುರಾವೆಯನ್ನು ಕೇಳಿತು; ಆದರೆ ‘ಅಗತ್ಯ ಮಾಹಿತಿ ಅಥವಾ ಪ್ರಯೋಗಾಲಯಗಳ ಹೆಸರುಗಳನ್ನು ಅವರು ನೀಡಲಿಲ್ಲ’, ಎಂದು ಅಕಾಲ ತಖ್ತ್ ಹೇಳುತ್ತದೆ.
ಅಕಾಲ ತಖ್ತ್ ಭಾರತ ಸರಕಾರದಿಂದ ಮಾನ್ಯತೆ ಪಡೆದ ಎರಡು ಪ್ರಯೋಗಾಲಯಗಳಿಂದ ಪರಿಶೀಲನೆ ನಡೆಸಿದಾಗ, ವಿಡಿಯೋ ನಕಲಿ ಅಥವಾ ಎಐ ನಿರ್ಮಿತವಲ್ಲ ಎಂದು ತಿಳಿದುಬಂದಿದೆ ಎಂದು ತಿಳಿಸಿತು. ನಂತರ ಮಾನ್ ಅವರು ಅಕಾಲ ತಖ್ತ್ ಮುಂದೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತೀರ್ಮಾನಿಸಲಾಯಿತು.
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !