ಭಾರತಕ್ಕೆ ೯೨ ಕೋಟಿ ರೂಪಾಯಿ ಕಳುಹಿಸಿರುವ ಬಗ್ಗೆ ‘ಇಡಿ’ ಆರೋಪ
‘ಎಫ್.ಸಿ.ಆರ್.ಎ.’ ನೋಂದಣಿ ಇಲ್ಲದೆಯೇ ಹಣ ಪಡೆದಿರುವ ದಾವೆ

ನವದೆಹಲಿ – ಜಾರಿ ನಿರ್ದೇಶನಾಲಯವು (ಇಡಿ) ಬೆಂಗಳೂರು ನಗರದಲ್ಲಿರುವ ಅಮೆರಿಕದ ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದೆ. ಈ ಸಂಸ್ಥೆಯು ೯೨ ಕೋಟಿ ೫೫ ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಭಾರತಕ್ಕೆ ಕಾನೂನುಬಾಹಿರವಾಗಿ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಈ ಹಣದ ಕೆಲವು ಭಾಗವು ಛತ್ತೀಸ್ಗಢ ಮತ್ತು ಅಸ್ಸಾಂನ ಮಾವೋವಾದಿ ನಕ್ಸಲೈಟ್ ಪೀಡಿತ ಪ್ರದೇಶಗಳನ್ನು ತಲುಪಿದೆ ಎಂದೂ ಆರೋಪಿಸಲಾಗಿದೆ.
೧. ಕೊತನೂರು ಪೊಲೀಸ್ ಠಾಣೆಯಲ್ಲಿ ‘ಇಡಿ’ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಪ್ರಕಾರ, ‘ಟಿಮೋತಿ ಇನಿಶಿಯೇಟಿವ್’ (ಟಿಟಿಐ) ಸಂಸ್ಥೆಯು ಅಮೆರಿಕನ್ ಬ್ಯಾಂಕ್ಗಳ ಡೆಬಿಟ್ ಕಾರ್ಡ್ಗಳನ್ನು ಬಳಸಿ ಭಾರತಕ್ಕೆ ವಿದೇಶಿ ಹಣ ಕಳುಹಿಸಿದೆ. ‘ಟಿಮೋತಿ ಇನಿಶಿಯೇಟಿವ್’ ಸಂಸ್ಥೆಯ ಪ್ರಧಾನ ಕಚೇರಿಯು ಅಮೆರಿಕದ ನಾರ್ತ್ ಕೆರೊಲಿನಾದ ರೇಲೀಯಲ್ಲಿದೆ. ಕರ್ನಾಟಕ, ಛತ್ತೀಸ್ಗಢ ಮತ್ತು ಅಸ್ಸಾಂನ ‘ಎಟಿಎಂ’ಗಳಿಂದ ಈ ನಗದು ಹಣವನ್ನು ಹಿಂಪಡೆಯಲಾಗಿದೆ. ಈ ಹಣ ವರ್ಗಾವಣೆ ‘ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್’ (ಫೆಮಾ) ಮತ್ತು ‘ಫಾರಿನ್ ಕಾಂಟ್ರಿಬ್ಯೂಷನ್ (ರೆಗ್ಯುಲೇಶನ್) ಆಕ್ಟ್’ (ಎಫ್.ಸಿ.ಆರ್.ಎ.) ನಿಯಮಗಳನ್ನು ಉಲ್ಲಂಘಿಸಿದೆ. ನವೆಂಬರ್ ೨೦೨೫ ರಿಂದ ಏಪ್ರಿಲ್ ೨೦೨೬ ರ ಅವಧಿಯಲ್ಲಿ ಒಟ್ಟು ೯೨ ಕೋಟಿ ೫೫ ಲಕ್ಷ ರೂಪಾಯಿಗಳ (೯.೯ ಮಿಲಿಯನ್ ಡಾಲರ್) ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
೨. ಕಳೆದ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ ೧,೦೦೦ಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ. ‘ಇಡಿ’ಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಸಿಂಘ್ಮಾರ್ ಅವರು ದಾಖಲಿಸಿದ ದೂರಿನಲ್ಲಿ ಜೋನಾಥನ್ ಎಸ್. ರಾಜನ್ (‘ಟಿಮೋತಿ ಇನಿಶಿಯೇಟಿವ್’ನ ಭಾರತದ ಕಾರ್ಯಾಚರಣೆಯ ಮುಖ್ಯಸ್ಥ, ಬೆಂಗಳೂರು), ಮಿಕಾ ಮಾರ್ಕ್ (ಬೆಂಗಳೂರು), ಅಜಿತ್ ವರ್ಗೀಸ್ ಮಥಾಯಿ (ಕೊತನೂರು), ವರ್ಗೀಸ್ ಚಾಕೊ (ಧಮ್ತರಿ, ಛತ್ತೀಸ್ಗಢ), ಬಬ್ಲೂ ಕುರ್ಮಿ (ಅಸ್ಸಾಂ) ಮತ್ತು ಸುಪ್ರೀಮ್ ಜಾಯ್ (ಮೈಸೂರು) ಅವರ ಹೆಸರುಗಳಿವೆ. ಈ ಕಾರ್ಡ್ಗಳನ್ನು ‘ಸಂತೋಷ್ ಕುಮಾರ್’ ಎಂಬ ನಕಲಿ ಹೆಸರಿನಲ್ಲಿ ವಿತರಿಸಲಾಗಿತ್ತು ಎಂದು ಹೇಳಲಾಗಿದೆ.
೩. ತನಿಖೆಯ ಸಮಯದಲ್ಲಿ, ಮಾವೋವಾದಿ ಪೀಡಿತ ಧಮ್ತರಿ ಜಿಲ್ಲೆಯ ಸಹಕಾರಿ ಬ್ಯಾಂಕ್ನ ‘ವಿಜಯಾ ಪಾಲೇಜಾ’ ಶಾಖೆಯ ‘ಎಟಿಎಂ’ನಲ್ಲಿ ವಿದೇಶಿ ಡೆಬಿಟ್ ಕಾರ್ಡ್ಗಳನ್ನು ಬಳಸಿರುವುದು ಕಂಡುಬಂದಿದೆ ಎಂದು ‘ಇಡಿ’ ಬಹಿರಂಗಪಡಿಸಿದೆ. ವರ್ಗೀಸ್ ಚಾಕೊ ಈ ನಗದು ಹಿಂಪಡೆಯುವ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದನು.
೪. ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡುವುದೇ ಈ ವಿದೇಶಿ ಹಣ ವರ್ಗಾವಣೆಯ ಪ್ರಮುಖ ಉದ್ದೇಶವಾಗಿತ್ತು.
೫. ಜೋನಾಥನ್ ರಾಜನ್ ಭಾರತದಾದ್ಯಂತ ‘ಟಿಟಿಐ’ನ ಆರ್ಥಿಕ ವ್ಯವಹಾರಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದನು. ಹಣ ವರ್ಗಾಯಿಸಲು ಈತ ಅಜಿತ್ ವರ್ಗೀಸ್ ಮಥಾಯಿ ಜೊತೆ ಸಂಯೋಜನೆ ಸಾಧಿಸಿದ್ದನೆಂದು ಆರೋಪಿಸಲಾಗಿದೆ.
೬. ಅಜಿತ್ ಮಥಾಯಿ ಅವರ ಕಚೇರಿಯ ಮೇಲೆ ದಾಳಿ ನಡೆಸಿದಾಗ ೩೭ ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-IRAN Peace Deal : ಅಮೆರಿಕ-ಇರಾನ್ ಯುದ್ಧ ಅಂತ್ಯ!
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು