‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)

ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಅವರ ಹೇಳಿಕೆ

ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ

ಮೊರಾದಾಬಾದ್ (ಉತ್ತರ ಪ್ರದೇಶ) – ಭಾಜಪ ಹರಡಿದ ವಿಷವನ್ನು ಬಹುಸಂಖ್ಯಾತ ಜನತೆ ಕುಡಿಯಲು ಪ್ರಾರಂಭಿಸಿದೆ ಮತ್ತು ಅದು ಬಹುತೇಕ ವಿಷಪೂರಿತವಾಗಿದೆ. ನಾನು ಆರೋಪ ಮಾಡುತ್ತಿಲ್ಲ; ಆದರೆ ಭಾಜಪವು ಇಂತಹ ವಾತಾವರಣವನ್ನು ನಿರ್ಮಿಸಿದೆ, ಇಂದು ಉತ್ತರ ಪ್ರದೇಶ ಮತ್ತು ದೇಶದಲ್ಲಿ ಪರಸ್ಪರ ಇದ್ದ ವಿಶ್ವಾಸ ಧರ್ಮದ ಆಧಾರದ ಮೇಲೆ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ ಮತ್ತು ಆ ವಿಶ್ವಾಸ ಮುರಿದಿದೆ, ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ಜಾವೇದ್ ಅಲಿ ಅವರು ಇಲ್ಲಿ ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

  • ಕಾಶ್ಮೀರದಲ್ಲಿ ನಾಲ್ಕೂವರೆ ಲಕ್ಷ ಹಿಂದೂಗಳು ಸ್ಥಳಾಂತರಗೊಳ್ಳಲು ಅಲ್ಲಿನ ಬಹುಸಂಖ್ಯಾತ ಮುಸಲ್ಮಾನರಿಗೆ ಯಾರು ವಿಷ ಕುಡಿಸಿದ್ದರು? ಎಂದು ಜಾವೇದ್ ಅಲಿ ಹೇಳುತ್ತಾರೆಯೇ?
  • ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದ್ದರೆ, ಅವರ ಮೇಲೆ ದಾಳಿ ಮಾಡುವ ಒಬ್ಬ ಮತಾಂಧನೂ ಉಳಿಯುತ್ತಿರಲಿಲ್ಲ!