ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !

  • ಧಾರವಾಡ ಕೇಂದ್ರ ಕಾರಾಗೃಹದ ಘಟನೆ

  • ವಾರ್ಡನ್ ಗಂಭೀರ ಗಾಯ

(ಜೈಲು ವಾರ್ಡನ್ ಎಂದರೆ ಜೈಲಿನ ಮುಖ್ಯ ವ್ಯವಸ್ಥಾಪಕರು, ಮೇಲ್ವಿಚಾರಣೆ ಮಾಡುವ ಅಧಿಕಾರಿ)

(ಪ್ರಾತಿನಿಧಿಕ ಚಿತ್ರ)

ಧಾರವಾಡ – ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದ ಮುಸ್ಲಿಂ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲಿನ ‘ವಾರ್ಡನ್’ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಇದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕೈದಿಗಳಿಗೆ ಜೈಲು ಆಡಳಿತ ಮಂಡಳಿಯು ತಕ್ಷಣವೇ ಶಿಕ್ಷೆ ವಿಧಿಸಿದೆ.

೧. ಫೆಬ್ರವರಿ ೨೦, ೨೦೨೨ ರಂದು ಶಿವಮೊಗ್ಗದಲ್ಲಿ ಬಜರಂಗದಳದ ೨೬ ವರ್ಷದ ಕಾರ್ಯಕರ್ತ ಹರ್ಷ ಅವರನ್ನು ಕೆಲವು ಮುಸ್ಲಿಂ ಮತಾಂಧರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳನ್ನು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

೨. ಜೂನ್ ೧೩ ರಂದು ಸಣ್ಣ ಕಾರಣಕ್ಕಾಗಿ ಈ ಆರೋಪಿಗಳು ಜೈಲಿನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಇಬ್ಬರೂ ಆರೋಪಿಗಳು ಅಲ್ಲಿ ಕರ್ತವ್ಯದಲ್ಲಿದ್ದ ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಕಿರಣ ಅವರನ್ನು ತಕ್ಷಣವೇ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

೩. ಜೈಲಿನ ಒಳಗಡೆ ಸರಕಾರಿ ನೌಕರನ ಮೇಲೆ ನಡೆದಿರುವ ಈ ದಾಳಿಯನ್ನು ಜೈಲು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಈ ಆರೋಪಿಗಳ ವಿರುದ್ಧ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

೪. ಮುಂದಿನ ಒಂದು ತಿಂಗಳವರೆಗೆ ಈ ಕೈದಿಗಳನ್ನು ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಸಂಬಂಧಿಕರು ಭೇಟಿಯಾಗಲು ಸಾಧ್ಯವಿಲ್ಲ ಎಂಬ ಶಿಕ್ಷೆಯನ್ನು ಅವರಿಗೆ ವಿಧಿಸಲಾಗಿದೆ. (ಇಂತಹವರಿಗೆ ೧ ತಿಂಗಳಲ್ಲ, ಬದಲಿಗೆ ೧ ವರ್ಷದವರೆಗೆ ಅವರ ಕುಟುಂಬಸ್ಥರನ್ನು ಭೇಟಿಯಾಗದಂತೆ ಶಿಕ್ಷೆ ನೀಡಬೇಕು! – ಸಂಪಾದಕರು)