ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಏನೆಲ್ಲ ಪೂರ್ವಸಿದ್ಧತೆಗಳನ್ನು ಮಾಡಬೇಕು ?

ಮಳೆಗಾಲದಲ್ಲಿ ಅತಿವೃಷ್ಟಿಯಾದರೆ ಪ್ರವಾಹ (ನೆರೆ) ಬರುತ್ತದೆ. ಬೇರೆ ಋತುಮಾನಗಳಲ್ಲಿಯೂ ಮೇಘಸ್ಫೋಟದಿಂದ ಪ್ರವಾಹ ಬರಬಹುದು. ೨೦೧೯ ನೇ ಇಸವಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಅನೇಕ ನಗರಗಳು ಅತಿವೃಷ್ಟಿಯಿಂದ ಜಲಾವೃತ್ತಗೊಂಡಿದ್ದವು. ಬಹಳಷ್ಟು ಗ್ರಾಮಗಳನ್ನು ಜೋಡಿಸುವ ರಸ್ತೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಮತ್ತು ಹೆದ್ದಾರಿಗಳ ಮೇಲೆ ನೀರು ಬಂದಿದ್ದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸಾವಿರಾರು ನಾಗರಿಕರ ಮನೆಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಸ್ಥಳಗಳಲ್ಲಿ ನೀರಿನ ಪ್ರವಾಹಕ್ಕೆ ಅದರಲ್ಲಿ ಕೆಲವು ಜನರು, ದನ-ಕರುಗಳು, ವಾಹನಗಳು ಕೊಚ್ಚಿ ಹೋದವು. ಪೆಟ್ರೋಲ್, ಡೀಝೇಲ್, ಹಾಲು ಇತ್ಯಾದಿ ಜೀವನಾವಶ್ಯಕ ವಸ್ತುಗಳು ದೊರೆಯುವುದು ದುರ್ಲಭವಾಗಿತ್ತು. ಅಕಸ್ಮಿಕವಾಗಿ ಉದ್ಭವಿಸಿದ ಈ ನೈಸರ್ಗಿಕ ವಿಪತ್ತಿನಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

‘ಭವಿಷ್ಯದಲ್ಲಿ ಇಂತಹ ಸ್ಥಿತಿ ಪುನಃ ಯಾವಾಗ ಉದ್ಭವಿಸಬಹುದು ?, ಎಂಬುದನ್ನು ಯಾರೂ ಹೇಳಲಾಗದು. ಆದುದರಿಂದ ‘ನೆರೆ ಪೀಡಿತ ಪ್ರದೇಶಗಳಲ್ಲಿನ ನಾಗರಿಕರು ಯಾವ ರೀತಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ?, ಎನ್ನುವ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಮುಂದೆ ನೀಡಲಾಗಿದೆ.

೬. ಪ್ರವಾಹದ ನೀರಿನಿಂದ ಹೊರಗೆ ಬರಲು ಮಾಡಬೇಕಾದ ಪೂರ್ವಸಿದ್ಧತೆ

ಅ. ಕೆಲವೊಮ್ಮೆ ಪ್ರವಾಹದ ನೀರಿನ ಮಟ್ಟ ೭-೮ ಅಡಿ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ವ್ಯಕ್ತಿಗೆ ಈಜಲು ಬರದಿದ್ದರೆ ಅವನ ಜೀವ ಅಪಾಯದಲ್ಲಿ ಸಿಲುಕಬಹುದು. ಆದುದರಿಂದ ಸಾಧ್ಯವಾದಷ್ಟು ಹೆಚ್ಚೆಚ್ಚು ಜನರು ಈಜಲು ಕಲಿಯಬೇಕು.

ಆ. ಪ್ರವಾಹದ ನೀರಿನಿಂದ ಸುರಕ್ಷಿತ ಸ್ಥಳಗಳಿಗೆ ಹೋಗಲು ‘ಲೈಫ್ ಜಾಕೆಟುಗಳನ್ನು (‘ಜೀವರಕ್ಷಕ ಜಾಕೀಟು) ಉಪಯೋಗಿಸಬಹುದು. ಇದರಿಂದ ನೀರು ಎಷ್ಟು ಆಳವಿದ್ದರೂ, ವ್ಯಕ್ತಿ ನೀರಿನಲ್ಲಿ ಮುಳುಗುವುದಿಲ್ಲ. ‘ಲೈಫ್ ಜಾಕೆಟ್ಗಳನ್ನು ಖರೀದಿಸಿಟ್ಟುಕೊಂಡರೆ ಆಪತ್ಕಾಲದ ಸ್ಥಿತಿಯಲ್ಲಿ ಅವುಗಳನ್ನು ಉಪಯೋಗಿಸಬಹುದು.

ಇ. ವಾಹನಗಳ ‘ಟಯರ್‌ಗಳ ಟ್ಯೂಬ್ಗಳಲ್ಲಿ ಗಾಳಿತುಂಬಿಸಿ, ಅವುಗಳನ್ನು ಉಪಯೋಗಿಸಿದರೆ ನೀರಿನಲ್ಲಿ ಮುಳುಗುವುದರಿಂದ ರಕ್ಷಿಸಿಕೊಳ್ಳಬಹುದು. ಆದುದರಿಂದ ಮನೆಯಲ್ಲಿ ಎಷ್ಟು ವ್ಯಕ್ತಿಗಳಿದ್ದಾರೆಯೋ, ಅಷ್ಟು ಸಂಖ್ಯೆಯಲ್ಲಿ ‘ಟಯರ್‌ಗಳ ಟ್ಯೂಬ್ಗಳನ್ನು  ತಂದು ಇಟ್ಟುಕೊಳ್ಳಬೇಕು.

೭.  ಇತರ ಮಹತ್ವದ ಅಂಶಗಳು

೭ ಅ. ಜೀವನಾವಶ್ಯಕ ಸಾಹಿತ್ಯಗಳನ್ನು ಒಟ್ಟಿಗೆ ಇಡುವುದು: ಪ್ರವಾಹ, ಭೂಕಂಪ ಅಥವಾ ಇನ್ನಿತರೆ ಆಪತ್ಕಾಲದ ಪ್ರಸಂಗಗಳು ಉದ್ಭವಿಸಿದರೆ, ತಕ್ಷಣವೇ ಮನೆಯನ್ನು ಬಿಟ್ಟು ಇತರ ಸ್ಥಳಗಳಿಗೆ ಸ್ಥಳಾಂತರವಾಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿನ ಮಹತ್ವದ ವಸ್ತುಗಳನ್ನು ಒಟ್ಟುಗೂಡಿಸಲು ಸಮಯಾವಕಾಶ ಸಿಗುವುದಿಲ್ಲ. ಈ ಕಾರಣದಿಂದ ನೀರಿನಿಂದ ಒದ್ದೆಯಾಗದಂತಹ ಒಂದು ಚೀಲದಲ್ಲಿ ಎಲ್ಲ ಜೀವನಾವಶ್ಯಕ ವಸ್ತುಗಳನ್ನು (ಬಟ್ಟೆ, ಔಷಧಿ ಇತ್ಯಾದಿ) ಒಟ್ಟು ಮಾಡಿ ಇಟ್ಟುಕೊಳ್ಳಬೇಕು.

೭ ಆ. ಒಳ್ಳೆಯ ಗುಣಮಟ್ಟದ ‘ಪ್ಲಾಸ್ಟಿಕ್ ಶೀಟ್, ಹಾಗೆಯೇ ಗಟ್ಟಿಯಾದ ಹಗ್ಗ ಮನೆಯಲ್ಲಿರಬೇಕು ಮತ್ತು ‘ಅವುಗಳನ್ನು ಸಹಜವಾಗಿ ಕೈಗೆ ಸಿಗುವಂತಹ ಸ್ಥಳದಲ್ಲಿ ಇಡಬೇಕು. ಪ್ರವಾಹಸ್ಥಿತಿಯಲ್ಲಿ ಸಾಮಗ್ರಿಗಳನ್ನು ಕಟ್ಟಲು ಅವುಗಳ ಉಪಯೋಗವಾಗುವುದು.

೭ ಇ. ಮಹತ್ವದ ಸಂಪರ್ಕ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಒಂದು ವಹಿಯಲ್ಲಿ ಬರೆದಿಡುವುದು : ವಿದ್ಯುತ್ ಸ್ಥಗಿತಗೊಂಡರೆ ಸಂಚಾರವಾಣಿಯನ್ನು ಚಾರ್ಜ ಮಾಡಲು ಆಗುವುದಿಲ್ಲ. ಈ ಕಾರಣದಿಂದ ಪರಸ್ಪರರನ್ನು ಸಂಪರ್ಕಿಸಲು ತೊಂದರೆಯಾಗಬಾರದೆಂದು, ತಮ್ಮ ಸಂಬಂಧಿಕರು, ಪೊಲೀಸ್ ಠಾಣೆ,  ಅಗ್ನಿಶಾಮಕ ದಳ, ತಮ್ಮ ಹತ್ತಿರದ ಆಸ್ಪತ್ರೆ ಇತ್ಯಾದಿ ಸ್ಥಳಗಳ ದೂರವಾಣಿ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಒಂದು ನೊಂದಣಿ ವಹಿಯಲ್ಲಿ ನೊಂದಣಿ ಮಾಡಿ ತಮ್ಮ ಬಳಿ ಇಟ್ಟುಕೊಳ್ಳಬೇಕು, ಇದರಿಂದ ಇತರರ ಸಂಚಾರವಾಣಿ ಮುಖಾಂತರ ಅವರನ್ನು ಸಂಪರ್ಕಿಸಬಹುದು.

೮. ಮಳೆಗಾಲದ ಮೊದಲು ಮಾಡಬೇಕಾದ ಪೂರ್ವಸಿದ್ಧತೆಗಳು

ಅ. ಮಾನವರಿಗಿಂತ ಪ್ರಾಣಿಗಳಲ್ಲಿ ಅಪಾಯದ ಸಂವೇದನೆಗಳನ್ನು ಅರಿಯುವ ಕ್ಷಮತೆ ಅಧಿಕವಿರುತ್ತದೆ. ಈ ಕಾರಣದಿಂದ ಮನೆಯಲ್ಲಿ ಸಾಕಿದ ಪ್ರಾಣಿಗಳ ನಡುವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ಜಾಗೃತರಾಗಬೇಕು.

ಆ. ಪ್ರಾಣಿಗಳನ್ನು (ನಾಯಿ, ಹಸು ಇತ್ಯಾದಿಗಳನ್ನು) ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ‘ಅಲ್ಲಿ ಅವುಗಳಿಗೆ ಹುಲ್ಲು ಮತ್ತು ನೀರು ದೊರಕುವ ವ್ಯವಸ್ಥೆಯನ್ನು ಮಾಡಬೇಕು. ಆಪತ್ತಿನ ಪ್ರಸಂಗಗಳಲ್ಲಿ ಸರಕಾರ ಹಾಗೂ ಸ್ವಯಂಸೇವಿ ಸಂಘಟನೆಗಳಿಂದ ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡುವ ವ್ಯವಸ್ಥೆಯನ್ನು ಮಾಡಿದ್ದರೆ, ಅದರ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. (೨೦೧೯ನೇ ಇಸವಿಯಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಂದ ಪ್ರವಾಹದಲ್ಲಿ ಒಟ್ಟು ೮ ಸಾವಿರ ಪ್ರಾಣಿಗಳು ಮರಣ ಹೊಂದಿವೆಂದು ಅಂಕಿ-ಅಂಶಗಳಿಂದ ತಿಳಿದು ಬಂದಿತ್ತು; ಆದರೆ ಅದು ಅದಕ್ಕಿಂತಲೂ ಹೆಚ್ಚಿರಬಹುದು)

ಇ. ‘ಪ್ರವಾಹ ಬಂದರೆ ನಾವು ಸಂಬಂಧಿಕರು, ಪರಿಚಿತರು, ಸ್ನೇಹಿತರು ಇವರಲ್ಲಿ ಯಾರ ಬಳಿ ಹೋಗಿ ಇರಬಹುದು ?, ಎನ್ನುವ ವಿಚಾರವನ್ನು ಮಾಡಿಟ್ಟುಕೊಳ್ಳಬೇಕು. ಇದರಿಂದ ಪ್ರಸಂಗ ಎದುರಾದಾಗ ವಿಚಾರಿಸಲು, ಹುಡುಕಾಟ ಮಾಡಲು ಸಮಯ ವ್ಯರ್ಥವಾಗಲಾರದು.

ಈ. ಆಪತ್ಕಾಲೀನ ಸ್ಥಿತಿಯಲ್ಲಿ ಮನೆಯಲ್ಲಿನ ವೃದ್ಧರು ಮತ್ತು ಚಿಕ್ಕ ಮಕ್ಕಳಿಗೆ ‘ಏನೇನು ಬೇಕಾಗುತ್ತದೆ?, ಎಂಬುದರ ವಿಚಾರವನ್ನು ಮಾಡಿ ಅವುಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.

ಉ. ಮನೆಯಲ್ಲಿ ನೆಲಮಾಳಿಗೆಯಿದ್ದರೆ ಅಲ್ಲಿನ ವಸ್ತುಗಳನ್ನು ಮೇಲಿನ ಮಾಳಿಗೆಯಲ್ಲಿ ತಂದಿಡಬೇಕು. ಮನೆಯಲ್ಲಿ ನೀರು ಬಂದರೆ ಹಾಳಾಗುವ ವಸ್ತುಗಳು (ಉದಾ: ಹಾಸಿಗೆ, ತಲೆದಿಂಬು, ದೊಡ್ಡ ರಜಾಯಿ) ಇದ್ದರೆ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು.

ಊ. ಮನೆಯಲ್ಲಿರುವ ಕಟ್ಟಿಗೆಯ ಪೀಠೋಪಕರಣಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅವುಗಳನ್ನು ಮನೆಯ ಕಾಲಂ (ಸಿಮೆಂಟ ಕಂಬ), ಕಿಟಕಿಗಳಿಗೆ ಸರಪಳಿಯಿಂದ ಕಟ್ಟಿಡಬೇಕು. ಇದರಿಂದ ಅವು ನೀರಿನ ಪ್ರವಾಹದಿಂದ ಬೇರೆಡೆಗೆ ಹರಿದು ಹೋಗುವುದಿಲ್ಲ.

ಎ. ಪ್ರವಾಹದ ಸಮಯದಲ್ಲಿ ನೀವು ಬೇರೆ ಕಡೆಗೆ ಸ್ಥಳಾಂತರವಾಗುವವರಿದ್ದರೆ, ಆ ಸಮಯದಲ್ಲಿ ನಿಮ್ಮ ದೇವರಕೋಣೆಯಲ್ಲಿನ ಚಿಕ್ಕ ಆಕಾರದ ಮೂರ್ತಿಗಳನ್ನು, ಹಾಗೆಯೇ ದೇವತೆಗಳ ಚಿತ್ರಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಎಲ್ಲ ಮೂರ್ತಿಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಿದ್ದರೆ, ದೇವರ ಕೋಣೆಯಲ್ಲಿನ ಚಿಕ್ಕ ಆಕಾರದ ಮೂರ್ತಿಗಳು, ದೇವತೆಗಳ ಅಚ್ಚು, ಸಾಲಿಗ್ರಾಮ ಇತ್ಯಾದಿಗಳನ್ನು ‘ಸ್ಟೀಲ್ ಅಥವಾ ‘ಅಲ್ಯುಮಿನಿಯಮ್ನ ಡಬ್ಬಿಯಲ್ಲಿ ಒಂದು ಬಟ್ಟೆಯನ್ನು ಹಾಕಿ ಅದರಲ್ಲಿ ಇಡಬಹುದು. ಒಂದೇ ಡಬ್ಬಿಯಲ್ಲಿ ಒಂದಕ್ಕಿಂತ ಅಧಿಕ ಮೂರ್ತಿಗಳನ್ನು ಇಟ್ಟರೂ ನಡೆಯುತ್ತದೆ, ಆದರೆ ಮೂರ್ತಿಗಳು ಒಂದಕ್ಕೊಂದು ಘರ್ಷಿಸಿ ಮೂರ್ತಿಗಳಿಗೆ ಪೆಟ್ಟಾಗದಂತೆ, ಎರಡು ಮೂರ್ತಿಗಳ ಮಧ್ಯೆ ಮೆತ್ತಗಿನ ಬಟ್ಟೆ ಅಥವಾ ಹತ್ತಿಯನ್ನು ಇಡಬೇಕು. ಈ ಡಬ್ಬಿಗಳನ್ನು ಸಾಧ್ಯವಾದಷ್ಟು ನಿಮ್ಮ ಮನೆಯಲ್ಲಿ (ಪ್ರವಾಹ ಕ್ಷೇತ್ರದಲ್ಲಿ) ಇಟ್ಟುಕೊಳ್ಳದೇ ಸಂಬಂಧಿಕರ ಅಥವಾ ಸ್ನೇಹಿತರ ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು.

ಏ. ಮನೆಯಲ್ಲಿರುವ ಭಾರವಾದ ಮೂರ್ತಿಗಳನ್ನು ಬೇರೆ ಕಡೆಗೆ ಒಯ್ಯಲು ಸಾಧ್ಯವಿದ್ದರೆ ಅವುಗಳನ್ನು ಬೇರೆ ಕಡೆಗೆ ಒಯ್ದು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಹಾಗೆ ಮಾಡುವುದು ಸಾಧ್ಯವಿಲ್ಲದಿದ್ದರೆ ಮೂರ್ತಿಗಳನ್ನು ಮನೆಯಲ್ಲಿನ ಎತ್ತರದ ಮತ್ತು ಸುರಕ್ಷಿತ ಸ್ಥಳದಲ್ಲಿ ಅಥವಾ ಮೇಲೆ ಮಾಳಿಗೆಯಿದ್ದರೆ ಅಲ್ಲಿಡಬೇಕು. ಮೂರ್ತಿಗಳನ್ನು ಇಡಲು ಮುಂದಿನಂತೆ ಪೆಟ್ಟಿಗೆಯನ್ನು ತಯಾರಿಸಿಕೊಳ್ಳಬಹುದು. ನೀರಿನಿಂದ ಹಾಳಾಗದ ಒಳ್ಳೆಯ ಜಾತಿಯ ಮರದ ಹಲಗೆಗಳ ಚೌಕಾಕಾರದ ಪೆಟ್ಟಿಗೆಯನ್ನು ತಯಾರಿಸಬೇಕು. ಸ್ವಲ್ಪ ಕಾಲದವರೆಗಾದರೂ ಅದರಲ್ಲಿ ಮೂರ್ತಿಗಳು ವ್ಯವಸ್ಥಿತವಾಗಿ ಇರಬಹುದು. ಮರದ ಪೆಟ್ಟಿಗೆಗೆ ಬಣ್ಣ ಹಚ್ಚಿದರೆ ಅಥವಾ ಅದಕ್ಕೆ ‘ವಾಟರಪ್ರೂಫ ಕೋಟಿಂಗ್ ಮಾಡಿದರೆ ಪೆಟ್ಟಿಗೆಯು ದೀರ್ಘಕಾಲದವರೆಗೆ ಹಾಳಾಗದೇ ಉಳಿಯಬಹುದು. ಒಳ್ಳೆಯ ಜಾತಿಯ ಮರವು ಉಪಲಬ್ಧವಿಲ್ಲದಿದ್ದರೆ ಫೈಬರ್ ಅಥವಾ ಅದರಂತಹ ಇತರೆ ಸಾಮಗ್ರಿಗಳನ್ನು ಉಪಯೋಗಿಸಿ ಪೆಟ್ಟಿಗೆಯನ್ನು ತಯಾರಿಸಿಕೊಳ್ಳಬೇಕು.

ಒ. ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಉಪಕರಣಗಳಲ್ಲಿ (ಶೀತ ಕಪಾಟು, ಒಗೆಯುವ ಯಂತ್ರ, ದೂರದರ್ಶನವಾಹಿನಿ ಸಂಚು, ‘ಓವನ್ ಇತ್ಯಾದಿಗಳಲ್ಲಿ) ನೀರು ಹೋದರೆ ಅವು ಹಾಳಾಗುತ್ತವೆ. ಆದುದರಿಂದ ಅವುಗಳನ್ನು ‘ಪ್ಲಾಸ್ಟಿಕ್ನಿಂದ ವ್ಯವಸ್ಥಿತವಾಗಿ ಕಟ್ಟಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಭಾರವಾದ ವಸ್ತುಗಳನ್ನು ಮತ್ತು ಉಪಕರಣಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಅವುಗಳನ್ನು ಮೇಲಿನಂತೆ ಪ್ಯಾಕ್ ಮಾಡಿ ಸರಪಳಿಯಿಂದ ಗೋಡೆಗೆ ಕಟ್ಟಿಡಬೇಕು. ಒಟ್ಟಾರೆ ನೀರಿನ ಮಟ್ಟ ಹೆಚ್ಚಾದರೂ ಅವು ತೇಲಿ ಹೋಗಲಾರವು.

ಓ. ಪ್ರವಾಹದ ಸಮಯದಲ್ಲಿ ವಿದ್ಯುತ್‌ವು ಅನೇಕ ಗಂಟೆಗಳಿಗಾಗಿ ಮತ್ತು ಕೆಲವೊಂದು ಸ್ಥಳಗಳಲ್ಲಿ ಅನೇಕ ದಿನಗಳಿಗಾಗಿ ಸ್ಥಗಿತವಾಗುತ್ತದೆ. ಇಂತಹ ಸಮಯದಲ್ಲಿ ಸಂಚಾರವಾಣಿ ಡಿಸ್ಚಾರ್ಜ್ ಆದರೆ ಸಂಪರ್ಕವನ್ನು ಮಾಡಲು ಅನೇಕ ಅಡಚಣೆಗಳು ಬರುತ್ತವೆ. ಇದಕ್ಕಾಗಿ ಪವರ್ ಬ್ಯಾಂಕನ್ನು ಉಪಯೋಗಿಸಬಹುದು. ಮನೆಯಲ್ಲಿ ಹಳೆಯ ಸಂಚಾರವಾಣಿಗಳಿದ್ದರೆ, ಅವು ಸರಿಯಾಗಿ ನಡೆಯುತ್ತವೆಯೇ ಎಂದು ಪರಿಶೀಲಿಸಬೇಕು. ಆಪತ್ತುಗಳಲ್ಲಿ ಅವುಗಳನ್ನು ಉಪಯೋಗಿಸಬಹುದು.

ಔ. ಛತ್ರಿ, ರೇನಕೋಟ್, ಹಾಗೆಯೇ ಮಳೆಗಾಲದಲ್ಲಿ ಉಪಯೋಗಿಸುವ ಬೂಟುಗಳಿದ್ದರೆ ಅವುಗಳನ್ನು ಸ್ವಚ್ಛಗೊಳಿಸಿಡಬೇಕು.

ಅಂ. ಮನೆಯ ಸಮೀಪದಲ್ಲಿ ತಗ್ಗುಗಳಿದ್ದರೆ ಮಳೆಗಾಲದಲ್ಲಿ ಅವುಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಅವುಗಳನ್ನು ಸಾಧ್ಯವಿದ್ದಷ್ಟು ಮುಚ್ಚಬೇಕು. ಒಟ್ಟಿನಲ್ಲಿ ಮನೆಯ ಪರಿಸರದಲ್ಲಿ ನೀರು ನಿಲ್ಲದ ಹಾಗೆ ಕಾಳಜಿ ವಹಿಸಬೇಕು.

ಕ. ಆಡಳಿತ ಮತ್ತು ಹವಾಮಾನ ಇಲಾಖೆಯಿಂದ ಆಗಾಗ ಪ್ರಸಾರವಾಗುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವುಗಳನ್ನು ನಿರ್ಲಕ್ಷಿಸಬಾರದು. (ಮುಂದಿನ ಭಾಗವನ್ನು ಮುಂದಿನ ವಾರದಲ್ಲಿ ಓದಿರಿ)

 (ಪ್ರಸ್ತುತ ಲೇಖನಮಾಲಿಕೆಯ ಸ್ವಾಮಿತ್ವ (ಕ್ವಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿ ಸಂರಕ್ಷಿಸಲ್ಪಟ್ಟಿದೆ)

ಜನರೇ, ಆಪತ್ಕಾಲದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿನ ಸಿದ್ಧತೆಗಳನ್ನು ಮಾಡಿಕೊಳ್ಳುವುದರೊಂದಿಗೆ ಸಾಧನೆಯನ್ನು ಪ್ರಾರಂಭಿಸಿ ಆಧ್ಯಾತ್ಮಿಕ ಸ್ತರದಲ್ಲಿನ ಸಿದ್ಧತೆಯನ್ನೂ ಮಾಡಿಕೊಳ್ಳಿರಿ !

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಪೂರ್ವ ಸಿದ್ಧತೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಪ್ರತಿನಿತ್ಯ ಭಗವಂತನ ಆರಾಧನೆ (ಸಾಧನೆ)ಯನ್ನು ಮಾಡಬೇಕು. ಸರ್ವಸಾಮಾನ್ಯ ವ್ಯಕ್ತಿ ಆಪತ್ಕಾಲದ ಸ್ಥಿತಿಯಲ್ಲಿ ತುಂಬಾ ಹೆದರುತ್ತಾನೆ. ಆದರೆ ಸಾಧನೆಯನ್ನು ಮಾಡುವವರ(ಸಾಧಕರ) ಮನಸ್ಸಿನಲ್ಲಿ ಮಾತ್ರ ‘ಈ ಕಠಿಣ ಪ್ರಸಂಗದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡುತ್ತಾನೆ, ಎನ್ನುವ ದೃಢ ವಿಶ್ವಾಸವಿರುವುದರಿಂದ ಅವರು ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲರು. ಜೀವನದಲ್ಲಿ ಘಟಿಸುವ ದುಃಖದ ಪ್ರಸಂಗಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಕೇವಲ ಸಾಧನೆಯಿಂದಲೇ ಪ್ರಾಪ್ತವಾಗುತ್ತದೆ.

ಜನರೇ, ಸಂಭವನೀಯ ಆಪತ್ಕಾಲದಲ್ಲಿ ತಮ್ಮ ಜೀವನ ಸುಲಭ ವಾಗಲು ಸಾಧನೆಯನ್ನು ಬೇಗನೇ ಪ್ರಾರಂಭಿಸಿರಿ ಮತ್ತು ಆಪತ್ಕಾಲವನ್ನು ಎದುರಿಸಲು ಎಲ್ಲ ಸ್ತರಗಳಲ್ಲಿಯೂ ಸಿದ್ಧರಾಗಿರಿ !

ಓದುಗರಿಗೆ ಕರೆ !

ಪ್ರವಾಹದ (ನೆರೆಯ) ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಓದುಗರಿಗೆ, ಈ ವಿಷಯಕ್ಕೆ ಸಂಬಂಧಿಸಿದ ಇತರ ಇನ್ನೂ ಏನಾದರೂ ಅಂಶಗಳನ್ನು ಸೂಚಿಸುವು ದಿದ್ದರೆ, ಅವರು ಅವುಗಳನ್ನು ವಿವರವಾಗಿ ಬರೆದು ಕೆಳಗಿನ ಗಣಕೀಯ ವಿಳಾಸಕ್ಕೆ  ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕು ಎಂದು ವಿನಂತಿ. ಇದರಿಂದ ಈ ವಿಷಯವನ್ನು ಸಮಾಜದ ಎದುರಿಗೆ ವಿವರವಾಗಿ ಮಂಡಿಸಲು ಸಹಾಯವಾಗುವುದು.

ಸಂಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401.