ಹುಂಡಿಯ ಹಣ ಕದ್ದ ಆರೋಪದ ಪ್ರಕರಣ
ಮತ್ತೊಬ್ಬ ಸಿಬ್ಬಂದಿಯ ತನಿಖೆಯೂ ನಡೆಯುತ್ತಿದೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಹುಂಡಿಯ ಹಣ ಕಳುವಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ಮಂದಿರದ ಸಿಬ್ಬಂದಿ ಲವಕುಶ ಮಿಶ್ರಾ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ಸಮಯದಲ್ಲಿ ತನಿಖಾ ಸಂಸ್ಥೆಗೆ ಮಿಶ್ರಾ ಅವನ ಮನೆಯಲ್ಲಿ 10 ಲಕ್ಷ ರೂಪಾಯಿ ಸಿಕ್ಕಿದೆ. ಆತ ಸ್ವಲ್ಪ ಹಣವನ್ನು ಕಪಾಟಿನಲ್ಲಿ, ಇನ್ನು ಸ್ವಲ್ಪ ಹಣವನ್ನು ಸಗಣಿಯ ರಾಶಿಯ ಕೆಳಗೆ ಬಚ್ಚಿಟ್ಟಿದ್ದನು. ಮಿಶ್ರಾ ಮಂದಿರಕ್ಕೆ ಬಂದ ದೇಣಿಗೆಯನ್ನು ಎಣಿಸುವ ಕೆಲಸ ಮಾಡುತ್ತಾನೆ. ಅವನು ಮೀನಾಪುರದ ಫಗೌಲಿ ಗ್ರಾಮದ ನಿವಾಸಿಯಾಗಿದ್ದಾನೆ.
ವಿರೋಧ ಪಕ್ಷಗಳು ಹುಂಡಿಯ ಹಣ ಕಳುವಾಗಿದೆ ಎಂದು ಆರೋಪಿಸಿದ ನಂತರ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿತು. ಮುಖ್ಯಮಂತ್ರಿಗಳು ಕೆಲವೇ ಗಂಟೆಗಳಲ್ಲಿ ತಂಡವನ್ನು ರಚಿಸಿದರು ಮತ್ತು ಅದೇ ದಿನ ಮಿಶ್ರಾ ನನ್ನು ವಶಕ್ಕೆ ಪಡೆಯಲಾಯಿತು. ಈ ಪ್ರಕರಣದಲ್ಲಿ ಮತ್ತೊಬ್ಬ ಸಿಬ್ಬಂದಿಯ ತನಿಖೆಯೂ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಆತನಿಗೂ ಮಿಶ್ರಾನಂತೆಯೇ ದೇಣಿಗೆ ಮೊತ್ತವನ್ನು ಎಣಿಸುವ ಕೆಲಸವಿತ್ತು.
18 ಸಾವಿರ ರೂಪಾಯಿ ಸಂಬಳದಲ್ಲಿ ಒಂದೂವರೆ ಕೋಟಿ ರೂಪಾಯಿ ಬೆಲೆಯ ಜಮೀನು ಖರೀದಿ !
ಶಂಕಿತರಿಬ್ಬರೂ ಸಿಬ್ಬಂದಿಗೆ ತಿಂಗಳಿಗೆ 18 ರಿಂದ 20 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ; ಆದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಅವರ ಸಂಪತ್ತಿನಲ್ಲಿ ಹಠಾತ್ ಹೆಚ್ಚಳವಾಗಿರುವುದರಿಂದ ತನಿಖಾ ತಂಡವು ಈ ಆದಾಯದ ಮೂಲವನ್ನು ಹುಡುಕುತ್ತಿದೆ. ಒಬ್ಬ ಸಿಬ್ಬಂದಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಜಮೀನು ಖರೀದಿಸಿದ್ದರೆ, ಮತ್ತೊಬ್ಬ 40 ಲಕ್ಷ ರೂಪಾಯಿ ಮೌಲ್ಯದ ಹೊಸ ಫ್ಲಾಟ್ ಖರೀದಿಸಿರುವುದು ಬಹಿರಂಗವಾಗಿದೆ.
ಮಿಶ್ರಾನ ತಂದೆ ಬಚ್ಚೂಲಾಲ್ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದು, ಮನೆ ನಿರ್ಮಾಣಕ್ಕಾಗಿ ಪಿತ್ರಾರ್ಜಿತ ಜಮೀನನ್ನು ಅಡವಿಟ್ಟು ಈ ಹಣವನ್ನು ತಂದಿರುವುದಾಗಿ ತಿಳಿಸಿದ್ದಾರೆ.
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ