
ಢಾಕಾ (ಬಾಂಗ್ಲಾದೇಶ) – ಭಾರತದೊಂದಿಗಿನ ಸಂಬಂಧಗಳ ಭವಿಷ್ಯವು ಗಂಗಾ ನದಿ ನೀರು ಹಂಚಿಕೆ ಒಪ್ಪಂದದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಾಂಗ್ಲಾದೇಶದ ಆಡಳಿತಾರೂಢ ‘ಬಿ.ಎನ್.ಪಿ.’ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ 1996 ರಲ್ಲಿ ನಡೆದ ಗಂಗಾ ನೀರು ಹಂಚಿಕೆ ಒಪ್ಪಂದವು ಇದೇ ವರ್ಷದ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಬಾಂಗ್ಲಾದೇಶಕ್ಕೆ ಗಂಗಾ ನದಿಯು (ಅಲ್ಲಿ ಅದನ್ನು ಪದ್ಮಾ ಎಂದು ಕರೆಯಲಾಗುತ್ತದೆ) ಕೃಷಿ, ಜೀವವೈವಿಧ್ಯ ಮತ್ತು ನೀರು ಸರಬರಾಜಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ ಎಂದು ಪರಿಗಣಿಸಲಾಗಿದೆ.
ಢಾಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಲಂಗೀರ್, ಹೊಸ ಒಪ್ಪಂದವು ಬಾಂಗ್ಲಾದೇಶದ ಜನರ ಅಗತ್ಯತೆಗಳು ಮತ್ತು ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕು ಎಂಬ ಸ್ಪಷ್ಟ ಸಂದೇಶವನ್ನು ಬಾಂಗ್ಲಾದೇಶವು ಭಾರತಕ್ಕೆ ನೀಡಲು ಬಯಸುತ್ತದೆ ಎಂದು ಹೇಳಿದರು. ಹೊಸ ಒಪ್ಪಂದ ಏರ್ಪಡುವವರೆಗೆ ಪ್ರಸ್ತುತ ಇರುವ ಒಪ್ಪಂದವನ್ನೇ ಮುಂದುವರಿಸಬೇಕು. ಭವಿಷ್ಯದ ನೀರು ಹಂಚಿಕೆ ಒಪ್ಪಂದಗಳು ಯಾವುದೇ ನಿರ್ದಿಷ್ಟ ಸಮಯದ ಮಿತಿಗೆ ಒಳಪಟ್ಟಿರಬಾರದು ಎಂದೂ ಅವರು ಸಲಹೆ ನೀಡಿದರು.
ಭಾರತವು, ಉಭಯ ದೇಶಗಳ ನಡುವಿನ ನೀರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಸ್ಥಾಪಿತ ದ್ವಿಪಕ್ಷೀಯ ವ್ಯವಸ್ಥೆಯ ಮೂಲಕ ನಿಯಮಿತವಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!