ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಒಬ್ಬನೇ ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ಅವರನ್ನು ಕೊಲ್ಲುತ್ತೇವೆ !

ಬಂಗಾಳದಲ್ಲಿ ಬಾಬರಿಯ ಅಡಿಪಾಯ ಹಾಕಿದ ಹುಮಾಯೂ ಕಬೀರ್‌ ಅವರಿಂದ ಬಾಂಗ್ಲಾದೇಶಿ ಟಿವಿ ವಾಹಿನಿಯಲ್ಲಿ ಬೆದರಿಕೆ

ಶುಭೇಂದು ಅಧಿಕಾರಿ ಮತ್ತು ಹುಮಾಯೂನ್ ಕಬೀರ್

ಕೋಲಕಾತಾ (ಬಂಗಾಳ) – ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಅಡಿಪಾಯ ಹಾಕಿದ ಶಾಸಕ ಹುಮಾಯೂ ಕಬೀರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಬಾಂಗ್ಲಾದೇಶಿ ಟಿವಿ ವಾಹಿನಿ ‘ಫೇಸ್ ದ ಪೀಪಲ್’ಗೆ ನೀಡಿದ ಸಂದರ್ಶನದಲ್ಲಿ ಕಬೀರ್ ಅವರು, ಒಂದೊಮ್ಮೆ ಶುಭೇಂದು ಅವರು ಒಬ್ಬನೇ ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಹೊರಬಂದ ನಂತರ, ಈ ವಿಡಿಯೋಗೆ ಬಾಂಗ್ಲಾದೇಶದ ಅನೇಕ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಇನ್ಶಾಅಲ್ಲಾ (ಅಲ್ಲಾನ ಇಚ್ಛೆಯಿದ್ದರೆ…) ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಂಪಾದಕೀಯ ನಿಲುವು

ಹುಮಾಯೂ ಕಬೀರ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು ! ಇಂತಹವರಿಗೆ ಮುಕ್ತವಾಗಿ ಬಿಟ್ಟರೆ, ಅವರು ಮುಂದೆ ಪ್ರತ್ಯಕ್ಷವಾಗಿ ವಿಧ್ವಂಸಕ ಕೃತ್ಯಗಳನ್ನು ಎಸಗಬಹುದು !