ಹಿಂದೂಗಳ ನರಮೇಧ ನಡೆಸುವ ಪಾಕಿಸ್ತಾನದ ಬೊಬ್ಬೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಸರಕಾರವು ಕಾಶ್ಮೀರದಲ್ಲಿ ಜನಸಂಖ್ಯಾಶಾಸ್ತ್ರೀಯ ಬದಲಾವಣೆಯನ್ನು ಮಾತ್ರ ಮಾಡುತ್ತಿಲ್ಲ, ಜೊತೆಗೆ ಉರ್ದು ಭಾಷೆ ಮತ್ತು ಮುಸ್ಲಿಮರ ಸಂಸ್ಕೃತಿಯನ್ನೂ ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಉರ್ದು ಭಾಷೆಯು ಇಡೀ ಭಾರತೀಯ ಉಪಖಂಡದಲ್ಲಿ ಮತ್ತು ವಿಶೇಷವಾಗಿ ಮುಸ್ಲಿಮರ ಹಂಚಿಕೆಯ ಗುರುತಾಗಿದೆ. ಭಾರತವು ಇದರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಜಗತ್ತು ಈ ಬಗ್ಗೆ ಗಮನ ಹರಿಸಬೇಕು. ಪಾಕಿಸ್ತಾನವು ಯಾವಾಗಲೂ ಇದಕ್ಕಾಗಿ ಧ್ವನಿ ಎತ್ತುತ್ತಲೇ ಇರುತ್ತದೆ; ಆದರೆ ಜಗತ್ತು ಕೂಡ ಇದರ ಬಗ್ಗೆ ಮೌನವಾಗಿರುವಂತಿಲ್ಲ. ಕಾಶ್ಮೀರದಲ್ಲಿ ಭಾರತದ ಹಸ್ತಕ್ಷೇಪ ಕಾನೂನುಬಾಹಿರವಾಗಿದೆ ಎಂದು ಪಾಕಿಸ್ತಾನ ಮತ್ತೊಮ್ಮೆ ಆರೋಪಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ ಅವರು ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಕಾಶ್ಮೀರದ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಮೇಲಿನ ಉತ್ತರ ನೀಡಿದ್ದಾರೆ.
ಮುಸಲ್ಮಾನರು ಹಂದಿಗಳಂತೆ ಮಕ್ಕಳನ್ನು ಹೆರುತ್ತಾರೆ ಎಂಬ ಭಾಜಪ ನಾಯಕಿಯ ಹೇಳಿಕೆಗೆ ಖಂಡನೆ!
ಉತ್ತರ ಪ್ರದೇಶದ ಭಾಜಪ ನಾಯಕಿ ಗೀತಾ ತ್ಯಾಗಿ ಅವರ ‘ಮುಸಲ್ಮಾನರು ಜಿಹಾದ್ ಮಾಡುತ್ತಾರೆ ಮತ್ತು ಹಂದಿಗಳಂತೆ ಮಕ್ಕಳನ್ನು ಹೆರುತ್ತಾರೆ’ ಎಂಬ ಕಥಿತ ಹೇಳಿಕೆಯ ಕುರಿತು ಪತ್ರಕರ್ತರು ತಾಹಿರ್ ಅವರನ್ನು ಪ್ರಶ್ನಿಸಿದಾಗ, ಇಂತಹ ಪದಗಳ ಬಳಕೆ ಅತ್ಯಂತ ತಪ್ಪು ಮತ್ತು ಖಂಡನೀಯ ಎಂದರು. ಗೀತಾ ತ್ಯಾಗಿ ಅವರು ಭಾರತದ ಪ್ರಸ್ತುತ ಆಡಳಿತ ಪಕ್ಷ ಭಾಜಪಗೆ ಸೇರಿದವರಾಗಿದ್ದಾರೆ. ಈ ಹೇಳಿಕೆ ಅವರದ್ದು ಮಾತ್ರವಲ್ಲ, ಬದಲಾಗಿ ಭಾಜಪ ಮತ್ತು ಸಂಘದ ಮುಸ್ಲಿಮರ ಬಗೆಗಿನ ವಿಚಾರಗಳನ್ನು ತೋರಿಸುತ್ತದೆ. ಇದು ಸ್ಪಷ್ಟವಾಗಿ ದ್ವೇಷದ ಭಾಷಣವಾಗಿದೆ ಮತ್ತು ಭಾರತೀಯ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ಜಾಗತಿಕ ಸಂಸ್ಥೆಗಳು ಮುಂದೆ ಬರಬೇಕು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers