ಯುವತಿಯ ಕುತ್ತಿಗೆಯಲ್ಲಿದ್ದ ತುಳಸಿ ಮಾಲೆ ಮತ್ತು ಮಣಿಕಟ್ಟಿನಲ್ಲಿದ್ದ ದಾರವನ್ನು ಕತ್ತರಿಸಿದ!
ಆರೋಪಿಗೆ ೫ ದಿನಗಳ ಪೊಲೀಸ್ ಕಸ್ಟಡಿ

ನಾಸಿಕ – ಇಲ್ಲಿನ ಪಂಚವಟಿ ಭಾಗದ ಯುವತಿಯೊಬ್ಬಳಿಗೆ ‘ಗಜ್ವಾ-ಎ-ಹಿಂದ್’ (‘ಗಜ್ವಾ-ಎ-ಹಿಂದ್’ ಅಂದರೆ ಭಾರತವನ್ನು ಇಸ್ಲಾಮೀಕರಣಗೊಳಿಸಲು ನಡೆಸುವ ಯುದ್ಧ) ಬಗ್ಗೆ ಹೇಳಿ, ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಲಾಯಿತು. ಶಂಕಿತ ಆರೋಪಿ ತಂಜೀರ್ ಇನಾಮದಾರ್ ಎಂಬಾತ ಆಕೆಗೆ ಬಲವಂತವಾಗಿ ಸಿಗರೇಟ್ ಮತ್ತು ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಕೆಯನ್ನು ಮತಾಂತರಗೊಳ್ಳುವಂತೆ ಪ್ರೇರೇಪಿಸಿದನು. ಆರೋಪಿಯು ಆಕೆಯ ಕುತ್ತಿಗೆಯಲ್ಲಿದ್ದ ತುಳಸಿ ಮಾಲೆ ಮತ್ತು ಮಣಿಕಟ್ಟಿಗೆ ಕಟ್ಟಿದ್ದ ದಾರವನ್ನು ಕತ್ತರಿಸಿದ್ದಾನೆ. ೨೦೨೬ರ ಜನವರಿಯಲ್ಲಿ, ಆರೋಪಿಯು ಸಂತ್ರಸ್ತೆಯ ಕುತ್ತಿಗೆಯ ಮೇಲೆ ಕಚ್ಚಿ ಅದು ‘ಲವ್ ಬೈಟ್’ (ಪ್ರೇಮದ ಗುರುತು) ಎಂದು ಹೇಳಿ, ಆಕೆಯೊಂದಿಗೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದನು. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಆರೋಪಿ ತಂಜೀರ್ ಇನಾಮದಾರ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ೫ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ