ನಾಸಿಕನಲ್ಲಿ ‘ಗಜ್ವಾ-ಎ-ಹಿಂದ್’ ಬಗ್ಗೆ ಹೇಳಿ, ಮತಾಂಧನಿಂದ ಹಿಂದೂ ಯುವತಿಯ ಮೇಲೆ ಮತಾಂತರಕ್ಕಾಗಿ ಒತ್ತಡ! – Nashik Ghazwa e Hind

  • ಯುವತಿಯ ಕುತ್ತಿಗೆಯಲ್ಲಿದ್ದ ತುಳಸಿ ಮಾಲೆ ಮತ್ತು ಮಣಿಕಟ್ಟಿನಲ್ಲಿದ್ದ ದಾರವನ್ನು ಕತ್ತರಿಸಿದ!

  • ಆರೋಪಿಗೆ ೫ ದಿನಗಳ ಪೊಲೀಸ್ ಕಸ್ಟಡಿ

ನಾಸಿಕ – ಇಲ್ಲಿನ ಪಂಚವಟಿ ಭಾಗದ ಯುವತಿಯೊಬ್ಬಳಿಗೆ ‘ಗಜ್ವಾ-ಎ-ಹಿಂದ್’ (‘ಗಜ್ವಾ-ಎ-ಹಿಂದ್’ ಅಂದರೆ ಭಾರತವನ್ನು ಇಸ್ಲಾಮೀಕರಣಗೊಳಿಸಲು ನಡೆಸುವ ಯುದ್ಧ) ಬಗ್ಗೆ ಹೇಳಿ, ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಲಾಯಿತು. ಶಂಕಿತ ಆರೋಪಿ ತಂಜೀರ್ ಇನಾಮದಾರ್ ಎಂಬಾತ ಆಕೆಗೆ ಬಲವಂತವಾಗಿ ಸಿಗರೇಟ್ ಮತ್ತು ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಕೆಯನ್ನು ಮತಾಂತರಗೊಳ್ಳುವಂತೆ ಪ್ರೇರೇಪಿಸಿದನು. ಆರೋಪಿಯು ಆಕೆಯ ಕುತ್ತಿಗೆಯಲ್ಲಿದ್ದ ತುಳಸಿ ಮಾಲೆ ಮತ್ತು ಮಣಿಕಟ್ಟಿಗೆ ಕಟ್ಟಿದ್ದ ದಾರವನ್ನು ಕತ್ತರಿಸಿದ್ದಾನೆ. ೨೦೨೬ರ ಜನವರಿಯಲ್ಲಿ, ಆರೋಪಿಯು ಸಂತ್ರಸ್ತೆಯ ಕುತ್ತಿಗೆಯ ಮೇಲೆ ಕಚ್ಚಿ ಅದು ‘ಲವ್ ಬೈಟ್’ (ಪ್ರೇಮದ ಗುರುತು) ಎಂದು ಹೇಳಿ, ಆಕೆಯೊಂದಿಗೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದನು. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಆರೋಪಿ ತಂಜೀರ್ ಇನಾಮದಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ೫ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ಸಂಪಾದಕೀಯ ನಿಲುವು

  • ‘ಗಜ್ವಾ-ಎ-ಹಿಂದ್’ಗಾಗಿ ಮತಾಂಧರು ಯಾವ ಮಟ್ಟಕ್ಕೆ ಹೋಗಬಹುದು, ಇದು ಇದರಿಂದ ಗಮನಕ್ಕೆ ಬರುತ್ತದೆ!
  • ತುಳಸಿ ಮಾಲೆ ಮತ್ತು ದಾರವನ್ನು ಕತ್ತರಿಸಲು ಬಿಡುವುದು ಎಂದರೆ, ಹಿಂದೂತ್ವವನ್ನು ನಾಶಪಡಿಸುವ ಆಯುಧವನ್ನು ಮತಾಂಧರ ಕೈಗೆ ನೀಡಿ, ತಾವೇ ಸ್ಮಶಾನಮೌನದಂತೆ ವರ್ತಿಸುವುದಾಗಿದೆ. ಇಂತಹ ಕೃತ್ಯಗಳನ್ನು ಎಸಗುವ ಮತಾಂಧರಿಂದ ಹಿಂದೂ ಯುವತಿಯರು ಎಚ್ಚರವಾಗಿರಬೇಕು!