ದೇವದ (ಪನವೇಲ)ದಲ್ಲಿನ ಸನಾತನದ ಆಶ್ರಮದಲ್ಲಿ ಆನಂದೋತ್ಸವ

ದೇವದ (ಪನವೇಲ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆಯಿರುವ ಹಾಗೆಯೇ ಸನಾತನದ ೧೦೩ ನೇ ದಿವಗಂತ ಪೂ. ಸದಾಶಿವ ಸಾಮಂತ ಅಜ್ಜನವರ ಪತ್ನಿ ಶ್ರೀಮತಿ ದಿನಪ್ರಭಾ ಸಾಮಂತಅಜ್ಜಿ (ವಯಸ್ಸು ೮೩ ವರ್ಷ) ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನ ಸಂಸ್ಥೆಯ ೧೩೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು, ಈ ಆನಂದದಾಯಕ ಸುದ್ದಿಯನ್ನು ಸನಾತನದ ಪೂ. (ಸೌ.) ಅಶ್ವಿನಿ ಪವಾರ ಇವರು ೩ ಫೆಬ್ರುವರಿಯಂದು ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತ ಸಾಧಕರಿಗೆ ನೀಡಿದರು. ಆ ಸಮಯದಲ್ಲಿ ಎಲ್ಲ ಸಾಧಕರ ಭಾವಜಾಗೃತವಾಯಿತು. ಪೂ. (ಸೌ.) ಅಶ್ವಿನಿ ಪವಾರ ಇವರು ಪೂ. (ಶ್ರೀಮತಿ) ದಿನಪ್ರಭಾ ಸಾಮಂತಅಜ್ಜಿಯವರಿಗೆ ಪುಷ್ಪಹಾರವನ್ನು ಅರ್ಪಿಸಿ ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಆಶ್ರಮಜೀವನದಲ್ಲಿನ ಹಾಗೆಯೇ ಪೂರ್ವಜೀವನದ ಪ್ರಸಂಗಗಳನ್ನು ಹೇಳಿ ‘ಆ ಪ್ರಸಂಗಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯನ್ನು ಹೇಗೆ ಅನುಭವಿಸಿದರು’, ಎಂಬುದನ್ನು ಎಲ್ಲರಿಗೂ ಹೇಳಿದರು. ಈ ಕಾರ್ಯಕ್ರಮದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಸಮತೋಲನದಲ್ಲಿಟ್ಟು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಬೇಕು ? ಎಂಬುದು ಸಾಧಕರಿಗೆ ಕಲಿಯಲು ಸಿಕ್ಕಿತು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !