ದೇವದ (ಪನವೇಲ)ದಲ್ಲಿನ ಸನಾತನದ ಆಶ್ರಮದಲ್ಲಿ ಆನಂದೋತ್ಸವ

ದೇವದ (ಪನವೇಲ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆಯಿರುವ ಹಾಗೆಯೇ ಸನಾತನದ ೧೦೩ ನೇ ದಿವಗಂತ ಪೂ. ಸದಾಶಿವ ಸಾಮಂತ ಅಜ್ಜನವರ ಪತ್ನಿ ಶ್ರೀಮತಿ ದಿನಪ್ರಭಾ ಸಾಮಂತಅಜ್ಜಿ (ವಯಸ್ಸು ೮೩ ವರ್ಷ) ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನ ಸಂಸ್ಥೆಯ ೧೩೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು, ಈ ಆನಂದದಾಯಕ ಸುದ್ದಿಯನ್ನು ಸನಾತನದ ಪೂ. (ಸೌ.) ಅಶ್ವಿನಿ ಪವಾರ ಇವರು ೩ ಫೆಬ್ರುವರಿಯಂದು ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತ ಸಾಧಕರಿಗೆ ನೀಡಿದರು. ಆ ಸಮಯದಲ್ಲಿ ಎಲ್ಲ ಸಾಧಕರ ಭಾವಜಾಗೃತವಾಯಿತು. ಪೂ. (ಸೌ.) ಅಶ್ವಿನಿ ಪವಾರ ಇವರು ಪೂ. (ಶ್ರೀಮತಿ) ದಿನಪ್ರಭಾ ಸಾಮಂತಅಜ್ಜಿಯವರಿಗೆ ಪುಷ್ಪಹಾರವನ್ನು ಅರ್ಪಿಸಿ ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಆಶ್ರಮಜೀವನದಲ್ಲಿನ ಹಾಗೆಯೇ ಪೂರ್ವಜೀವನದ ಪ್ರಸಂಗಗಳನ್ನು ಹೇಳಿ ‘ಆ ಪ್ರಸಂಗಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯನ್ನು ಹೇಗೆ ಅನುಭವಿಸಿದರು’, ಎಂಬುದನ್ನು ಎಲ್ಲರಿಗೂ ಹೇಳಿದರು. ಈ ಕಾರ್ಯಕ್ರಮದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಸಮತೋಲನದಲ್ಲಿಟ್ಟು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಬೇಕು ? ಎಂಬುದು ಸಾಧಕರಿಗೆ ಕಲಿಯಲು ಸಿಕ್ಕಿತು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !