ಸಾಧಕರೇ, ಜಿಜ್ಞಾಸುಗಳು ‘ನಮ್ಮವರು’ ಆದ ಮೇಲೆ ಅಲ್ಲ, ‘ನಮ್ಮವರನ್ನಾಗಿ ಮಾಡಲು’ ಅವರನ್ನು ತಕ್ಷಣ ವಾಚಕರನ್ನಾಗಿ ಮಾಡಿರಿ !

‘ಜಿಜ್ಞಾಸುಗಳನ್ನು ಸಾಧನೆಯತ್ತ ಹೊರಳಿಸಲು ಮತ್ತು ಧರ್ಮಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿಯಲ್ಲಿ ತೊಡಗಿಸಲು ಅತ್ಯುತ್ತಮ ಮಾಧ್ಯಮವೆಂದರೆ ನಿಯತಕಾಲಿಕೆ ಸನಾತನ ಪ್ರಭಾತ ! ಈ ನಿಯತಕಾಲಿಕೆಯನ್ನು ನಿಯಮಿತವಾಗಿ ಓದಿ ವಾಚಕರಲ್ಲಿ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಪ್ರೀತಿ ಹೆಚ್ಚಾಗುತ್ತಿದೆ. ‘ಈ ಸಂಚಿಕೆಯನ್ನು ಓದುವುದರಿಂದ ನಮಗೆ ಮುಂದಿನ ದಿಶೆ ಮತ್ತು ಮಾರ್ಗದರ್ಶನ ಸಿಗುತ್ತದೆ’, ಎಂದು ಕೆಲವು ವಾಚಕರು ಸ್ವಯಂಸ್ಫೂರ್ತಿಯಿಂದ ಹೇಳುತ್ತಾರೆ. ಹೀಗಿದ್ದರೂ ‘ಮೊದಲನೇ ಭೇಟಿಯಲ್ಲಿಯೇ ಜಿಜ್ಞಾಸುಗಳಿಗೆ ವಾಚಕರಾಗಲು ಹೇಗೆ ಹೇಳಲಿ ? ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸಿದ ನಂತರ ವಾಚಕರಾಗಲು ಪ್ರೇರೇಪಿಸೋಣ’, ಎಂದು ಅನೇಕ ಸಾಧಕರಿಗೆ ಅನಿಸುತ್ತದೆ. ಆದ್ದರಿಂದ ಆ ಜಿಜ್ಞಾಸುಗಳಿಗೆ ವಾಚಕರನ್ನಾಗಿ ಮಾಡಲು ತಕ್ಷಣವೇ ಪ್ರಯತ್ನಿಸುವುದಿಲ್ಲ.

ನಮ್ಮ ಅಯೋಗ್ಯ ವಿಚಾರಪ್ರಕ್ರಿಯೆಯಿಂದ ಜಿಜ್ಞಾಸುಗಳು ಅಮೂಲ್ಯ ಸತ್ಸಂಗಗಳಿಂದ ವಂಚಿತರಾಗಬಾರದು, ಎಂದು ಎಲ್ಲೆಡೆಯಲ್ಲಿನ ಸಾಧಕರು ಜಿಜ್ಞಾಸುಗಳನ್ನು ವಾಚಕರನ್ನಾಗಿಸಲು ಮೊದಲ ಭೇಟಿಯಿಂದಲೇ ಪ್ರಯತ್ನಿಸಬೇಕು.  (೨೩.೧.೨೦೨೬)